Sunday, September 18, 2022

ಮೋದಿ ಜನ್ಮ ದಿನಾಚರಣೆ ಹಿನ್ನೆಲೆ ದೇಶ ರಕ್ಷಕ ಪಡೆಯಿಂದ ರಕ್ತದಾನ ಶಿಬಿರ

 




ಈ‌ ದಿವಸ ವಾರ್ತೆ

ವಿಜಯಪುರ: ದೇಶ ರಕ್ಷಕರ ಪಡೆ ಆಕಾಶ ರಕ್ತ ಸಹಾಯವಾಣಿ ವತಿಯಿಂದ ವಿಜಯಪುರ ರಕ್ತ ನಿಧಿ ಕೇಂದ್ರ ಸಹಯೋಗಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರ 73 ನೆ ಜನ್ಮದಿನದ ಪ್ರಯುಕ್ತ ನಗರದ ಡೋಬಳೆ ಗಲ್ಲಿ ಈಶ್ವರ ಮಂದಿರ ದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು .



ಖ್ಯಾತ ಮಧುಮೇಹ ತಜ್ಞರಾದ ಬಾಬು ರಾಜೇಂದ್ರ ನಾಯಿಕ , ಸಮಾಜಸೇವಕರು ಶ್ರೀಶೈಲ ಹುಟಗಿ ಮತ್ತು ಖ್ಯಾತ ಉದ್ಯಮಿ ವಿಜಯ ಚವ್ಹಾಣ ಅವರು ಈ ಕಾರ್ಯಕ್ರಮಕ್ಕೆ ಭೇಟಿ ನೀಡಿ, ದೇಶದ ಕಣ್ಮಣಿಗಳಾದ ನಮ್ಮಯುವಕರೇ ನಮ್ಮ ಸಂಸ್ಕೃತಿ ಸಂಪ್ರದಾಯ ಉಳಿಸಲು ಸಾಧ್ಯ. ಆದ್ದರಿಂದ ಜಗಮೆಚ್ಚಿದ ದೇಶ ಕಂಡ ಅದ್ಭುತ ಪ್ರಧಾನಿ ನರೇಂದ್ರ ಮೋದಿ ಯವರ ಜನ್ಮದಿನದ ಪ್ರಯುಕ್ತ ಇಂತಹ ಶಿಬಿರ ಆಯೋಜಿಸಿ ನಿಮ್ಮ ಸಾಮಾಜಿಕ ಜವಾಬ್ದಾರಿಯ ದರ್ಶನ ಮಾಡಿದ್ದೀರಿ ದೇಶ ರಕ್ಷಕರ ಪಡೆ ಸಂಘಟನೆ ಇನ್ನು ಬೆಳಿಯಲಿ ಇನ್ನು ಹೆಚ್ಚಿನ ಸಾಮಾಜಿಕ ಕೆಲಸ ಮಾಡಲು ಇನ್ನು ಹೆಚ್ಚಿನ ಶಕ್ತಿ ನಿಮಗೆ ದೊರೆಯಲಿ ಎಂದು ಹಾರೈಸಿದರು . ಈ ಸಂಧರ್ಭದಲ್ಲಿ ಸಂಘಟನೆಯ ದೇಶ ರಕ್ಷರ ಪಡೆ ಸಂಸ್ಥಾಪಕರಾದ ರೋಹನ ಆಪ್ಟೆ ಪದಾಧಿಕಾರಿಗಳಾದ ನ್ಯಾಯವಾದಿ ಅಜಯ ಸೂರ್ಯವಂಶಿ , ವಿಕ್ರಮ ತಾಂಬೇಕರ , ಪ್ರೇಮ ಕಲಕುಟಗಿ , ಕಿರಣ ಕೊಳುರಗಿ,ರಾಹುಲ ಪಾಟೀಲ , ಆದಿತ್ಯ ಬಡಿಗೇರ, ಸಿದ್ದು ಬರಗಿ , ಮಹಿಳಾ ಪಡೆ ಘಟಕದ ವಸುಂಧರಾ ದೇಶಪಾಂಡೆ, ಶ್ವೇತಾ ಕುಲಕರ್ಣಿ ,  ರಿಶಿತಾ ನಿಕ್ಕಮ ಜಯಶ್ರೀ ಕನ್ನೂರ ಸವಿತಾ ತಳವಾರ ಉಪಸ್ಥಿತರಿದ್ದರು.

No comments:

Post a Comment