Thursday, June 11, 2026

ಅಭಿವೃದ್ಧಿ ಯೋಜನೆಗಳ ಜಾಗೃತಿ ಪತ್ರಕರ್ತರ ಆದ್ಯ ಕರ್ತವ್ಯ: ಯಡಳ್ಳಿ


ವಿಜಯಪುರ: ಮಕ್ಕಳ ಆರೋಗ್ಯ, ಶಿಕ್ಷಣ, ಸುರಕ್ಷತೆ ಮತ್ತಿತರ ಅಭಿವೃದ್ಧಿ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಪತ್ರಕರ್ತರ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಪತ್ರಕರ್ತರು ಮಕ್ಕಳು ಹಾಗೂ ಸಮಾಜದ ಹಿತದೃಷ್ಟಿಯಿಂದ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕಾನಿಪ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ ಹೇಳಿದರು.

ನಗರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಹೈದರಾಬಾದ್‍ನ ಯುನಿಸೆಫ್ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡ ಮಕ್ಕಳ ವಿಷಯಗಳ ಕುರಿತು ಕರ್ನಾಟಕ ರಾಜ್ಯದ ಪತ್ರಕರ್ತರಿಗೆ ಪರಿಚಯ ವಿಷಯದಡಿ ಕಿಶೋಧರ ಆರೋಗ್ಯ ಮತ್ತು ಪೌಷ್ಟಿಕತೆ, ಸಾಂಕ್ರಾಮಿಕವಲ್ಲದ ರೋಗಗಳು, ಆರೋಗ್ಯಕರ ಆಹಾರ ಪದ್ಧತಿ ಹಾಗೂ ರಸ್ತೆ ಸುರಕ್ಷತೆ ಕುರಿತ ಎರಡನೇ ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪತ್ರಕರ್ತರು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಯುನಿಸೆಫ್ ಮಕ್ಕಳಿಗಾಗಿ ಜಗತ್ತಿನಾದ್ಯಂತ ಸಕ್ರಿಯ ಕೆಲಸ ಮಾಡುತ್ತಿದೆ. ಮಕ್ಕಳ ಆರೋಗ್ಯ, ಶಿಕ್ಷಣ, ಸುರಕ್ಷತೆ ಇನ್ನಿತರ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಒಬ್ಬ ಪತ್ರಕರ್ತನಿಗೆ ಈ ಕಾರ್ಯಾಗಾರ ನೀಡುವುದರಿಂದ ಒಂದು ಲಕ್ಷ ಜನರಿಗೆ ಮಾಹಿತಿ ತಲುಪಿಸಿದಂತೆ ಆಗಲಿದೆ. ಒತ್ತಡದ ನಡುವೆಯೂ ನೀವೆಲ್ಲ ಕಾರ್ಯಾಗಾರಕ್ಕೆ ಬಂದಿದ್ದು ಖುಷಿ ತಂದಿದೆ. ಮಾಧ್ಯಮ ಬದಲಾಗಿದೆ. ಆದರೂ ಬದಲಾವಣೆ ಮಾಧ್ಯಮದಿಂದಲೇ ಸಾಧ್ಯ. ಇಂದು ರೀಲ್ಸ್ ಯುಗ ಬಂದಿದೆ. ಜನರಿಗೆ ಕೇಳಿಸಿಕೊಳ್ಳುವ ವ್ಯವಧಾನ ಇಲ್ಲ. ತಪ್ಪು ಮಾಹಿತಿ ನೀಡಿದರೂ ನಾವು ಸರಿಯಾದ ವಿಷಯ ಬರೆಯಬೇಕು ಎಂದರು.

ಎರಡು ದಿನದ ಕಾರ್ಯಾಗಾರ ಬಗ್ಗೆ ಪತ್ರಕರ್ತರು ತಮ್ಮ ಅನುಭವ ಹಂಚಿಕೊಂಡರು.

ಯುನಿಸೆಫ್ ಪ್ರತಿನಿಧಿ ಪ್ರಶೂನ್ ಸೇನ್, ಮೈಸೂರು ವಿವಿಯ ಸ್ವಪ್ನ ಎಂ.ಎಸ್., ಡಾ.ರಾಕೇಶ್, ಮಂಜುನಾಥ ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


ಅಖಿಲ ಕರ್ನಾಟಕ ಜೊತಿಷಿಗಳ ಒಕ್ಕೂಟ : ಅಧ್ಯಕ್ಷರಾಗಿ ಗುರುರಾಜ ಆಚಾರ್ಯ ಆಯ್ಕೆ

 

ಅಖಿಲ ಕರ್ನಾಟಕ ಜೊತಿಷಿಗಳ ಒಕ್ಕೂಟ : ಅಧ್ಯಕ್ಷರಾಗಿ ಗುರುರಾಜ ಆಚಾರ್ಯ ಆಯ್ಕೆ

ವಿಜಯಪುರ : ಅಖಿಲ ಕರ್ನಾಟಕ ಜೊತಿಷಿಗಳ ಒಕ್ಕೂಟದ ನೂತನ ರಾಜ್ಯಾಧ್ಯಕ್ಷರಾಗಿ ವಿಜಯಪುರದ ಶ್ರೀ ಸಾಕ್ಷಿ ಪಂಚಾಂಗ ಕರ್ತ ಗುರುರಾಜ ಆಚಾರ್ಯ ಹೆರಕಲ್ಲ, ಉಪಾಧ್ಯಕ್ಷರಾಗಿ ಚಿದಂಬರ ಪಂಚಾಂಗ ಸಹಾಯಕ ಪಂಚಾಂಗ ಕರ್ತ ಭುಜಂಗಶರ್ಮಾ ವಿ.ಜೋಷಿ ಆಯ್ಕೆಯಾಗಿದ್ದಾರೆ.

ಧಾರವಾಡದಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಭೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಡಾ.ಆನಂದ ಹಂದಿಗೋಳ, ಪೆÇ್ರ.ಶ್ರೀಕಾಂತ ಮಂಗಸೂಳಿ, ವಾಸ್ತು ತಜ್ಞ ಸುರೇಶ ಕೊಪ್ಪರ ಸೇರಿದಂತೆ ನಿರ್ದೇಶಕ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಇದೇ ದಿ.13, ಶನಿವಾರ ದಂದು ನೂತನ ಅಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ವಿಜಯಪುರದಲ್ಲಿ ನಡೆಯಲಿದೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


Friday, June 5, 2026

ಸಾಧಕರನ್ನು ಪ್ರಶಸ್ತಿಗಳು ಹುಡುಕಿಕೊಂಡು ಬರಬೇಕು: ಚನ್ನಪ್ಪ ಕಟ್ಟಿ

ವಿಜಯಪುರ: ಪ್ರಶಸ್ತಿಗಳು ಸಾಧಕರನ್ನು ಹುಡುಕಿಕೊಂಡು ಬರಬೇಕೇ ವಿನಃ ಪ್ರಶಸ್ತಿಗಳ ಬೆನ್ನತ್ತಿ ಅವರು ಹೋಗಬಾರದು ಎಂದು ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ಹೇಳಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕಲಬುರಗಿಯ ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ, ದಲಿತ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡ ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ಪ್ರದಾನ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಪ್ರಶಸ್ತಿಯು ಲೇಖಕರ ಸಾಮಾಜಿ ಜವಾಬ್ದಾರಿಯನ್ನು ಹೆಚ್ಚಿಸುವುದಲ್ಲದೇ ಸಾಧಕರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಈಗಾಗಲೇ ಹಲವು ನಾಡಿನ ಖ್ಯಾತನಾಮ ಹಿರಿಯ ಲೇಖಕರಿಗೆ ಪ್ರಶಸ್ತಿಯನ್ನು ನೀಡಿ, ಅವರನ್ನು ಗೌರವಿಸಿದ್ದು ಕನ್ನಡ ನಾಡು, ನುಡಿಗೆ ಹಿರಿಮೆ ತಂದAತಾಗಿದೆ. ಕಳೆದ ೧೧ ವರ್ಷದ ಹಿಂದೆ ರಾಯಚೂರಿನಲ್ಲಿ ನಡೆದ ಸಮಾರಂಭದಲ್ಲಿ ನನಗೂ ಈ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ಸಂಗತಿ. ಸದ್ಯ ಈ ಪ್ರಶಸ್ತಿಯನ್ನು ಮತ್ತೊಬ್ಬ ಸಾಧಕಿಗೆ ಪ್ರದಾನ ಮಾಡುವ ಭಾಗ್ಯ ದೊರಕಿರುವುದು ಸಂತಸದ ಸಂಗತಿ ಎಂದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ವೆಂಕಟೇಶ ಮಾತನಾಡಿ, ಜವತ್ತಿನ ಜನರ ಬದುಕು ಸಂಕೀರ್ಣವಾಗಿದೆ. ಎಐ ತಂತ್ರಜ್ಞಾನವು ಮನುಷ್ಯನನ್ನು ಆಳುತ್ತಿದೆ. ಮನುಷ್ಯ ತಂತ್ರಜ್ಞಾನದ ಅಡಿಯಾಳಾಗಬಾರದು, ತಂತ್ರಜ್ಞಾನವೇ ಮನುಷ್ಯನ ಅಡಿಯಲ್ಲಿರಬೇಕು ಎಂದು ಹೇಳಿದರು.


ಮುಂಬರುವ ದಿನಗಳಲ್ಲಿ ಜನರು ಒಂದೆಡೆ ಸೇರಿ ಸಾಹಿತ್ಯ ಸಂಗೀತದAತಹ ಸಮಾರಂಭಗಳಿಗೆ ಬರುವುದು ತುಂಬಾ ವಿರಳವಾಗುವುದು. ಒಂದೆಡೆ ಸೇರಿ ಬದುಕಿನ ಕಷ್ಟ, ಸುಖಗಳನ್ನು ಹಂಚಿಕೊಳ್ಳುವ ಕಾಲ ಮರೆಯಾಗುವುದು. ಮನುಷ್ಯ ಒಂಟಿಯಾಗಿ ತಂತ್ರಜ್ಞಾನದ ಜೊತೆಗೆ ಯಾಂತ್ರಿಕ ಜೀವನ ನಡೆಸುತ್ತಾನೆ. ಇದರಿಂದ ಪಾರಾಗಲು ಪ್ರತಿಯೊಬ್ಬರು ಪುಸ್ತಕದೊಂದಿಗೆ ಜೀವನ ನಡೆಸಬೇಕು ಎಂದರು.
ಕಲಬುರಗಿ ವಿವಿಯ ಪ್ರೊ. ಎಚ್.ಟಿ. ಪೋತೆ ಮಾತನಾಡಿ, ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ನಾಡಿನ ಪ್ರತಿಷ್ಠ ಪ್ರಶಸ್ತಿಯಾಗಿದೆ. ನಾಡಿನ ನೈಜಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದು ವಾಡಿಕೆಯಾಗಿದೆ. ಈ ಹಿಂದೆ ಹಲವಾರು ನಾಡಿನ ಗಣ್ಯ ಸಾಹಿತಿಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸದ್ಯ ಸುಜಾತಾ ಚಲವಾದಿ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಮಹಿಳಾ ಸಬಲೀಕರಣಕ್ಕೆ ಒತ್ತುನೀಡಿದಂತಾಗಿದೆ. ದಲಿತ ಸಮುದಾಯದ ಮಹಿಳೆಯರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.
ಪ್ರೊ. ಮಲ್ಲೇಪುರಂ ವೆಂಕಟೇಶ ಅವರು ೭೫ ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭವನ್ನು ಸಾಂಸ್ಕೃತಿಕ ಹಬ್ಬದ ಪ್ರತೀಕವಾಗಿದೆ ಎಂದು ಬಣ್ಣಿಸಿದರು.
ಧಾರವಾಡ ಕರ್ನಾಟಕ ವಿವಿಯ ಪ್ರಾಧ್ಯಾಪಕ ಡಾ. ನಿಂಗಪ್ಪ ಮುದೇನೂರ ಉಪನ್ಯಾಸ ನೀಡಿ ಮಾತನಾಡಿ, ಡಾ. ಸುಜಾತಾ ಚಲವಾದಿ ಅವರ ಪ್ರಮುಖ ಕೃತಿಗಳಾದ ಲಚಮ್ಮವ್ವ ಮತ್ತು ಇತರೆ ಕಥೆಗಳು, ಕೊರಗು, ನಿರ್ಭಯಲ ಬೆರಗು, ಬುದ್ಧ ಇದ್ದನಲ್ಲಿ ಈ ಕೃತಿಗಳಲ್ಲಿರುವ ಸಾಹಿತ್ಯಿಕ ಮೌಲ್ಯಗಳನ್ನು ವಿಮರ್ಶಾತ್ಮಕವಾಗಿ ವಿವರಿಸಿ, ಲೇಖಕಿಯ ಬರಹದ ವಿಸ್ತಾರವನ್ನು ಮತ್ತು ಅವರ ಚಿಂತನಾ ಕ್ರಮವನ್ನು ಪರಿಚಯಿಸಿದರು.
ಇದೇ ಸಂದರ್ಭ ಲೇಖಕಿ ಡಾ. ಸುಜಾತಾ ಚಲವಾದಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಅಧ್ಯಕ್ಷ ಎಂ.ಎನ್. ಮದಭಾವಿ ಅಧ್ಯಕ್ಷತೆ ವಹಿಸಿದ್ದರು.
ಪ್ರೊ. ಮಲ್ಲೇಪುರಂ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ನಾಗರಾಜ, ಅನಿಲ ಹೊಸಮನಿ, ಅಭಿಷೇಕ ಚಕ್ರವರ್ತಿ, ಡಾ. ಎಂ.ಎA. ಪಡಶೆಟ್ಟಿ, ಶ್ರೀಕಾಂತ ಹೊಸಮನಿ, ರವಿ ಕಿತ್ತೂರ ಸೇರಿದಂತೆ ಇತರರು ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Tuesday, June 2, 2026

ಶಿವಾನಂದ ಪಾಟೀಲರಿಗೆ ಡಿಸಿಎಂ ಸ್ಥಾನ, ವೈದ್ಯಕೀಯ ಶಿಕ್ಷಣ ಖಾತೆ ನೀಡಲು ಆಗ್ರಹ


ವಿಜಯಪುರ : ಮಾಜಿ ಸಚಿವರು ಹಾಗೂ ಬಸವನ ಬಾಗೇವಾಡಿ ಕ್ಷೇತ್ರದ ಜನಪ್ರಿಯ ಶಾಸಕರಾದ ಶಿವಾನಂದ ಎಸ್ ಪಾಟೀಲ ಅವರಿಗೆ ನೂತನ ಸಚಿವ ಸಂಪುಟದಲ್ಲಿ ಡಿಸಿಎಂ ಸ್ಥಾನ ನೀಡಿ ವೈದ್ಯಕೀಯ ಶಿಕ್ಷಣ ಖಾತೆಯನ್ನು ನೀಡಬೇಕು ಎಂದು ಕನ್ನಡದ ಕಟ್ಟಾಳು ಗಂಗಾಧರ ಕೋರಳ್ಳಿ ಪ್ರತಿಷ್ಟಾನ ಸಂಚಾಲಕರಾದ ಅನಿಲ ಹೊಸಮನಿ ಹಾಗೂ ಕಾರ್ಯದರ್ಶಿ ಲಾಯಪ್ಪ ಇಂಗಳೆ ಆಗ್ರಹಿಸಿದ್ದಾರೆ.

ಈ ಹಿಂದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ರಾಜ್ಯದ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಸಲ್ಲಿಸಿದ್ದಾರೆ. ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ತಾಯಿ -ಮಕ್ಕಳ ಆಸ್ಪತ್ರೆ, ಟ್ರಾಮಾ ಸೆಂಟರ್ ಸೆಂಟರ್ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಜೊತೆಗೆ ಜಿಲ್ಲಾ ಆಸ್ಪತ್ರೆಗೆ ತಾಜಬಾವಡಿಯಿಂದ ನೀರಿನ ಸಂಪರ್ಕ ಒದಗಿಸಿ ರಾಜ್ಯದಲ್ಲಿ ಮಾದರಿ ಆಸ್ಪತ್ರೆಯಾಗಿ ಮೇಲದರ್ಜೆಗೆ ಏರಿಸಿದ್ದಾರೆ, ಜೊತೆಗೆ ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲಿ ವಿವಿಧ ಮೂಲಭೂತ ಸೌಲಭ್ಯ ಒದಗಿಸಿ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.

ಹಿಂದಿನ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ, ಕಬ್ಬು ಸಕ್ಕರೆ ಮತ್ತು ಜವಳಿ ಸಚಿವರಾಗಿ ರಾಜ್ಯ ಮತ್ತು ಜಿಲ್ಲೆಯಲ್ಲಿ ಹಲವು ರೈತಪರ, ಜನಪರ ಕೆಲಸ ಕಾರ್ಯಗಳನ್ನು ಮಾಡಿರುವ ಶಿವಾನಂದ ಪಾಟೀಲರಿಗೆ ನೂತನ ಸಚಿವ ಸಂಪುಟದಲ್ಲಿ ಕಾಂಗ್ರೆಸ್ ಹೈಕಮಾಂಡ್ ಉಪ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿ ವೈದ್ಯಕೀಯ ಶಿಕ್ಷಣ ಖಾತೆಯನ್ನು ನೀಡಬೇಕು ಎಂದು ಅವರು ಆಗ್ರಹಿಸಿದ ಅವರ ಸುಧೀರ್ಘ ರಾಜಕೀಯ ಅನುಭವ ರಾಜ್ಯದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಿಳಿಸಿದ್ದಾರೆ.

Sunday, May 10, 2026

ಮಕ್ಕಳು ತಂದೆ ತಾಯಿಯ ಮಾತು ಕೇಳಿದ್ದರೆ ; ವೃದ್ಧಾಶ್ರಮ ಅನಾಥವಾಗಿರುತ್ತಿದ್ದವು..!

 ಇಂದಿನ ಆಧುನಿಕ ಸಮಾಜದಲ್ಲಿ “ತಾಯಿ ದಿನ”, “ತಂದೆ ದಿನ”, “ಹಿರಿಯರ ದಿನ” ಎಂಬ ವಿಶೇಷ ಆಚರಣೆಗಳು ಬಹಳ ಜನಪ್ರಿಯವಾಗಿವೆ. ಆ ದಿನ ಮಕ್ಕಳಿಂದ ಪೋಷಕರಿಗೆ ಉಡುಗೊರೆಗಳು, ಶುಭಾಶಯಗಳು, ಪ್ರೀತಿಯ ಮಾತುಗಳು, ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕ ಪೋಸ್ಟ್ಗಳು ಹರಿದು ಬರುತ್ತವೆ. ಆದರೆ ಮನಸ್ಸಿಗೆ ನೋವು ಕೊಡುವ ಸತ್ಯ ಏನೆಂದರೆ, ಇದೇ ಪ್ರೀತಿ ಮತ್ತು ಕಾಳಜಿ ಪ್ರತಿದಿನ ತೋರಿಸಲ್ಪಟ್ಟಿದ್ದರೆ, ಇಂದು ನಮ್ಮ ಸಮಾಜದಲ್ಲಿ ಇಷ್ಟು ವೃದ್ಧಾಶ್ರಮಗಳ ಅಗತ್ಯವೇ ಉಂಟಾಗುತ್ತಿರಲಿಲ್ಲ.

 ತಾಯಿ-ತಂದೆಗಳು ಮಕ್ಕಳಿಗಾಗಿ ತಮ್ಮ ಸಂಪೂರ್ಣ ಜೀವನವನ್ನೇ ಅರ್ಪಿಸುತ್ತಾರೆ. ಮಗು ಹುಟ್ಟಿದ ಕ್ಷಣದಿಂದಲೇ ಅವರ ಕನಸು, ಸಂತೋಷ, ಭವಿಷ್ಯ ಎಲ್ಲವೂ ಮಗುವಿನ ಸುತ್ತಲೇ ತಿರುಗುತ್ತವೆ. ತಾಯಿ ತನ್ನ ನಿದ್ರೆಯನ್ನು ಬಿಟ್ಟು ಮಗುವಿನ ಅಳುವಿಗೆ ಸ್ಪಂದಿಸುತ್ತಾಳೆ. ತಂದೆ ತನ್ನ ಆಸೆಗಳನ್ನು ಬದಿಗಿಟ್ಟು ಮಗುವಿನ ವಿದ್ಯಾಭ್ಯಾಸ ಮತ್ತು ಭವಿಷ್ಯಕ್ಕಾಗಿ ದುಡಿಯುತ್ತಾನೆ. ಮಕ್ಕಳಿಗೆ ನೋವಾಗದಂತೆ ತಮ್ಮ ನೋವನ್ನು ಮರೆಮಾಡಿಕೊಳ್ಳುವವರು ಪೋಷಕರು. ಮಗುವಿನ ಒಂದು ನಗು ನೋಡಲು ಸಾವಿರ ಕಷ್ಟಗಳನ್ನು ಸಹಿಸುವ ಮಹಾನ್ ಹೃದಯಗಳು ಅವರದು.

 ಆದರೆ ಕಾಲ ಬದಲಾಗುತ್ತಾ, ಮಕ್ಕಳು ದೊಡ್ಡವರಾದ ನಂತರ ತಮ್ಮದೇ ಜೀವನದಲ್ಲಿ ಬ್ಯುಸಿಯಾಗುತ್ತಾರೆ. ಉದ್ಯೋಗ, ಹಣ, ವೈಭವ, ವೈಯಕ್ತಿಕ ಸ್ವಾತಂತ್ರ‍್ಯ ಇವೆಲ್ಲದರ ನಡುವೆ ಪೋಷಕರಿಗೆ ಸಮಯ ಕೊಡಲು ಮರೆತುಬಿಡುತ್ತಾರೆ. ಕೆಲವು ಮಕ್ಕಳು ವರ್ಷದಲ್ಲಿ ಒಂದು ದಿನ ಮಾತ್ರ “ಅಮ್ಮಾ, ಅಪ್ಪಾ ನೀವು ನನ್ನ ಜಗತ್ತು” ಎಂದು ಹೇಳುತ್ತಾರೆ. ಆದರೆ ಉಳಿದ ದಿನಗಳಲ್ಲಿ ಅವರ ಜೊತೆ ಮಾತನಾಡಲು ಸಹ ಸಮಯ ಕೊಡೋದಿಲ್ಲ. ಈ ಒಂದು ದಿನದ ಪ್ರೀತಿ ಪೋಷಕರ ಮನದ ಖಾಲಿತನವನ್ನು ತುಂಬಲಾರದು.

 ಇಂದು ಅನೇಕ ವೃದ್ಧಾಶ್ರಮಗಳಲ್ಲಿ ವಾಸಿಸುವ ಹಿರಿಯರು ಹಣಕ್ಕಾಗಿ ಅಲ್ಲ, ಪ್ರೀತಿಗಾಗಿ ಕಾಯುತ್ತಿದ್ದಾರೆ. ಅವರಿಗೆ ದುಬಾರಿ ಉಡುಗೊರೆಗಳು ಬೇಕಿಲ್ಲ. “ಊಟ ಮಾಡಿದ್ದೀರಾ?”, “ಔಷಧಿ ತೆಗೆದುಕೊಂಡಿರಾ?”, “ಹೇಗಿದ್ದೀರಾ?” ಎಂದು ಕೇಳುವ ಒಂದು ಆತ್ಮೀಯ ಧ್ವನಿ ಸಾಕು. ಆದರೆ ಈ ಮಾತುಗಳು ಕೇಳಿಸದೇ ಹೋದಾಗ, ಅವರ ಜೀವನದಲ್ಲಿ ಒಂಟಿತನ ಹೆಚ್ಚಾಗುತ್ತದೆ. ಮಕ್ಕಳು ಜೀವಂತವಾಗಿದ್ದರೂ, ಅವರ ನೆನಪುಗಳಲ್ಲಿ ಮಾತ್ರ ಬದುಕುವ ಪರಿಸ್ಥಿತಿ ಬರುತ್ತದೆ.

 ವೃದ್ಧಾಶ್ರಮಗಳ ಗೋಡೆಗಳು ಅನೇಕ ಮೌನ ಕಣ್ಣೀರಿನ ಕಥೆಗಳನ್ನು ಹೇಳುತ್ತವೆ. ಅಲ್ಲಿ ಇರುವ ಪ್ರತಿಯೊಬ್ಬ ತಂದೆ-ತಾಯಿಯ ಕಣ್ಣುಗಳಲ್ಲಿ ಒಂದೇ ಪ್ರಶ್ನೆ ಕಾಣುತ್ತದೆ. “ನಮ್ಮ ಮಕ್ಕಳಿಗಾಗಿ ಬದುಕಿದ್ದ ನಾವು, ಇಂದು ಏಕೆ ಅನಾಥರಂತೆ ಬದುಕಬೇಕು?” ಎಂಬುದು. ಈ ಪ್ರಶ್ನೆ ಕೇವಲ ಅವರದು ಮಾತ್ರವಲ್ಲ; ಅದು ಇಡೀ ಸಮಾಜದ ಮನಸ್ಸನ್ನು ಕಾಡುವ ಪ್ರಶ್ನೆಯಾಗಿದೆ.

 ಪ್ರೀತಿ ಎಂದರೆ ಕೇವಲ ಒಂದು ದಿನದ ಆಚರಣೆ ಅಲ್ಲ. ಅದು ಪ್ರತಿದಿನದ ವರ್ತನೆಯಲ್ಲಿ ಕಾಣಬೇಕು. ಪೋಷಕರ ಜೊತೆ ಕೆಲವು ಕ್ಷಣ ಕಳೆಯುವುದು, ಅವರ ಆರೋಗ್ಯದ ಕಡೆ ಗಮನ ಕೊಡುವುದು, ಅವರ ಮಾತುಗಳನ್ನು ಸಹನೆಯಿಂದ ಕೇಳುವುದು, ಅವರಿಗೆ ಒಂಟಿತನ ಅನ್ನಿಸದಂತೆ ನೋಡಿಕೊಳ್ಳುವುದು ಇವೆಲ್ಲವೇ ನಿಜವಾದ ಪ್ರೀತಿ ಮತ್ತು ಕಾಳಜಿ. ಮಕ್ಕಳು ಈ ಸಣ್ಣ ಸಣ್ಣ ವಿಷಯಗಳನ್ನು ಪ್ರತಿದಿನ ಪಾಲಿಸಿದ್ದರೆ, ಇಂದು ಅನೇಕ ವೃದ್ಧಾಶ್ರಮಗಳು ಖಾಲಿಯಾಗುತ್ತಿದ್ದವು.

 ಬಾಲ್ಯದಲ್ಲಿ ಮಗು ನಡೆಯಲು ಕಲಿತಾಗ ತಂದೆ ಕೈ ಹಿಡಿದಿದ್ದ. ಇಂದು ವಯಸ್ಸಾದ ತಂದೆ ನಡೆಯಲು ಕಷ್ಟಪಟ್ಟಾಗ ಮಗ ಕೈ ಹಿಡಿಯಬೇಕು. ತಾಯಿ ಬಾಲ್ಯದಲ್ಲಿ ಮಗು ತಿನ್ನದೇ ಇದ್ದರೆ ಕಥೆ ಹೇಳಿ ಊಟ ಮಾಡಿಸುತ್ತಿದ್ದಳು. ಇಂದು ಅದೇ ತಾಯಿಗೆ ಸಮಯಕ್ಕೆ ಔಷಧಿ ಕೊಡುವುದು ಮಗುವಿನ ಕರ್ತವ್ಯ. ಜೀವನದ ನಿಜವಾದ ಅರ್ಥ ಇದೇ ಪೋಷಕರು ನಮ್ಮನ್ನು ನೋಡಿಕೊಂಡAತೆ, ನಾವು ಅವರ ವಯಸ್ಸಿನಲ್ಲಿ ಅವರನ್ನು ನೋಡಿಕೊಳ್ಳಬೇಕು.

 ಹಿರಿಯರು ಮನೆಯ ಭಾರವಲ್ಲ; ಅವರು ಮನೆಯ ಆಶೀರ್ವಾದ. ಅವರ ಅನುಭವ ಜೀವನದ ದಾರಿ ತೋರಿಸುವ ದೀಪ. ಅವರ ಸಾನ್ನಿಧ್ಯ ಮನೆಯ ಶಾಂತಿ ಮತ್ತು ಸಂಸ್ಕೃತಿಯ ಸಂಕೇತ. ಅವರನ್ನು ದೂರ ಮಾಡುವ ಸಮಾಜ ಯಾವತ್ತೂ ಸಂಪೂರ್ಣ ಸಂತೋಷ ಕಂಡುಕೊಳ್ಳಲು ಸಾಧ್ಯವಿಲ್ಲ.

 ಒಂದು ದಿನದ ಪ್ರೀತಿಯನ್ನು ಪ್ರದರ್ಶಿಸುವುದಕ್ಕಿಂತ ಪ್ರತಿದಿನ ಅವರ ಜೊತೆ ನಿಂತು ಬದುಕುವುದು ಮುಖ್ಯ. ಪೋಷಕರಿಗೆ ಬೇಕಾಗಿರುವುದು ದೊಡ್ಡ ಉಡುಗೊರೆಗಳಲ್ಲ, ಪ್ರೀತಿಯಿಂದ ತುಂಬಿದ ಕೆಲವು ಕ್ಷಣಗಳು. ಮಕ್ಕಳು ಪ್ರತಿದಿನ ಕಾಳಜಿ ತೋರಿಸಿದರೆ, ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗುವುದಷ್ಟೇ ಅಲ್ಲ, ಪೋಷಕರ ಕಣ್ಣೀರಿನ ಜಾಗದಲ್ಲಿ ಸಂತೋಷ ಕಾಣಿಸಿಕೊಳ್ಳುತ್ತದೆ. ಯಾಕೆಂದರೆ ತಾಯಿ-ತಂದೆಗಳಿಗೆ ಬೇಕಾಗಿರುವುದು “ವಿಶೇಷ ದಿನದ ಗೌರವವಲ್ಲ… ಜೀವನಪೂರ್ತಿ ಇರುವ ಆತ್ಮೀಯತೆ.”

ವಿಶೇಷ ವರದಿ : ಕಲ್ಲಪ್ಪ ಶಿವಶರಣ, 7207279187