Sunday, April 19, 2026

ಜಾತಿ ವರ್ಗ ರಹಿತ ಅನುಭವ ಮಂಟಪ ಕಟ್ಟಿದ್ದು ಬಸವಣ್ಣನ ತಾಕತ್ತು -ಅನುಷಾ ಹಿರೇಮಠ



ಶರಣ ಅಲ್ಲಮಪ್ರಭು, ಶರಣ ಸಿದ್ದರಾಮೇಶ್ವರ ವೇದಿಕೆ

ವಿಜಯಪುರ : ಸಮಾಜದ ಎಲ್ಲ ವರ್ಗದವರನ್ನು ಬಸವಣ್ಣ ಎತ್ತಿ ಹಿಡಿದು ಅಪ್ಪಿಕೊಂಡಿದ್ದ, ಬಸವಣ್ಣನ ಸಮಾಜ ಜಾತಿ ವರ್ಗ ವರ್ಣ ರಹಿತವಾಗಿತ್ತು, ಬಸವಣ್ಣ ಕಟ್ಟಿದ ವಿಶ್ವದ ಮೊದಲ ಸಂಸತ್ತು ಎಂದು ಹೆಸರಾದ ಅನುಭವ ಮಂಟಪದಲ್ಲಿ ದೇಶ-ವಿದೇಶದ ಶರಣ ಶರಣೆಯರು ಇದ್ದರು ಇದು ಬಸವಣ್ಣನ ಅನುಭಾವದ ತಾಕತ್ತು ಎಂದು ವಚನ ಗಾಯಕಿ ಕುಮಾರಿ ಅನುಷಾ ಕರಿಬಸವಯ್ಯ ಹಿರೇಮಠ ಹೇಳಿದರು.
ಅವರು ಬಸವ ಜಯಂತಿ ಉತ್ಸವ ಸಮಿತಿ ಹಾಗೂ ವಿಜಯಪುರ ಜಿಲ್ಲಾಡಳಿತದಿಂದ ನಗರದ ಕಂದಗಲ್ಲ ಹಣಮಂತರಾಯ ರಂಗಮಂದಿರದಲ್ಲಿ ಏಪ್ರಿಲ್ 19, ಮತ್ತು 20ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ವಿಶ್ವಗುರು ಬಸವಣ್ಣನವರ 893 ನೇ ಜಯಂತಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ಸಮಾಜದದಲ್ಲಿ ಗಂಡು-ಹೆಣ್ಣು ಜಾತಿ, ವರ್ಗ ಭೇದ ಇರಬಾರದು ಎಂದು ಬಸವಣ್ಣ ಬಯಸಿದ್ದರು ಬಸವಣ್ಣನವರ ಚಿಂತನೆಗಳನ್ನು ಎಲ್ಲರು ಅಳವಡಿಸಿಕೊಳ್ಳೋಣ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಮಾತನಾಡಿ ನಾನು ಭಕ್ತ ಎಂದು ಹೇಳಿದ ಬಸವಣ್ಣ ಎಲ್ಲರಿಗಿಂತ ದೊಡ್ಡವರಾಗಿದ್ದಾರೆ.ಬಸವಣ್ಣ ಎಲ್ಲರನ್ನು ಪ್ರೀತಿಸಿದರು ಅವರ ಭಾವಕ್ಕೆ ಬೆಲೆ ಕಟ್ಟಲಾಗದು, ಬಸವಣ್ಣ ಸಮಾಜದ ಮೈಲಿಗೆ ತೊಳೆಯಲು ಬಂದ ಕ್ರಾಂತಿ ಪುರುಷರಾಗಿದ್ದಾರೆ ಅವರ ವಚನ ಇಂದು ಸಮಾಜವನ್ನು ಮುನ್ನಡೆಸುತ್ತಿವೆ ಸಮಾಜದ ಮೈಲಿಗೆ ಕಳೆಯುತ್ತಿವೆ ಎಂದರು.
ಕಾರ್ಯಕ್ರಮದದಲ್ಲಿ ಚಿಂತಕ  ಜೆ ಎಸ್ ಪಾಟೀಲ ಮುಖ್ಯ ಉಪನ್ಯಾಸ ನೀಡಿದರು, ವೀರಶೈವ ಮಹಾಸಭಾ ಅಧ್ಯಕ್ಷ ವಿ ಸಿ ನಾಗಠಾಣ ಮಾತನಾಡಿದರು.
ಉತ್ಸವ ಸಮಿತಿ ಅಧ್ಯಕ್ಷ ವಹಿಸಿ ಘನಶಾಮ ತೋಸ್ನಿವಾಲಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಬಸವಲಿಂಗ ಸ್ವಾಮೀಜಿ, ಗುರುಲಿಂಗ ಸ್ವಾಮೀಜಿ ಬಸನಗೌಡ ಹರನಾಳ, ಜಂಬುನಾಥ ಕಂಚಾಣಿ, ಸಂಗನಬಸಪ್ಪ ಸಜ್ಜನ, ಡಾ ರವಿಕುಮಾರ ಬಿರಾದಾರ ಮಹಾದೇವಿ ಗೋಕಾಕ, ಭಾರತಿ ಭುಯ್ಯಾರ ಶಶಿಕಲಾ ಕೊಟಗಿ, ತ್ರಿವೇಣಿ ಬುರ್ಲಿ, ಸುಧಾರಾಣಿ ಬಿರಾದಾರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಮುಖರಾದ ಎಸ್ ಎಚ್ ನಾಡಗೌಡ, ಮ ಗು ಯಾದವಾಡ, ಪ್ರಭುಗೌಡ ಪಾಟೀಲ ಬಸನಗೌಡ ಹರನಾಳ ಬಸವರಾಜ ಜಾಲವಾದಿ ಶಂಕರ ಬೈಚಬಾಳ, ಸವಿತಾ ಬಿ ಎನ್ ಶೇಷರಾವ ಮಾನೆ,ಚಂದ್ರಶೇಖರ ಗಂಟೆಪ್ಪಗೋಳ ರವಿಕುಮಾರ ಬಿರಾದಾರ, ಕಲ್ಲಪ್ಪ ಶಿವಶರಣ, ಲಾಯಪ್ಪ ಇಂಗಳೆ, ಶರಣು ಕಿರಣಗಿ ದಾನೇಶ ಅವಟಿ ಜಗದೇವ ಸೂರ್ಯವಂಶಿ, ಶಾಂತವೀರ ಥಾಲಬಾವಡಿ ವೈ ಎಚ್ ಲಂಬು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.





No comments:

Post a Comment