Saturday, September 16, 2023

ಸೆ. 17 ರಂದು ದೂರದರ್ಶನ ಚಂದನ ವಾಹಿನಿಯಲ್ಲಿ ಮೂಕನಾಗಬೇಕು ಸಾಕ್ಷ್ಯಚಿತ್ರ ಪ್ರಸಾರ

 ಈ ದಿವಸ ವಾರ್ತೆ 

ವಿಜಯಪುರ: ವಿಜಯಪುರದ ಹೊಂಗನಸು ಮೀಡಿಯಾ ಪ್ರೈ.ಲಿ. ಅಡಿಯಲ್ಲಿ ತಯಾರಾದ ಮೊದಲ ಕಾಣಿಕೆ, ಬಾಗಲಕೋಟೆ ನಗರದ ಸಮಾಜ ಸೇವಕ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೂ ವಿ ನಾಯ್ಕರ ಅವರ ನಿರ್ಮಾಣದ, ಪ್ರಿನ್ಸ್ ಟಿವಿ ಅರ್ಪಿಸುವ, ಕರ್ನಾಟಕದ ಮಹಾನ್ ತತ್ವಜ್ಞಾನಿ, ಉತ್ತರ ಕರ್ನಾಟಕದ ಹೆಮ್ಮೆಯ ತತ್ವಪದಕಾರ ಕಡಕೋಳ ಮಡಿವಾಳಪ್ಪನವರ ಜೀವನ ಕುರಿತು ತಯಾರಾದ ಸಾಕ್ಷ್ಯಚಿತ್ರ ಮೂಕನಾಗಬೇಕು ದೂರದರ್ಶನ ಚಂದನ ವಾಹಿನಿಲ್ಲಿ ಇದೇ ದಿನಾಂಕ: 17.09.2023 ರಂದು ಭಾನುವಾರ ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ ಎಂದು ಚಿತ್ರದ ನಿರ್ದೇಶಕ ಶಿವಾನಂದ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕದ ಕಲಾವಿದರು, ತಂತ್ರಜ್ಞರು ಸೇರಿ ಮಾಡಿರುವ ಈ ಚಿತ್ರವನ್ನು, ಪ್ರೇಕ್ಷಕರು ವೀಕ್ಷಿಸುವುದರ ಮೂಲಕ ಆಶೀರ್ವಾದಿಸಬೇಕೆಂದು ಕೋರಿದ್ದಾರೆ. 

ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳಿಗೆ, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.

ಕಲ್ಲಪ್ಪ ಶಿವಶರಣ

ವ್ಯವಸ್ಥಾಪಕ ಸಂಪಾದಕ

ಈ ದಿವಸ ಕನ್ನಡ ದಿನ ಪತ್ರಿಕೆ

 ಮೊ: 7204279187/     

          9900378892

ತಾವು ಟೈಪಿಸಿ ವ್ಯಾಟ್ಸಪ್ ಅಥವಾ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.

No comments:

Post a Comment