ಸಹಜ ಆಶಯ
ಸರಳ ಭಾಷೆ
ಸುಲಲಿತವಾಗಿ ಸೇರಿ
ಕವಿತೆಯಾಗಬೇಕು!
ದ್ವಂದ್ವ ಬೇಡ
ಧ್ವನಿ ಬೇಡ
ಭಾವದ ದನಿ ಭಾಷೆಯಾಗಿ
ಕವಿತೆಯಾಗಬೇಕು.
ಛಂದ ಬೇಡ,
ಬಂದ ಬೇಡ,
ಭಾವ ಭಾಷೆಗಳ ಬಂಧನ
ಕವಿತೆಯಾಗಬೇಕು.
ಪ್ರಾಸವೇಕೆ?
ಲಯ ಬೇಕೆ?
ಎದೆಯ ಮಾತು ಅಕ್ಷರವಾಗಿ
ಕವಿತೆಯಾಗಬೇಕು.
ಚೆಲುವಿಗೆ ಕನ್ನಡಿಯಾಗಿ
ಒಲವಿಗೆ ಮುನ್ನುಡಿಯಾಗಿ
ಚೆಲುವು-ಒಲವುಗಳ ಚೆಲುವಿನ ವ್ಯಾಖ್ಯಾನ
ಕವಿತೆಯಾಗಬೇಕು.
ವಾಸ್ತವತೆಗೆ ಪ್ರತಿಬಿಂಬವಾಗಿ.
ಸಮಾಜಕ್ಕೆ ಗತಿಬಿಂಬವಾಗಿ.
ಜೊತೆ -ಜೊತೆ ಸಾಗುವ ಸಾಲುಗಳು.
ಕವಿತೆಯಾಗಬೇಕು.
ಅಂಬರೀಷ ಎಸ್. ಪೂಜಾರಿ.
No comments:
Post a Comment