Thursday, January 4, 2024

ನೂತನ ಶಾಲಾ ಸುದಾರಣ ಸಮಿತಿ ರಚನೆ


ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ 

ವಿಜಯಪುರ:

ಮೋರಟಗಿ ಸ್ಥಳಿಯ ಗ್ರಾಮದ ಜನತಾ ಕಾಲೂನಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನೂತನ ಶಾಲಾ ಸುದಾರಣ ಸಮಿತಿ ರಚನೆ ಮಾಡಲಾಯಿತು.
ಸರಕಾರ ಮಕ್ಕಳ ಶಿಕ್ಷಣಕ್ಕಾಗಿ ಹತ್ತು ಹಲವು ವಿಧಗಳಲ್ಲಿ ಅನುದಾನ ಒದಗಿಸಿ ಮಕ್ಕಳ ಕಲಿಕಾ ವೃತ್ತಿಗೆ ಸಹಕಾರ ನೀಡುತ್ತಿದ್ದು ಇದನ್ನು ಸದ್ಭಳಕೆ ಮಾಡಲು ಸರಕಾರಿ ಶಾಲೆಯಲ್ಲಿ ವಿದ್ಯ ಕಲಿಯುವಂತ ಮಕ್ಕಳ ಪಾಲಕರು ಉಸ್ತುವಾರಿ ವಹಿಸಿದರೆ ಸರಕಾರದ ಕನಸು ನನಸಾಗುವುದು ಎಂದು ಮಕ್ಕಳ ಪಾಲಕರಿಗೆ ಅಧೀಕಾರ ಕೊಡುವಂತ ದಿಟ್ಟ ನಿರ್ಧಾರ ಕೈಗೊಂಡಿತು.ಅದರಂತೆ ಜನತಾ ಕಾಲೂನಿ ಸರಕಾರಿ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್.ಸಿ.ಅಧ್ಯಕ್ಷರಾಗಿ ಬಸವರಾಜ ಸುಂಟ್ಯಾಣ (ಮ್ಯಾಗೇರಿ) ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಸಂತೋಷ ಕೆರಿಗೊಂಡ ಅವಿರೋಧವಾಗಿ ಆಯ್ಕೆಯಾದರು.
ಶಿಕ್ಷಣ ಸಂಯೋಜಕರಾದ ರವಿ ಬಿರಾದಾರ ಮುಖ್ಯಗುರುಗಳಾದ ವೈಜನಾಥ ಅಂಕಲಗಿ ಅರುಣಕುಮಾರ ಸಿಂಗೆ ರವಿಕಾಂತ ನಡುವಿನಕೆರಿ ಸಹ ಶಿಕ್ಷಕರಾದ ಶ್ರೀಶೈಲ ನಾಟೀಕಾರ ಸೇರಿದಂತೆ ಹಲವರು ಇದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

05-01-2024 EE DIVASA KANNADA DAILY NEWS PAPER

ಶತಕಂಠ ಗಾಯನ ಕಾರ್ಯಕ್ರಮ ಅದ್ಧೂರಿ ಯಶಸ್ವಿ

ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ 

ವಿಜಯಪುರ: ನೂರುಕಂಠಗಳಲ್ಲಿ ಒಂದೇ ಧ್ವನಿಯಾಗಿ ಗಾಯನ ಹೊರಹೊಮ್ಮುತ್ತಿದ್ದರೆ ಕೇಳಲು ಮಧುರವೋ ಮಧುರ. ಅಂತಹ ಒಂದು ಮಾಧುರ್ಯ ಪೂರ್ಣವಾದ ಶತಕಂಠ ಗಾಯನ ಕಾರ್ಯಕ್ರಮ ನಡೆದದ್ದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರದ ಆಡಳಿತ ಭವನದ ಎದುರಿನಲ್ಲಿ ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳು ಸೇರಿಕೊಂಡು ಸಂಗೀತ ವಿಭಾಗದ ಮುಂದಾಳತ್ವದಲ್ಲಿ ಶತಕಂಠ ಗಾಯನ ಎಂಬ ನೂರು ವಿದ್ಯಾರ್ಥಿನಿಯರ ಗಾಯನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು. ಆರಂಭದಲ್ಲಿ ವಿಶ್ವವಿದ್ಯಾನಿಲಯದ ಧ್ಯೇಯಗೀತೆಯಾದ ನಾವೆಲ್ಲರೂ ಒಂದೇ ಜಾತಿ ಎಂಬ ಗೀತೆಯನ್ನು ಮಧುರವಾಗಿ ಪ್ರಸ್ತುತಪಡಿಸಿದರು. 

ನಂತರ ಬಸವಣ್ಣನವರ ವಚನವಾದ ದಯವಿಲ್ಲದ ಧರ್ಮ ಅದಾವುದಯ್ಯ ಎಂದು ಹಾಡಿದರು. ಇತನಿ ಶಕ್ತಿ ಹಮೆ ದೇನಾ ದಾತಾ ಎಂಬ ಜಾಗೃತ ಗೀತೆಯನ್ನು ಹಾಡುವುದರ ಮೂಲಕ ನೆರೆದಿದ್ದ ಕಲಾಎಸಿಕರ ಪ್ರಶಂಸೆಗೆ ಒಳಗಾದರು. ಕೊನೆಯದಾಗಿ ವಿಶ್ವ ವಿನೂತನ ವಿದ್ಯಾ ಚೇತನ ಎಂಬ ಗೀತೆಯನ್ನು ಹಾಡುವುದರ ಮೂಲಕ ದೂರದ ಊರಿನಿಂದ ಆಗಮಿಸಿದ್ದ ನ್ಯಾಕ್ ಸದಸ್ಯರ ಪ್ರಶಂಸೆಗೆ ಒಳಗಾದರು. ಇದಕ್ಕೆ ತರಬೇತಿಯನ್ನು ಡಾ. ಗಂಗಾಧರ ಸೋನಾರ್ ಅವರ ನೇತೃತ್ವದಲ್ಲಿ ಡಾ. ಹರೀಶ ಹೆಗಡೆ, ಶ್ರೀಮತಿ ಸಂಗೀತಾ ಹಿರೇಮಠ ಮತ್ತು ಶ್ರೀ ವಿನಯ್ ಕುಲಕರ್ಣಿ ಅವರು ನೀಡಿದ್ದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ ಬಿ ಕೆ ತುಳಸಿಮಾಲಾ, ಕುಲಸಚಿವರಾದ ಎಸ್ ಎಸ್ ಸೋಮನಾಳಕ, ಕುಲಸಚಿವ ಮೌಲ್ಯಮಾಪನ, ಆರ್ಥಿಕ ಅಧಿಕಾರಿಗಳು, ಡೀನರು, ಎಲ್ಲಾ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿನಿಯರು ಮತ್ತು ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Wednesday, January 3, 2024

04-01-2024 EE DIVASA KANNADA DAILY NEWS PAPER

ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಧೋರಣೆಯನ್ನು ಖಂಡಿಸಿ : ಭಾರತೀಯ ಜನತಾ ಪಾರ್ಟಿ ಪ್ರತಿಭಟನಾ ಮೆರವಣಿಗೆ


 ವಿಜಯಪುರ : ರಾಮ ಭಕ್ತರ ಮೇಲೆ ನಕಲಿ ಕೇಸ್ ಹಾಕಿರುವ ಹಿಂದೂ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲಾ ಘಟಕದವತಿಯಿಂದ ನಗರದ ಗಾಂಧಿವೃತ್ತದಿAದ ಹಲಗಿ ಬಾರಿಸುವ ಮೂಲಕ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ಗಾಂಧಿವೃತ್ತದಿAದ ನಗರ ಪ್ರಮುಖ ರಸ್ತೆಗಳಾದ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಗೆ ಬೃಹತ್ ಮೆರವಣಿಗೆ ಮೂಲಕ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಧೋರಣೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಮಾತನಾಡಿ, ಕಳೆದ ಮೂವತ್ತು ವರ್ಷ ಹಳೆಯದಾದ ಕೇಸನ್ನು ಮತ್ತೆ ಪ್ರಾರಂಭಿಸಿ ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ಎಂಬ ಹಿಂದು ಕಾರ್ಯಕರ್ತನನ್ನು ಬಂಧಿಸಿರುವುದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಕಾಂಗ್ರೆಸ್ ಸರ್ಕಾರ ತಾನು ಹಿಂದೂ ವಿರೋಧಿಯೆಂಬುದನ್ನು ಪದೇ ಪದೇ ಸಾಬೀತುಪಡಿಸುತ್ತಿದೆ. ಅಯೋಧ್ಯೆಯಲ್ಲಿ ಜನವರಿ 22 ರಂದು ಪ್ರಭು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯಾಗುವ ಶುಭ ಸಂದರ್ಭದಲ್ಲಿ ದೇಶದೆಲ್ಲೆಡೆ ಸಂಭ್ರಮದ ವಾತಾವರಣ ಇರುವುದು ಕಾಂಗ್ರೆಸ್ಸಿಗರಿಗೆ ನೋಡಲಾಗುತ್ತಿಲ್ಲ. ಮೊದಲಿನಿಂದಲೂ ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡುತ್ತಾ ಬಂದಿರುವ ಕಾಂಗ್ರೆಸ್ ಈಗ ಅಯೋಧ್ಯೆಯಲ್ಲಿನ ಭವ್ಯ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ದೇಶದ ವಾತಾವರಣ ಕೆಡಿಸಲು ಹುನ್ನಾರ ನಡೆಸಿದೆ ಎಂದರು.

ಮೊದಲಿನಿAದಲೂ ಮೊಘಲರು, ಡಚ್ಚರು, ಪೋರ್ಚುಗೀಸರು ಹಾಗೂ ಬ್ರಿಟೀಷರು ಈ ದೇಶದ ಸಂಪತ್ತು ಹಾಗೂ ನಮ್ಮ ಸಂಸ್ಕೃತಿಯನ್ನು ಹಾಳುಮಾಡಲು ಪ್ರಯತ್ನಿಸಿ ವಿಫಲರಾಗಿದ್ದಾರೆ, ಸ್ವಾತಂತ್ರಾನAತರ ಕಾಂಗ್ರೆಸ್ ಈ ಕೆಲಸವನ್ನು ದೇಶವಿರೋಧಿ ಶಕ್ತಿಗಳ ಜೊತೆಗೂಡಿ ಮಾಡುವ ಮೂಲಕ ಅಸಂಖ್ಯಾತ ಹಿಂದುಗಳಿಗೆ ಅಪಮಾನ ಮಾಡುತ್ತಿದೆ. ಆದಿಕಾಲದಲ್ಲಿ ಒಳ್ಳೆಯ ಕೆಲಸವಾಗುತ್ತಿರುವಾಗ ಅಸುರ ಶಕ್ತಿಗಳು ಅದನ್ನು ಹಾಳುಗೆಡುವಲು ಪ್ರಯತ್ನಿಸುತ್ತಿದ್ದವು. ಹಾಗೆಯೇ ಪ್ರಸ್ತುತ ಕಾಂಗ್ರೆಸ್ ಸರ್ಕಾರ ರಾಮಜನ್ಮಭೂಮಿಯ ಉದ್ಘಾಟನೆಯ ಸಮಯದಲ್ಲಿ ಈ ರೀತಿ ಹಿಂದೂ ಕಾರ್ಯಕರ್ತರನ್ನು ಬಂಧಿಸಿ ದಬ್ಬಾಳಿಕೆ ಮಾಡುತ್ತಿರುವುದನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ಸುರೇಶ ಬಿರಾದಾರ, ಶಿವರುದ್ರ ಬಾಗಲಕೋಟ, ಮಳುಗೌಡ ಪಾಟೀಲ, ಬಸವರಾಜ ಬಿರಾದಾರ, ಸಂಜೀವ ಐಹೊಳ್ಳಿ, ಸಂಜಯ ಪಾಟೀಲ ಕನಮಡಿ, ಭೀಮಾಶಂಕರ ಹದನೂರ, ಉಮೇಶ ಕೋಳಕೂರ, ಬಾಬುರಾಜೇಂದ್ರ ನಾಯಕ, ಕೃಷ್ಣಾ ಗುನಾಳಕರ, ವಿಜಯ ಜೋಶಿ, ಶಿಲ್ಪಾ ಕುದರಗೊಂಡ, ಮಲ್ಲಮ್ಮ ಜೋಗುರ, ಲಕ್ಷಿö್ಮÃ ಕನ್ನೊಳ್ಳಿ, ಮಹಾನಗರ ಪಾಲಿಕೆ ಸದಸ್ಯ ರಾಜು ಕುರಿಯವರ, ರಾಹುಲ ಜಾಧವ, ಎಂ.ಎಸ್.ಕರಡಿ, ಪ್ರೇಮಾನಂದ ಬಿರಾದಾರ, ಹಾಗೂ ಈರಣ್ಣ ರಾವುರ, ಭೀಮನಗೌಡ ಸಿದ್ದರಡ್ಡಿ, ಬಸವರಾಜ ಹೂಗಾರ, ರಾಜೇಶ ತವಸೆ, ಸಂದೀಪ ಪಾಟೀಲ, ಕಾಂತು ಶಿಂಧೆ, ಶ್ರೀಧರ ಬಿಜ್ಜರಗಿ, ಪಾಪುಸಿಂಗ ರಜಪೂತ, ಸಂಗಮೇಶ ಹೌದೆ, ವಿಜಯಕುಮಾರ ಕುಡಿಗನೂರ, ವಿಕ್ರಮ ಗಾಯಕವಾಡ, ಜಗದೀಶ ಮುಚ್ಚಂಡಿ, ವಿಠ್ಠಲ ನಡುವಿನಕೇರಿ, ವಿನಾಯಕ ದಹಿಂಡೆ, ಆನಂದ ಮುಚ್ಚಂಡಿ, ವಿಕಾಸ ಪದಕಿ, ಸಂಪತ್ ಕೋಹಳ್ಳಿ, ಎ.ಎಸ್.ಪಾಟೀಲ, ಶರಣು ಕಾಖಂಡಕಿ, ವಿಜಯ ಹಿರೇಮಠ, ಮಧು ಕಲಾದಗಿ, ಗುರು ದೇಶಪಾಂಡೆ, ರವಿ ಬಿರಾದಾರ ನಾಗಠಾಣ, ಸುಶ್ಮಿತಾ ವಾಡಕರ, ವಿಜಯಲಕ್ಷಿö್ಮÃ ರೂಗಿಮಠ, ಗಾಯತ್ರಿ ದೇವೂರ, ಮಿತಾ ದೇಸಾಯಿ, ಶರಣಬಸು ಕುಂಬಾರ , ವಾರೀಶ ಕುಲಕರ್ಣಿ, ಉದಯ ಕನ್ನೊಳ್ಳಿ, sಸೈನಾಜ, ಮಾಯಾ ಚೌಧರಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Tuesday, January 2, 2024

ಭಾಷಣ ಕಲೆ ಎಂಬುದು ಒಂದು ಕಲಿಕೆಯ ಕ್ರಮ : ಡಾ.ವಿಷ್ಣು ಶಿಂದೆ

ಸಿಂದಗಿ: ಭಾಷಣ ಕಲೆ ಎಂಬುದು ಒಂದು ಕಲಿಕೆಯ ಕ್ರಮ ಹಾಗಾಗಿ ಅದನ್ನು ಈಗಿನ ರಾಷ್ಟಿçÃಯ ಹೊಸ ಶಿಕ್ಷಣ ನೀತಿಯಲ್ಲಿ ಅಳವಡಿಸಲಾಗಿದೆ ಎಂದು ವಿಜಯಪುರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾದ ಡಾ.ವಿಷ್ಣು ಶಿಂದೆ ಹೇಳಿದರು.

 ಪಟ್ಟಣದ ಶ್ರೀ ಪದ್ಮಾರಾಜ ಮಹಿಳಾ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಂಡ ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕುವ ವೇದಿಕೆಯೇ ಈ ಪಠ್ಯಪೂರ ಚಟುವಟಿಕೆಯಾಗಿದೆ. ಪದವಿ ಶಿಕ್ಷಣ ಸರಿಯಾದರೆ ಬದುಕು ನಿರ್ಮಾಣ ಒಂದು ವೇಳೆ ಸರಿಯಾಗದಿದ್ದರೆ ಬದುಕೇ ನಿರ್ಣಾಮ ಹಾಗಾಗಿ ನಿಮ್ಮ ಬದುಕನ್ನು ಬದಲಾವಣೆ ಮಾಡುವುದೇ ಪದವಿ ಶಿಕ್ಷಣ ಎಂದರು.

 ಈ ವೇಳೆ ಅತಿಥಿ ಸ್ಥಾನವನ್ನು ಅಲಂಕರಿಸಿದ ಸಂಸ್ಥೆಯ ಆಡಳಿತಾಧಿಕಾರಿ ಡಾ.ಬಿ.ಜಿ. ಮಠ ಮಾತನಾಡಿ, ಈ ಸಂಸ್ಥೆಯ ನೀಡುವ ಎಲ್ಲ ರೀತಿಯ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಸ್ವ-ಉದ್ಯೋಗಗಳನ್ನು ಮುಂದುವರೆಸಿಕೊAಡು ಹೋಗಬೇಕು. ಕೀಳರಿಮೆಯನ್ನು ಹೋಗಲಾಡಿಸಿಕೊಂಡು ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

 ಈ ವೇಳೆ ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಸಾರಂಗಮಠದ ಚೇರಮನ್ನರಾದ ಗುರುಕುಲ ಭಾಸ್ಕರ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಪ್ರಾಚಾರ್ಯ ಎಸ್.ಎಂ. ಪೂಜಾರಿ ಅಧ್ಯಕ್ಷೀಯ ಮಾತುಗಳನ್ನಾಡಿದರು.

 ಇದೇ ಸಂದರ್ಭದಲ್ಲಿ ಉಪನ್ಯಾಸಕರಾದ ಮಹಾಂತೇಶ ನೂಲಾನವರ, ಜಿ.ಎ.ನಂದಿಮಠ, ಜಿ.ಎಸ್.ಕುಲಕರ್ಣಿ, ಪಿ.ಎಮ್ ಮಾಲಿಪಾಟೀಲ್, ಅನೀಲಕುಮಾರ ರಜಪೂತ, ಎಸ್.ಎಮ್. ಹೂಗಾರ, ಎಮ್.ಕೆ. ಬಿರಾದಾರ, ಎಸ್.ಸಿ ದುದ್ದಗಿ, ಜಿ.ವಿ ಪಾಟೀಲ್, ಮಂಗಳಾ ಈಳಗೇರ, ಡಿ.ಎಂ. ಪಾಟೀಲ, ಶಂಕರ ಕುಂಬಾರ, ಮಮತಾ ಹರನಾಳ ಸೇರಿದಂತೆ ಮಾಹಾವಿದ್ಯಾಲಯದ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

 ಈ ವೇಳೆ ವಿದ್ಯಾರ್ಥಿ ಸಂಘಡ ಕಾರ್ಯಾಧ್ಯಕ್ಷ ಯು.ಸಿ ಪೂಜೇರಿ ಸ್ವಾಗತಿಸಿ ಪರಿಚಯಿಸಿದರು.. ವಿದ್ಯಾರ್ಥಿ ಈರಮ್ಮ ಹಿರೇಮಠ ಪ್ರಾರ್ಥಿಸಿದರು. ನೀಲಗಂಗಾ ದೇವರಮನಿ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಕಾವೇರಿ ರೇವೂರ ವಂದಿಸಿದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.