ತಾಯಿಯ ಗರ್ಭದಲ್ಲಿ ಇರುವಾಗಲೆ ಚಿಕ್ಕಪ್ಪನಾದ ಸನ್ಯಾಸಿಯ ವಾಣಿಯಂತೆ ಇತಿಹಾಸ ಪುರುಷನೊಬ್ಬ ಮಗನಾಗುತ್ತಾನೆ ಅವನಿಂದ ನಿಮ್ಮ ಕೀರ್ತಿ ಬೆಳೆಯುವುದು
ಎಪ್ರಿಲ್ ಹದಿನಾಲ್ಕು ಭರತ ಭೂಮಿಗೆ ಹರ್ಷವೆ ಹರ್ಷಾ ನೀನು ಉದಯಿಸಿದ ದಿನ ನಿನ್ನ ತಾಯಿ ತಂದೆಯರಿಗೆ ಅಷ್ಟೆ ಅಲ್ಲಾ ದಿನ ದಲಿತರಿಗೂ ಅರುಣೋದಯ ಅಂದು
ಬರೋಡಾದ ಗಾಯಕವಾಡ ದೊರೆ ಸಯಾಜಿ ರಾವ್ ಇಪ್ಪತ್ತೈದು ರೂಪಾಯಿಗಳ ವಿದ್ಯಾರ್ಥಿ ವೇತನ ಪಡೆದು ಹತ್ತಾರು ಶಾಸ್ತ್ರ ವಿಷಯಗಳ ಜ್ಞಾನ ಪಡೆದವನು
ಮನುಷ್ಯ ಜಾತಿ ತಾನೊಂದೆ ವಲಂ ಎಂದು ಮನುಷ್ಯ ವರ್ಗದ ಸಮಾನತೆ ಸೌಹಾರ್ದತೆ ಸ್ನೇಹ ಬಾಂಧವ್ಯದ ಗುಣವ ಬೆಳೆಸಿದೆ ಬುದ್ದ ಬಸವರಾದಿಯಂತೆ ನೆಡೆದವನು
ಭಾರತ ಸಂವಿಧಾನ ಶಿಲ್ಪಿಯಾಗಿ ಗುರುಗಳಿಂದ ಅಂಬೇಡ್ಕರ ಕರೆಸಿಕೊಂಡವನು ಭಾರತ ಜನರ ಪಾಲಿಗೆ ಬಾಬಾನಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾನಾಯಕ
ಮಾಹೋ ಯಿಂದ ದೇಶ ವಿದೇಶಗಳಲ್ಲಿ ಸನ್ಮಾರ್ಗವನ್ನು ಉಪದೇಶವನ್ನು ಸಾರಿರುವನು ತೋರು ಬೆರಳಿನಲ್ಲಿ ಅನೇಕ ಸಂದೇಶಗಳನ್ನು ಅಡಗಿಸಿದವನು ಭಾರತಾಂಬೆಯ ಸೇವೆಗೈದ ಮಹಾನ ಪುರುಷ
ಇವತ್ತು ನೀನು ವೀರನಾಯಕ ಅವತ್ತು ನಿನ್ನನು ಕೀಳಾಗಿ ಕಂಡ ಮನಸ್ಸು ಇಂದು ಹೃದಯಪೂರ್ವಕವಾಗಿ ಕೈ ಎತ್ತಿ ನಮಸ್ಕರಿಸುವಂತ್ತೆ ಮಾಡಿದ ಚಮತ್ಕಾರಿ ನೀನು
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
No comments:
Post a Comment