Sunday, December 18, 2022

ಸುಧಾರಾಣಿ, ತ್ರಿವೇಣಿಗೆ ಪಿಎಚ್‌ಡಿ ಪದವಿ

ಸುಧಾರಾಣಿ ಮಣೂರ
                        ಮಣೂರ ಸುಧಾರಾಣಿ ಶಿವಪ್ಪಾ

                                   ತ್ರಿವೇಣಿ ಬನಸೋಡೆ

ಈ ದಿವಸ ವಾರ್ತೆ

 ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಮಣೂರ ಸುಧಾರಾಣಿ  ಶಿವಪ್ಪಾ ಅವರು ಸಲ್ಲಿಸಿದ್ದ “ಪ.ಗು ಸಿದ್ದಾಪುರ ಅವರ ಜೀವನ ಮತ್ತು ಸಾಹಿತ್ಯ” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.

ಮಣೂರ ಸುಧಾರಾಣಿ  ಶಿವಪ್ಪಾ ಅವರು ಕನ್ನಡ ವಿಭಾಗದ ಪ್ರೊ. ಮಹೇಶ ಚಿಂತಾಮಣಿ  ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. 

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ತ್ರಿವೇಣಿ  ಬನಸೋಡೆ ಅವರು ಸಲ್ಲಿಸಿದ್ದ “ಎ. ಪಿ. ಮಾಲತಿ ಅವರ ಜೀವನ ಮತ್ತು ಸಾಹಿತ್ಯ” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.

ತ್ರಿವೇಣಿ   ಬನಸೋಡೆ ಅವರು ಕನ್ನಡ ವಿಭಾಗದ ಪ್ರೊ, ಮಹೇಶ ಚಿಂತಾಮಣಿ  ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು.

ಡಾಕ್ಟರೇಟ್ ಪದವಿ ಪಡೆದಿರುವ ಮಣೂರ ಸುಧಾರಾಣಿ  ಶಿವಪ್ಪಾ ಹಾಗೂ ತ್ರಿವೇಣಿ ಬನಸೋಡೆ ಅವರನ್ನು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಪ್ರೊ. ಬಿ.ಎಸ್.ನಾವಿ, ಮೌಲ್ಯಮಾಪನ ಕುಲಸಚಿವ ಪ್ರೊ. ರಮೇಶ್.ಕೆ. ಅಭಿನಂದಿಸಿದ್ದಾರೆ.

No comments:

Post a Comment