Friday, June 7, 2024

ಜೂ.9ಕ್ಕೆ ಪ್ರೊ. ಬಿ.ಕೆ. ಸಂಘರ್ಷ ದಿನಾಚರಣೆ


ವಿಜಯಪುರ : ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ. ಬಿ. ಕೃಷ್ಣಪ್ಪರ 88ನೇ ಜನ್ಮ ದಿನಾಚರಣೆಯ ಅಂಗವಾಗಿ ಪ್ರೊ. ಬಿ.ಕೆ. ಸಂಘರ್ಷ ದಿನ ಎಂಬ ಘೋಷವಾಕ್ಯದೊಂದಿಗೆ ಜೂ. 9 ರಂದು ಬೆಳಗ್ಗೆ 11:30 ಕ್ಕೆ ಪುರಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾ ಪ್ರಧಾನ ಸಂಚಾಲಕರಾದ ಸಂಜು ವೈ. ಕಂಬಾಗಿ ತಿಳಿಸಿದ್ದಾರೆ.

ಅವರು ಪತ್ರಿಕಾ ಪ್ರಕಟಣೆ ನೀಡಿದ ಅವರು, ಶೋಷಿತ ಸಮುದಾಐಗಳ ಹೋರಾಟಗಾರ, ದಲಿತ ಚೇತನ ಬಿ. ಕೃಷ್ಣಪ್ಪ ಭದ್ರಾವತಿಯಲ್ಲಿ ಆರಂಭಮಾಡಿದ ಚಳವಳಿ, ಕರ್ನಾಟಕದ ಉದ್ದಗಲಕ್ಕೂ ವ್ಯಾಪಿಸಿ ಲಕ್ಷಾಂತರ ತಳ ಸಮುದಾಯ ಬಡವರ ವಿಮೋಚನೆಗಾಗಿ ದಸಂಸ ಹೋರಾಟ ಮಾಡುತ್ತಾ ಬಂದಿದೆ ಎಂದರು.

ಕೃಷ್ಣಪ್ಪ ತಮ್ಮ ಬದುಕಿನುದ್ದಕ್ಕೂ ಸರಳ ಜೀವನ ನಡೆಸಿದ್ದಾರೆ. ರಾಜಕೀಯವಾಗಿ ಶೋಷಿತರು ಸಬಲಾಗಬೇಕೆನ್ನುವ ಕನಸು ಹೊಂದಿದ್ದರು. ಜಾತೀಯತೆ, ಅಸ್ಪೃಶ್ಯತೆ, ವರ್ಗ ಅಸಮಾನತೆಗಳ ವಿರುದ್ಧ ಹೋರಾಟ ರೂಪಿಸಿದವರು. ಇಂದು ದಲಿತ ಶೋಷಿತ ಸಮುದಾಯದವರಿಗೆ ಅಲ್ಪ-ಸ್ವಲ್ಪ ಭೂಮಿ ಸಿಕ್ಕಿದೆ ಎಂದರೆ ಅದು ಬಿ. ಕೃಷ್ಣಪ್ಪರ ಹೋರಾಟದಿಂದಲೇ ಎಂದರು.

ವಿಜಯಪುರ ಜಿಲ್ಲೆಯಿಂದ 100 ಕ್ಕೂ ಹೆಚ್ಚು ಜನ ಕಾರ್ಯಕರ್ತರು ರೇಲ್ವೆ ಮುಖಾಂತರ ಬೆಂಗಳೂರಿನ ಕಾರ್ಯಕ್ರಮಕ್ಕೆ ತೆರಳಿಲಿದ್ದಾರೆ. ಅತಿ ಹೆಚ್ಚು ಕಾರ್ಯಕರ್ತರು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಚಿವರಾದ ಸತೀಶ ಜಾರಕಿಹೋಳಿ, ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ. ಎಚ್.ಸಿ. ಮಹಾದೇವಪ್ಪ, ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ನ ಅಧ್ಯಕ್ಷ ಇಂದಿರಾ ಕೃಷ್ಣಪ್ಪ, ಉಪನ್ಯಾಸಕ ಡಾ. ಸಿ.ಜಿ. ಲಕ್ಷಿö್ಮÃಪತಿ, ದಸಂಸ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ, ದಸಂಸ ಪದಾಧಿಕಾರಿಗಳಾದ ರಮೇಶ ಡಾಕುಳುಕಿ, ಎನ್. ನಾಗರಾಜ್ ಹಾಗೂ ಉಪ ಪ್ರಧಾನ ಸಂಚಾಲಕರಾದ ನಾಗಣ್ಣ ಬಡಿಗೇರ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಸಂಜು ಕಂಬಾಗಿ ತಿಳಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಪರಿಸರ ನಾಶ ಜೀವ ಸಂಕುಲ ವಿನಾಶ: ಡಿ.ವೈ.ಎಸ್ಪಿ ಬಸವರಾಜ್ ಯಲಿಗಾರ

ವಿಜಯಪುರ : ಜನಸಂಖ್ಯೆ ಹೆಚ್ಚಳ, ನಗರೀಕರಣ, ಕಾರ್ಖಾನೆಗಳ ಬೆಳವಣಿಗೆ ವಾಹನಗಳ ಭರಾಟೆ, ಮಾನವನ ದುರಾಸೆಯಿಂದ ಕಾಡು-ಮೇಡು ನಾಶವಾಗಿ ಬಿಸಿಲಿನ ತಾಪ ಹೆಚ್ಚಿ, ಹಿಮಕರಗಿ, ಋತುಮಾನಗಳು ಬದಲಾವಣೆ ಆಗುತ್ತಿರುವದು ದುರದೃಷ್ಟಕರ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು. ಪರಿಸರ ನಾಶವಾದರೆ ಇಡೀ ಜೀವಸಂಕುಲವೇ ವಿನಾಶವಾದಂತೆ ಎಂದು ನಗರ ಪೊಲೀಸ್ ಉಪ ಅಧೀಕ್ಷಕರಾದ ಬಸವರಾಜ್ ಯಲಿಗಾರ ಎಚ್ಚರಿಸಿದರು.



ಅಫಜಲಪುರ ಟಕ್ಕೆ ಕಿರಿಯ ಬಾಲಕರ ಬಾಲಮಂದಿರದಲ್ಲಿ ಜೂನ್ 05 ರಂದು ವನಮಹೋತ್ಸವ ಕಾರ್ಯಕ್ರಮದಲ್ಲಿ ವಿವಿಧ ನಮೂನೆಯ ಸಸಿಗಳನ್ನು ನೆಟ್ಟು. ನೀರೆರೆರೆದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೆಪ ಮಾತ್ರಕ್ಕೆ ಪರಿಸರ ದಿನಾಚರಣೆ ಆಚರಿಸದೆ ಪ್ಲಾಸ್ಟಿಕ್ ಬಳಕೆ ನಿಷೇಧ. ನಿತ್ಯ ಸಸಿ ನೆಡುವ ಕಾರ್ಯ ಸಂಕಲ್ಪ ಮಾಡಿ ಜೀವನದ ದಿನಚರಿಯಾಗಿಸಿಕೊಳ್ಳಬೇಕು. ಹರಪ್ಪ ಮೆಹೆಂಜೋದಾರೋ ಕಾಲದಿಂದಲೂ ಮಾನವ ಜನಾಂಗ ನದಿ ತೀರದಲ್ಲಿ, ಕಾಡಿನ ನಡುವೆ ಬೆಳೆದು ಬಂದಿದೆ. ಕಾಡು ಇದ್ದರೆ ನಾಡು. ಶುದ್ಧವಾದ ಗಾಳಿ, ನೀರು, ಪರಿಸರ ವಿವಿಧ ಪ್ರಾಣಿ ಪಕ್ಷಿ, ಜೀವ ಸಂಕುಲ ಮುಂದಿನ ಜನಾಂಗಕ್ಕೆ ಉಳಿಸಿ ಕೊಡುವ ಪಜ್ಞಾವಂತಿಕೆ ಮೆರೆಯಬೇಕಾದರೆ ಇಂದೇ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಿ ಕಾರ್ಯೋನ್ಮುಖರಾಗೋಣ ಎಂದು ಕರೆ ನೀಡಿದರು.

ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಸವರಾಜ್ ಜಿಗಳೂರು ಮಾತನಾಡಿ, ಪರಿಸರ ಸಂರಕ್ಷಣೆಯ ಕುರಿತು ಸರಕಾರ ಹಲವಾರು ರೀತಿ ಸಕಾರಾತ್ಮಕ ಯೋಜನೆಗಳನ್ನು ಜಾರಿಗೆ ತಂದಿದ್ದು.'ಮನೆಗೊAದು ಮರ ಊರಿಗೊಂದು ವನ' ಎಂಬ ಘೋಷವಾಕ್ಯದೊಂದಿಗೆ ಜನ ಜಾಗೃತಿ ಮೂಡಿಸುವದರೊಂದಿಗೆ ಉಚಿತ ಸಸಿ ವಿತರಣೆ, ನರ್ಸರಿ ಪ್ಲಾಂಟೇಶನ್ ಮಾಡಲು ಪ್ರೋತ್ಸಾಹ, ರೈತರಿಗೆ ಹೊಲಗದ್ದೆ ಬದುಗಳಲ್ಲಿ ವಿವಿಧ ಗಿಡ ಬೆಳೆಸಲು ಸಹಾಯ ಸಹಕಾರ ಅರಣ್ಯ ಇಲಾಖೆಯಿಂದ ನೀಡುತ್ತಿದೆ. ಶಾಲಾ ಕಾಲೇಜು ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡುತ್ತಿದೆ. ಸಾರ್ವಜನಿಕರು ಸಂಘ ಸಂಸ್ಥೆಗಳು ಈ ಪವಿತ್ರಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕೆAದು ಮನವಿ ಮಾಡಿದರು.

ಸಾನಿಧ್ಯ ವಹಿಸಿದ್ದ ರಾಮಕೃಷ್ಣ ಆಶ್ರಮದ ಪೂಜ್ಯಶ್ರೀ ನರೇಶಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಭಾರತೀಯ ಪರಂಪರೆಯಲ್ಲಿ ನಮ್ಮ ಋಷಿ ಮುನಿಗಳು ಗಿಡ ಮರಗಳಿಗೂ ಜೀವವಿದೆ ಎಂದು ಸಿದ್ಧಪಡಿಸಿದ್ದಲ್ಲದೆ. ಹಲವಾರು ಔಷಧೀಯ ಗುಣ, ಮಾನವನಿಗೆ ಉಪಯುಕ್ತ ಆಹಾರತತ್ವ ಒಳಗೊಂಡಿದೆ ಎಂದು ತೋರಿಸಿ ಕೊಟ್ಟಿದ್ದಾರೆ. ಕಾರಣ ಭಾರತೀಯರು ಗಿಡ ಮರಗಳನ್ನು, ರೈತರು ಬೆಳೆಗಳನ್ನು ದೇವರೆಂದು ನಂಬಿ ಭಕ್ತಿ ಶ್ರದ್ಧೆಯಿಂದ ಪೂಜಿಸುತ್ತಾರೆ. ನದಿಗಳಿಗೆ ಬಾಗಿನ ಅರ್ಪಣೆ, ಗಿಡ ಮರಗಳ ಪೂಜೆ, ವಿವಿಧ ಹಬ್ಬ ಹರಿದಿನಗಳಲ್ಲಿ ಮಣ್ಣಿನ ಮೂರ್ತಿಗಳ ಪೂಜೆ. ರೈತ ಬೆಳೆದ ಪೈರು, ಹೂ-ಹಣ್ಣುಗಳ ಪೂಜೆ ಇವೆಲ್ಲ ಈ ಭೂಮಿಗೆ ನಮಗೆ ಕಾಪಾಡುವ ಪರಿಸರಕ್ಕೆ ನಾವು ಸಲ್ಲಿಸುವ ಕೃತಜ್ಞತಾ ಭಾವ ಎಂದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ದೀಪಾಕ್ಷಿ ಜಾನಕಿ, ಮಾನ್ಯ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀಧರ ಕುಲಕರ್ಣಿ, ಸದಸ್ಯರಾದ ದಾನೇಶ ಅವಟಿ, ಯಲ್ಲಪ್ಪ ಇರಕಲ್. ಪೊಲೀಸ್ ನಿರೀಕ್ಷಕರಾದ ಪರಮೇಶ್ವರ್ ಕವಟಗಿ, ಮಲ್ಲಯ್ಯ ಮಠಪತಿ, ಸಂಗಮೇಶ ಪಾಟೀಲ್, ಮಹಾಂತೇಶ ಪಾಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಾಂದರ್ಭಿಕವಾಗಿ ಮಾತನಾಡಿದರು.

ಬಾಲ ಮಂದಿರದ ಅಧೀಕ್ಷಕಿ ಶ್ರೀಮತಿ ಜಯಶ್ರೀ ಪವಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಶಿವಲೀಲಾ ಶಿರಮಗೊಂಡ ಪ್ರಾರ್ಥಿಸಿದರು. ಶೀತಲ್ ಹೂಲಿ ನಿರೂಪಿಸಿದರು.ಮೂಖ್ಯೋಪಾದ್ಯಾಯ ಪಿ.ಬಿ.ತಳಕಟನಾಳ ವಂದಿಸಿದರು.

ವಿಷಯ ಪರಿವೀಕ್ಷಕಿ ಶ್ರೀಮತಿ ಭಾರತಿ ಹಡಪದ, ಎಸ್.ಎಚ್. ಹೊಸಮನಿ, ವಾಣಿಶ್ರೀ ನಿಂಬಾಳ, ಜ್ಯೋತಿ ತೇಲಿ, 

ಗ್ರೃಹಪೀತರಾದ ಶಿವಾನಂದ ಅವತಾಡೆ, ಶರಣು ಯರನಾಳ, ನಿವೃತ್ತ ವಿಷಯ ಪರಿವೀಕ್ಷಕರಾದ ಎ.ಡಿ.ಮಕಾನದಾರ, ಪ್ರಭು ಹಿರೇಮಠ, ಸಂತೋಷ ಮುಳವಾಡ, ಶ್ರೀಮತಿ ಅಮಿನಮ್ಮ ಮಣೂರ, ಬಸಮ್ಮ ಸಜ್ಜನ, ತಾರಾಬಾಯಿ ಬನಸೋಡೆ, ಮೌನೇಶ ಗಂಗನಹಳ್ಳಿ, ಮಾಳಪ್ಪ ಬೆಳಗಾವಿ ಇನ್ನೂ ಅನೇಕರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ರೈತರ ವಿವಿಧ ಬೇಡಿಕೆ ಈಡೇರಿಸಲು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯ



ವಿಜಯಪುರ : ಬಿತ್ತನೆ ಬೀಜ-ರಸಗೊಬ್ಬರ ಬೆಲೆ ಇಳಿಸಲು ಒತ್ತಾಯಿಸಿ, ನಕಲಿ ಕಳಪೆ ಮಾರಾಟ ತಡೆಗಟ್ಟಲು ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆಯ ಮೇರೆಗೆ ಬಿತ್ತನೆ ಬೀಜ -ರಸಗೊಬ್ಬರ ಬೆಲೆಗಳನ್ನು ಇಳಿಸಲು ಆಗ್ರಹಿಸಿ, ಕಳಪೆ ಹಾಗೂ ನಕಲಿ ಬಿತ್ತನೆ ಬೀಜ -ರಸಗೊಬ್ಬರಗಳ ಮಾರಾಟವನ್ನು ತಡೆಗಟ್ಟಲು. ಕೃತಕ ಅಭಾವ ಸೃಷ್ಟಿಸಿ ಕಾಳಸಂತೆ ಮಾರಾಟದ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಏPಖS) ವಿಜಯಪುರ ಜಿಲ್ಲಾ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮರಾಯ ಪೂಜಾರಿ ಮಾತನಾಡಿ, ಬಲವಂತದ ಸಾಲ ವಸೂಲಾತಿ ನಿಲ್ಲಬೇಕು. ಬರ ಪರಿಹಾರದ ಹಣವನ್ನು ಸಾಲಕ್ಕೆ ಕಟಾಯಿಸಿಕೊಳ್ಳಬಾರದು. ಸಾಲಕ್ಕೆ ಬರ ಪರಿಹಾರದ ಹಣ ಕಳೆದುಕೊಂಡಿರುವ ರೈತರ ಖಾತೆಗೆ ಹಣ ಮರಳಿಸಲು ಕ್ರಮ ಕೈಗೊಳ್ಳಬೇಕು ಹಾಗೂ ರೈತರ ಆತ್ಮಹತ್ಯೆ ತಡೆಗಟ್ಟಬೇಕು. ಕೃಷಿ ಚಟುವಟಿಕೆಗಳಿಗೆ ಅಗತ್ಯ ಬೆಂಬಲ ಒದಗಿಸಬೇಕು ಮತ್ತು ಬೆಳೆ ವಿಮೆ ಪರಿಹಾರ ಇತ್ಯರ್ಥಕ್ಕೆ ಕ್ರಮ ವಹಿಸಬೇಕು ಎಂದು ರಾಜ್ಯ, ಕೇಂದ್ರ ಸರ್ಕಾರಗಳನ್ನು ಆಗ್ರಹಿಸಿ ರಾಜ್ಯಾದ್ಯಂತ ಕರೆ ನೀಡಲಾಗಿದೆ. ಕಳೆದ ವರ್ಷ ಶತಮಾನದಲ್ಲೇ ಕಂಡರಿಯದ ಭೀಕರ ಬರಗಾಲವನ್ನು ರಾಜ್‌ಯ ಅನುಭವಿಸಿತ್ತು. ಯಾವುದೇ ಅರ್ಥ ಪೂರ್ಣ ಬರ ಪರಿಹಾರ ಕ್ರಮಗಳಿಲ್ಲದೇ ದೊಡ್ಡ ಪ್ರಮಾಣದ ಸಂಕಷ್ಟಕ್ಕೆ ಸಿಲುಕಿ ನರಳುತ್ತಿರುವ ರೈತಾಪಿ ಸಮುದಾಯವನ್ನು ಬಿತ್ತನೆ ಬೀಜ-ರಸಗೊಬ್ಬರ ಬೆಲೆಗಳ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಕೂಡಲೇ ಬೆಲೆಗಳನ್ನು ಇಳಿಸಬೇಕು. ಉತ್ತಮ ಮಳೆಯ ನಿರೀಕ್ಷೆಯಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸುವ ರೈತರನ್ನು ಬೀಜ ಗೊಬ್ಬರದ ವ್ಯಾಪಾರಿಗಳು ಶೋಷಣೆ ಮಾಡದಂತೆ ರಕ್ಷಣೆ ಒದಗಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ(ಏPಖS) ಕರ್ನಾಟಕ ರಾಜ್ಯ ಸಮಿತಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜನವಾದಿ ಮಹಿಳಾ ಸಂಘದ ಜಿಲ್ಲಾಧ್ಯಕ್ಷರಾದ ಭಾರತಿ ವಾಲಿ ಮಾತನಾಡಿ, ಕೃತಕ ಅಭಾವ ಸೃಷ್ಟಿಸಿ, ಕಾಳಸಂತೆ ಮಾರಾಟವನ್ನು ತಡೆಗಟ್ಟಬೇಕು, ಬಲವಂತದ ಸಾಲವಸೂಲಾತಿ ವಿರುದ್ಧ ರೈತರಿಗೆ ರಕ್ಷಣೆ ಒದಗಿಸಬೇಕು. ರಾಜ್ಯಾದ್ಯಂತ ನಡೆಯುತ್ತಿರುವ ವ್ಯಾಪಕ ರೈತ ಆತ್ಮಹತ್ಯೆಗಳನ್ನು ತಡೆಗಟ್ಟಲು ಅಗತ್ಯ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಅಭಿನೇಶ ಮಣೂರ, ಎ.ಆರ್.ಮುಂಜಣ್ಣಿ, ನಿತ್ಯಾನಂದ ಸಾಗರ, ಎಮ್.ಎ.ಜಮಾದಾರ, ಅನುಸೂಯಾ ಹಜೇರಿ, ಶಮಶಾದ ಬೆಗಂ, ಸಾಹೇಬಿ ಶೇಖ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Thursday, June 6, 2024

07-06-2024 EE DIVASA KANNADA DAILY NEWS PAPER

ಅರಣ್ಯ ಉಳಿಸಿ ಬೆಳೆಸುವ ಕಾರ್ಯವಾಗಲಿ ನಾವು ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ

ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ :  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವಿಜಯಪುರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಿಜಯಪುರ, ಜಿಲ್ಲಾ ಪೋಲಿಸ್ ಇಲಾಖೆ ಮತ್ತು ಬಿ.ಎಲ್.ಡಿ.ಇ. ಸಂಸ್ಥೆ ವಿಜಯಪುರ ಇವರ ಸಂಯುಕ್ತಾ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ಯವಾಗಿ ಸಸಿ ನೇಡುವ ಕಾರ್ಯಕ್ರಮದಲ್ಲಿ ಶ್ರೀ. ರಮೇಶ ಎಸ್. ಕಡಪಟ್ಟಿ, ಪರಿವೀಕ್ಷಣಾಧಿಕಾರಿಗಳು, ಸರಕಾರಿ ವೀಕ್ಷಣಾಲಯ ವಿಜಯಪುರ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. 

ಜೂನ ತಿಂಗಳಿನಲ್ಲಿ ನೆಟ್ಟಿರುವ ಸಸಿಗಳು ಮರವಾಗಿವೆ. ಅದೇ ರೀತಿ ನಮ್ಮ ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗದವರು ನೆಟ್ಟಿರುವ ಸಸಿಗಳನ್ನು ಮಗುವಿನಂತೆ ಗಾಳಿ ಮಳೆ ರಬಸದಲ್ಲಿ ಬೀಳದಂತೆ ಮುನ್ನೆಚರಿಕೆ ವಹಿಸಿರುವ ಕಾರಣಕ್ಕಾಗಿ ಇಂದು ಕಾನೂನಿನ ಸೌರಕ್ಷಣೆಗೆ ಒಳಗಾದ ಮಕ್ಕಳಿಗೆ ಹಾಗೂ ಪಾಲಕರಿಗೆ ನೇರಳಾಗಿವೆ. ಇದು ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೆಮ್ಮೆ ತರುವ ಸಂಗತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಮಲ್ಲಿಕಾರ್ಜುನ ಅಪ್ಪಾಸಾಹೆಬ ಅಂಬಲಿ ಗೌರವಾನ್ವಿತ ಪ್ರೀನ್ಸಿಪಲ್ ಸಿನೀಯರ್ ಸಿವೀಲ್ ಜಡ್ಜ್, ಸಿ.ಜೆ.ಎಮ್. ಮತ್ತು ಸದಸ್ಯ ಕಾರ್ಯದರ್ಶಗಳು ಕಾನೂನು ಸೇವಾ ಪ್ರಾಧಿಕಾರ ವಿಜಯಪುರ ರವರು ಮಾತನಾಡಿ ಬಸವಾದಿ ಶರಣರು ಪರಮ ಪೂಜ್ಯ, ಸಿದ್ದೇಶ್ವರ ಸ್ವಾಮಿಜಿಯವರು ಹುಟ್ಟಿದ ನಾಡು ವಿಜಯಪುರ ಇತಿಹಾಸವನ್ನು ನಿರ್ಮಿಸಿದ ಗೋಲಗುಂಬಜ ಹೊಂದಿದ ಅಂತಹ ಹೆಸರುಳ್ಳ ನಾಡಿನಲ್ಲಿ ಇಂದು ನಾವು ಈ ವಿಶ್ವ ಪರಿಸರದ ದಿನದಂದು ಸಸಿ ನೇಡುವುದರ ಜೊತೆಗೆ ಪರಿಸರ ಉಳಿಸಿ ಬೆಳೆಸುವುದು ಮಹತ್ತರ ಜವಾಬ್ದಾರಿ ನಮ್ಮದಾಗಿದೆ ಎಂದು ಹೇಳಿದರು. 

ಆ ನಿಟ್ಟಿನಲ್ಲಿ ನಮ್ಮ ರ‍್ವಜರು, ನಮ್ಮ ಹಿರಿಯರು ಪರಿಸರ ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಇಂದು ತದ್ವಿರುದ್ದವಾಗಿ ಆಧುನಿಕರಣಕ್ಕೆ ಒಳಪಟ್ಟು ಪ್ರೀಡ್ಜ್, ಎ.ಸಿ., ಬಳಕೆ ಸಾಮಾನ್ಯವಾಗಿದೆ. ಈ ಒಂದು ಯಂತ್ರಗಳಿAದ ಹೊರಹೊಮ್ಮುವ ಕಲ್ಮಶಗಳಿಂದ ಓಝೋನ್ ಪದರಗಳಿಗೆ ರಂದ್ರಗಳಾಗುತ್ತಿರುವುದರಿAದ ಇಂದು ನಾವು ಏಚೇತ್ತವಾದ ಬೀಸಿಲಿನ ತಾಪವನ್ನು ಅನುಭವಿಸುತ್ತಿದ್ದೇವೆ. ಆದ್ದರಿಂದ ಇಂದು ಪರಿಸರ ದಿನದಂದು ನಾವು ಎಲ್ಲರೂ ಪ್ರಜ್ಞಾವಂತ ನಾಗರೀಕರಾಗಿ ಮನೆಗೊಂದು ಮರ ಬೆಳೆಸೋಣ ಮತ್ತು ನಮ್ಮ ಪೂರ್ವಜನರು, ಹಿರಿಯರು ಹಾಕಿ ಕೊಟ್ಟ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಉಳಿಸುವುದರಿಂದ ಪರಿಸರ ಉಳಿಯಲು ನಾವು ಕಾರಣಿಭೂತರಾಗೋಣ ಅದರಂತೆ ಮುಂದಿನ ಪೀಳಿಗೆಗೆ ಆರೋಗ್ಯವಂತ ಪರಿಸರವನ್ನು ಕೊಡೋಣ ಎಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಮುಖ್ಯ ಅತಿಥಿಗಳಾದ ಬಸವರಾಜ ಯಲಿಗಾರ, ಡಿ.ವಾಯ್.ಎಸ್.ಪಿ. ವಿಜಯಪುರ ಶಹರ ರವರು ಮಾತನಾಡಿ ಪ್ಲಾಸ್ಟಿಕ್ ಮುಕ್ತ ಪರಿಸರ ನಮ್ಮದಾಗಿರಲಿ ಮತ್ತು ಒಬ್ಬ ಮನುಷ್ಯ ಜೀವನದಲ್ಲಿ ಸಾವಿರ ಸಸಿಗಳನ್ನು ನೆಟ್ಟು ಅವು ಮರವಾಗಿ ಬೆಳೆಯುವಂತೆ ನೀಗಾ ವಹಿಸೋಣ ಎಂದು ಕರೆ ನೀಡಿದರು. 

 ಶ್ರೀಕಾಂತ್ ಬಿರಾದಾರ್ ಆಪ್ತ ಸಮಾಲೋಚಕರು ಸರ್ಕಾರಿ ವೀಕ್ಷಣಾಲಯ ವಿಜಯಪುರ ರವರು ಮಾತನಾಡಿ ನಾವು ಹಳ್ಳಿಗಳಲ್ಲಿ ಪಕ್ಷಿಗಳ ದ್ವನಿಗಳನ್ನು ಕೇಳುವುದು ಸಹಜ ಆದರೆ ನಗರ ಪ್ರದೇಶಗಳ ಪಕ್ಷಿಗಳ ದ್ವನಿ ಕೇಳಿ ಬರುವುದು ತುಂಬಾ ವಿರಳ ಅದರ ತದ್ವಿರುದ್ದವಾಗಿ ಇಂದು ನಗರ ಪ್ರದೇಶದಲ್ಲಿರುವ ನಮ್ಮ ಸರಕಾರಿ ವೀಕ್ಷಣಾಲಯ ಆವರಣದಲ್ಲಿ ಸುಮಾರು 80 ಮರಗಳಿರುವ ಕಾರಣಕ್ಕಾಗಿ ಪಕ್ಷಿಗಳಲ್ಲಿ ಒಂದಾದ ಕೋಗಿಲೆಯ ಇಂಪಾದ ದ್ವನಿ ಕೇಳುತ್ತಿರುವುದು ಹೆಮ್ಮೆಯ ಸಂಗತಿ. ಸಂತೃಪ್ತಿಯನ್ನು ಹೊಂದಬೇಕಾದರೆ ದಿನನಿತ್ಯದ ಜೀವನದಲ್ಲಿ ಪರಿಸರವನ್ನು ಪ್ರೀತಿಸುವುದು, ಪರಿಸರದ ಕಾಳಜಿ, ಮತ್ತು ಪರಿಸರ ವೀಕ್ಷಣೆ ಮಾಡುವುದರಿಂದ ನಾವು ಒತ್ತಡ ಮುಕ್ತ ಜೀವನ ಸಾಗಿಸಲು ಸಾಧ್ಯವಿದೆ.

ಅಧ್ಯಕ್ಷರು ಶ್ರೀ ದೀಪಾಕ್ಷಿ ಜಾನಕಿ ಮಾನ್ಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವಿಜಯಪುರ ರವರು ಮಾತನಾಡಿ ನಾವು ಮನೆಯಲ್ಲಿ ಮಕ್ಕಳನ್ನು ಹೇಗೆ ಪಾಲನೆ ಪೋಷಣೆ ಮಾಡುತ್ತೇವೆ ಹಾಗೆ ಒಂದು ಸಸಿಯನ್ನು ನೆಟ್ಟು ಮರವಾಗುವವರೆಗೆ ಆ ಸಸಿಯನ್ನು ನಾವು ಮಗುವಿನಂತೆ ಬೆಳೆಸೋಣ ಎಂದು ಸಂಕಲ್ಪನೆ ಮಾಡಿದರು. ಶ್ರೀಕಾಂತ್ ಬಿರಾದಾರ್ ಆಪ್ತ ಸಮಾಲೋಚಕರು ಸರ್ಕಾರಿ ವೀಕ್ಷಣಾಲಯ ವಿಜಯಪುರ ಇವರು ನಿರೂಪಿಸಿದರು. ಸುನೀಲ ಕಳಸನ್ನವರ. ಗೃಹಪಾಲಕರು, ಸರ್ಕಾರಿ ವೀಕ್ಷಣಾಲಯ ವಿಜಯಪ, ರಾಜೇಶ ಉಕ್ಕಲಿ ವಂದಣಾರ್ಪಣೆ ನೆರವೇರಿಸಿದರು. 

ರಮೇಶ ಕಡಪಟ್ಟಿ, ಪರಿವೀಕ್ಷಣಾಧಿಕಾರಿಗಳು ಸರಕಾರಿ ವೀಕ್ಷಣಾಲಯ, ಶ್ರೀ. ರಮೇಶ ಜಿ. ಕುಲಕರ್ಣಿ, ಮಾನ್ಯ ಸದಸ್ಯರು ಬಾಲ ನ್ಯಾಯ ಮಂಡಳಿ , ಪರಮೇಶ್ವರ ಕವಟಗಿ, ಸಿ.ಪಿ.ಐ. ಎಸ್.ಪಿ. ಆಫೀಸ್ ವಿಜಯಪುರ, ಶ್ರೀ ಶಿವಾನಂದ ಕಟ್ಟಿಮನಿ, ಎ.ಎಸ್.ಐ. ಸಂಚಾರಿ ಪೋಲಿಸ್ ಠಾಣೆ ವಿಜಯಪುರ, ಶ್ರೀಮತಿ ವಾಣಿಶ್ರೀ ನಿಂಬಾಳ, ಶ್ರೀ ವಿಜಯಕುಮಾರ ತಳವಾರ, ಎನ್.ಎಸ್.ಎಸ್. ಪ್ರೋಗ್ರಾಮ್ ಆಫೀಸರ್, ಎನ್.ಎಸ್.ಎಸ್ ಶಿಬರ‍್ಥಿಗಳು ಬಿ.ಎಲ್.ಡಿ.ಈ. ಎ.ಎಸ್. ಪಾಟಿಲ್ ಕಾಲೆಜ್ ವಿಜಯಪುರ, ಕುಮಾರಿ ಶೋಭಾ ಕಾಂಬಳೆ, ಶ್ರೀಮತಿ ಸಾವಿತ್ರಿ ಹಿಟ್ನಳ್ಳಿ, ಶ್ರೀಮತಿ ಸರಸ್ವತಿ ನುಚ್ಚನ್ನವರ, ಶ್ರೀ.ಕುಮಾರ ದೇವರಗುಡಿ, ಲಕ್ಷ್ಮಣ್ ಭಜಂತ್ರಿ, ಶ್ರೀ. ಚಂದ್ರಕಾAತ ವಾಂಡಕರ ಹಾಗೂ ಶ್ರೀಶೈಲ ಕಾಂಬಳೆ ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.