Friday, August 11, 2023

ಹಿರಿಯ ಸಾಹಿತಿ ದೊಡ್ಡಣ್ಣ ಬಜಂತ್ರಿ ಅವರಿಗೆ ರಾಜ್ಯ ಮಟ್ಟದ ದತ್ತಿ ಪ್ರಶಸ್ತಿ

 ಈ ದಿವಸ ವಾರ್ತೆ

ವಿಜಯಪುರ: ದೊಡ್ಡಣ್ಣ ಬಜಂತ್ರಿ ವಿಜಯಪುರ ಅವರು ರಚಿಸಿದ "ಒಲೆಯಹೊಕ್ಕು" ಕವನಸಂಕಲನ ಕ್ಕೆ ಸಮೀರವಾಡಿಯಲ್ಲಿ ಜರುಗಿದ ೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ದತ್ತಿ ಪ್ರಶಸ್ತಿ ಗೆ ಆಯ್ಕೆ ಯಾಗಿದ್ದು, ಇದೆ ದಿನಾಂಕ ೧೩-೮-೨೦೨೩ರಂದು ಜಮಖಂಡಿ ಯಲ್ಲಿ ಜರಗುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ದೊಡ್ಡಣ್ಣ ಬಜಂತ್ರಿ ಯವರು ೫ ಕವನ ಸಂಕಲನಗಳನ್ನು(ಕಾಲ ಕೆಟ್ಟಿತ ತಂಗಿ,  ಲಚ್ಚ, ತುಂತುರು,ತಲ್ಲಣದ ಹಕ್ಕಿಹಾಡು, ಒಲೆಯಹೊಕ್ಕು ) ೨ ನಾಟಕಗಳನ್ನು,(ಕತ್ತಲುಹರಿಯಿತು, ನಿಶ್ಯಾದಾಗಿನ ಮಾತ ಆತು) ೧ ವಿನೋದ ಕಥಾಸಂಕಲನ,(ಕ್ಷಯಾಂಬರ). ೨೦೧೭ರಕಾವ್ಯ ಕರ್ನಾಟಕ ಸಾಹಿತ್ಯ ಅಕಾಡಮಿಯ ಬೆಂಗಳೂರು ಸಂಪಾದನೆ ಕೃತಿಗಳನ್ನೊಳಗೊಂಡು ಅನೇಕ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಅಲ್ಲದೆ ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯ ಸಂಚಾಲಕ ರಾಗಿ ಕಾರ್ಯ ನಿರ್ವಹಿಸುತಿರುವ ಇವರು ವಿಜಯಪುರ ಜಿಲ್ಲೆಯ ಹಿರಿಯ ಸಾಹಿತಿಗಳ ಸಾಲಿನಲ್ಲಿ ಇವರು ಒಬ್ಬರಾಗಿದ್ದಾರೆ.

Sunday, August 6, 2023

07-08-2023 EE DIVASA KANNADA DAILY NEWS PAPER

ಕಲಬುರಗಿಯಲ್ಲಿ ಸುನೀಲಕುಮಾರ ಸುಧಾಕರ ನಿರ್ದೇಶನದ ರಮಾಸಾಹೇಬಾ ಚಿತ್ರ ಪ್ರದರ್ಶನ ಹಾಗೂ ಸಂವಾದ

ಈ ದಿವಸ ವಾರ್ತೆ

ವಿಜಯಪುರ: ಅಂಬೇಡ್ಕರ್ ಆಗಿ ಪ್ರೊ ಎಚ್ ಟಿ ಪೋತೆ ಅವರು ರಾಮಾಸಾಹೇಬ್ ಚಿತ್ರದಲ್ಲಿ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ ಎಂದು ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ ಅವರು ಹೇಳಿದರು. ಅವರು ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ರೇಖಾ ಪಾಟೀಲ ಅವರು ಚಿತ್ರದಲ್ಲಿ ನಟಿಸುತ್ತಾ ನಟಿಸುತ್ತಾ ರಾಮಬಾಯಿಯಾಗಿ ಜೀವಂತಕಿ ತುಂಬಿದ್ದಾರೆ, ಚಿತ್ರದಲ್ಲಿ ಕ್ಯಾಮೆರಾ ಸಂಭಾಷಣೆ, ಡಬ್ಬಿಂಗ್ ಎಲ್ಲವೂ ಸೊಗಸಾಗಿ ಮೂಡಿಬಂದಿದೆ ಎಂದು ಅವರು ಹೇಳಿದರು.



ಕೇಂದ್ರೀಯ ವಿವಿ ಪ್ರಾಧ್ಯಪಕಿ ಮಹಿಮಾ ರಾಜ್ ಅವರು ಮಾತನಾಡಿ ಚಿತ್ರ ಸೊಗಸಾಗಿ ಮೂಡಿ ಬಂದಿದ್ದಕ್ಕೆ ಎಲ್ಲರನ್ನು ಅಭಿನಂದಿಸುತ್ತೇನೆ ಮರಾಠಿಯಲ್ಲಿ ಕೆಲವು ಸಿನಿಮಾಗಳು ಬಂದಿವೆ ಆದರೆ ಕನ್ನಡದಲ್ಲಿ ಬಂದಿರಲಿಲ್ಲ ಈ ಥರ ಚಿತ್ರಗಳು ಹೆಚ್ಚಾಗಿ ಬರಬೇಕು ಈ ಸಿನಿಮಾದಲ್ಲಿ ಸಾಕಷ್ಟು ಪ್ರಯೋಗಶೀಲ ಗುಣಗಳಿವೆ ಒಂದು ಕಡೆ ರಮಾಬಾಯಿ ಕಷ್ಟದ ಜೀವನ ಸಾಗಿಸುತ್ತಿದ್ದಾರೆ ಇನ್ನೊಂದೆಡೆ ಅಂಬೇಡ್ಕರ್ ಅವರ ಶೈಕ್ಷಣಿಕ ಮತ್ತು ಔದ್ಯೋಗಿಕ ಜೀವನವನ್ನು ಸುಂದರವಾಗಿ ತೋರಿಸುವ ಕೆಲಸವನ್ನು ನಿರ್ದೇಶಕ ಸುನೀಲಕುಮಾರ ಸುಧಾಕರ ಅವರು ಮಾಡಿದ್ದಾರೆ ಸಾಮಾಜಿಕ ಪ್ರಜ್ಞೆ ಮೂಡಿಸುವ ಏಕೀಕರಣಗೊಳಿಸುವ ಕೆಲಸವನ್ನು ಒಟ್ಟೊಟ್ಟಿಗೆ ಮಾಡುತ್ತದೆ ಎಂದು ಹೇಳಿದರು.

ಸುರೇಶ ಬಡಿಗೇರ :ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ತಿಳಿದುಕೊಳ್ಳುವುದು ಭಾಳ ಇದೆ ಹಿಂದೂ ಧರ್ಮದ ದೇವರ ಮೇಲೆ ರಮಾತಾಯಿ ಅವರಿಗೆ ಭಾಳ ಭಕ್ತಿ ಇತ್ತು,ರಮಾತಾಯಿ ತ್ಯಾಗದಿಂದ ಬಾಬಾಸಾಹೇಬರು ವಿಶ್ವ ಮಟ್ಟಕ್ಕೆ ಬೆಳೆದರೂ ಪೋತೆ ಸರ್ ಅಂಬೇಡ್ಕರ್ ಅವರ ಪಾತ್ರ ಮಾಡಿದ್ದೂ ನಮ್ಮ ಮನೆಯ ಅಣ್ಣನೇ ಮಾಡಿದಷ್ಟು ಖುಷಿಯಾಗಿದೆ,ಈ ಸಿನಿಮಾ ಎಲ್ಲರ ಕಣ್ಣಲ್ಲಿ ನೀರು ತರಿಸಿತು ಅಪರೂಪದ ಸಿನಿಮಾ ಶಾಲೆ ಕಾಲೇಜುಗಳಲ್ಲಿ ಪ್ರದರ್ಶನಗೊಳ್ಳಬೇಕು ಎಂದರು. ದಸಾಪ ರಾಜ್ಯ ಖಜಾಂಚಿ ಅವರು ಮಾತನಾಡಿ ನಮ್ಮ ಕಾಲದ ಬಾಬಾಸಾಹೇಬರಾಗಿ ನಮ್ಮ ಮಧ್ಯ ಪೋತೆ ಅವರು ಇದ್ದಾರೆ ಅಕ್ಷರ ಕ್ರಾಂತಿಯ ಈ ಚಿತ್ರದಲ್ಲಿ ಬದುಕೇ ಹಾಡಾಗಿದೆ ಎಲ್ಲ ನೋವುಗಳನ್ನು ಕಲಾತ್ಮಕವಾಗಿ ಚಿತ್ರಿಸುವ ಕಲೆ ಕರಗತ ಮಾಡಿಕೊಂಡಿರುವ ನಿರ್ದೇಶಕ ಸುನೀಲಕುಮಾರ ಸುಧಾಕರ ಅವರ ಶ್ರಮ ಸಾರ್ಥಕವಾದದ್ದು ಎಂದರು. ನಿಕಟ ಪೂರ್ವ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅವರು ಮಾತನಾಡಿ ರಮಾಬಾಯಿ ಮತ್ತು ಅಂಬೇಡ್ಕರ್ ಎರಡು ಪಾತ್ರಧಾರಿಗಳು ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ ಈ ರೀತಿಯ ಸಿನಿಮಾ ನೋಡಲು ಪ್ರೇಕ್ಷಕರಿಗೆ ವಿಶೇಷ ಮನಸ್ಥಿತಿ ಬೇಕಾಗುತ್ತದೆ ಅಂಬೇಡ್ಕರ್ ಅವರದ್ದು ಗಂಭೀರ ವ್ಯಕ್ತಿತ್ವ ಅಂತಹ ಪರಿಣಾಮಕಾರಿ ಪಾತ್ರ ಈ ಸಿನಿಮಾದಲ್ಲಿ ಅಂಬೇಡ್ಕರ್ ಅವರನ್ನು ಕನ್ನಡದ ಅಂಬೇಡ್ಕರ್ ಆಗಿ ತೋರಿಸಿದ್ದು ಹೆಮ್ಮೆಯ ವಿಷಯ ಎಂದು ಹೇಳಿದರು. ಅರುಣ ಜೋಳದ ಕೂಡಗಿ ಅವರು ಮಾತನಾಡಿ ಎಲ್ಲವನ್ನು ದೃಶ್ಯದಲ್ಲಿ ಕಟ್ಟಿಕೊಡುವ ಮೂಲಕ ರಮಾಬಾಯಿ ಅವರ ವ್ಯಕ್ತಿತ್ವವನ್ನು ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದು ಉತ್ತಮ ಬೆಳವಣಿಗೆ ಎಂದು ಹೇಳಿದರು.ಪ್ರೊ ಎಚ್ ಟಿ ಪೋತೆ ಅವರು ಮಾತನಾಡಿ ಚಿತ್ರ ತಂಡದ ಪ್ರೀತಿ ವಿಶ್ವಾಸಕ್ಕೆ ನಾನು ಪಾತ್ರನಾಗಿ ಈ ಚಿತ್ರ ನಾನು ಮಾಡಿದೆ ನಾನು ಚಿತ್ರ ಮಾಡುವುದಾಗಿ ಭಾವುಕ ನಾಗಿ ಅತ್ತಿದ್ದೆ, ಚಿತ್ರದಲ್ಲಿ ಕನಿಷ್ಠ ಬಡತನ ತೋರಿಸುವ ಕೆಲಸವನ್ನು ನೈಜವಾಗಿ ತೋರಿಸುವ  ಕೆಲಸ ಮಾಡಿದ ನಿರ್ದೇಶಕರ ಕಾರ್ಯ ಶ್ಲಾಘನೀಯವಾದುದು ಸಿನಿಮಾದ ಮಿತಿಗಳ ನಡುವೆ ಉತ್ತಮ ಪ್ರಯತ್ನ ಮಾಡಿದ್ದಾರೆ ಎಂದರು.


ಈ ಸಂದರ್ಭದಲ್ಲಿ ದಸಾಪ ರಾಜ್ಯಾಧ್ಯಕ್ಷ ಅರ್ಜುನ ಗೊಳಸಂಗಿ,  ನಿರ್ದೇಶಕ ಸುನೀಲಕುಮಾರ ಸುಧಾಕರ, ನಿರ್ಮಾಪಕ ಜೀವನ ಗೊಳಸಂಗಿ,  ನಟಿ ರೇಖಾ ಪಾಟೀಲ, ಕಲಾವಿದ ವಿಶ್ವೇಶ್ವರಯ್ಯ ಮಠಪತಿ, ಬಾಬು ತಡ್ಲಿ, ಲಕ್ಷಣ‌ ಹಂದ್ರಾಳ, ಲಾಯಪ್ಪ ಇಂಗಳೆ , ಕಲ್ಲಪ್ಪ ಶಿವಶರಣ, ರಾಹುಲ್ ಮೆಳ್ಳಿ, ಸುನೀಲ ಕಳ್ಳಿಮನಿ, , ಚಂದ್ರಶೇಖರ ಅಂಬಲಿ, ಜಗದೀಶ ಗಲಗಲಿ, ಶ್ರೀಶೈಲ ನಾಗರಾಳ‌ ,ಪ್ರೀತಿ ಪಾಟೀಲ ಸೇರಿದಂತೆ ಕಲ್ಬುರ್ಗಿ ವಿಭಾಗದ ಪ್ರಾಧ್ಯಾಪಕರು ಹಾಗೂ ವಿವಿಧ ಸಾಹಿತಿಗಳು ಕಲಾವಿದರು ಹಾಗೂ ವಿದ್ಯಾರ್ಥಿಗಳು ಹಾಗೂ ಎಚ್.ಟಿ.ಪೋತೆ ಅವರ ಅಭಿಮಾನಿಗಳು  ಮುಂತಾದವರು ಉಪಸ್ಥಿತರಿದ್ದರು.