Friday, August 11, 2023

ಹಿರಿಯ ಸಾಹಿತಿ ದೊಡ್ಡಣ್ಣ ಬಜಂತ್ರಿ ಅವರಿಗೆ ರಾಜ್ಯ ಮಟ್ಟದ ದತ್ತಿ ಪ್ರಶಸ್ತಿ

 ಈ ದಿವಸ ವಾರ್ತೆ

ವಿಜಯಪುರ: ದೊಡ್ಡಣ್ಣ ಬಜಂತ್ರಿ ವಿಜಯಪುರ ಅವರು ರಚಿಸಿದ "ಒಲೆಯಹೊಕ್ಕು" ಕವನಸಂಕಲನ ಕ್ಕೆ ಸಮೀರವಾಡಿಯಲ್ಲಿ ಜರುಗಿದ ೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ದತ್ತಿ ಪ್ರಶಸ್ತಿ ಗೆ ಆಯ್ಕೆ ಯಾಗಿದ್ದು, ಇದೆ ದಿನಾಂಕ ೧೩-೮-೨೦೨೩ರಂದು ಜಮಖಂಡಿ ಯಲ್ಲಿ ಜರಗುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ದೊಡ್ಡಣ್ಣ ಬಜಂತ್ರಿ ಯವರು ೫ ಕವನ ಸಂಕಲನಗಳನ್ನು(ಕಾಲ ಕೆಟ್ಟಿತ ತಂಗಿ,  ಲಚ್ಚ, ತುಂತುರು,ತಲ್ಲಣದ ಹಕ್ಕಿಹಾಡು, ಒಲೆಯಹೊಕ್ಕು ) ೨ ನಾಟಕಗಳನ್ನು,(ಕತ್ತಲುಹರಿಯಿತು, ನಿಶ್ಯಾದಾಗಿನ ಮಾತ ಆತು) ೧ ವಿನೋದ ಕಥಾಸಂಕಲನ,(ಕ್ಷಯಾಂಬರ). ೨೦೧೭ರಕಾವ್ಯ ಕರ್ನಾಟಕ ಸಾಹಿತ್ಯ ಅಕಾಡಮಿಯ ಬೆಂಗಳೂರು ಸಂಪಾದನೆ ಕೃತಿಗಳನ್ನೊಳಗೊಂಡು ಅನೇಕ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಅಲ್ಲದೆ ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯ ಸಂಚಾಲಕ ರಾಗಿ ಕಾರ್ಯ ನಿರ್ವಹಿಸುತಿರುವ ಇವರು ವಿಜಯಪುರ ಜಿಲ್ಲೆಯ ಹಿರಿಯ ಸಾಹಿತಿಗಳ ಸಾಲಿನಲ್ಲಿ ಇವರು ಒಬ್ಬರಾಗಿದ್ದಾರೆ.

No comments:

Post a Comment