Sunday, July 23, 2023

ಜು.29, 30 ರಂದು ಹಮ್ಮಿಕೊಂಡಿರುವ 10 ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಸಿದ್ದತೆ ಭರದಿಂದ ಸಾಗಿದೆ: ರಾಜ್ಯಾಧ್ಯಕ್ಷ ಅರ್ಜುನ ಗೊಳಸಂಗಿ ಹೇಳಿಕೆ

ಈ ದಿವಸ ವಾರ್ತೆ

ವಿಜಯಪುರ: ಪ್ರಬುದ್ಧ ಭಾರತದ ಆಶಯದೊಂದಿಗೆ ವಿಜಯಪುರ ನಗರದ ಕಂದಗಲ ಹನುಮಂತರಾಯ ರಂಗಮಂದಿರದಲ್ಲಿ ಜುಲೈ ೨೯ ಮತ್ತು ೩೦ ರಂದು ೧೦ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಜರುಗಲಿದೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿಯವರು ಹೇಳಿದರು. 

ಅವರು ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಸಮ್ಮೇಳನದ ಪೂರ್ವ ಸಿದ್ಧತೆಗಳ ಕುರಿತು ಹಮ್ಮಿಕೊಂಡಿದ್ದ ಮಾಧ್ಯಮಗೋಷ್ಠಿಯಲ್ಲಿ ಸಮ್ಮೇಳನದ ಆಮಂತ್ರಣ ಪತ್ರಿಕೆ ಹಾಗೂ ಬೆಳ್ಳಿ ಸಂಭ್ರಮದ ವಿಶೇಷವಾಗಿ ಮೂಡಿ ಬರುತ್ತಿರುವ ಪ್ರೊ. ಎಚ್.ಟಿ. ಪೋತೆ ಅವರ ಜನಪ್ರಿಯ ನಾಟಕ ರಮಾಯಿ ಆಧಾರಿತ ಸುನೀಲ ಸುಧಕಾರ ನಿರ್ದೇಶನದ ರಮಾಸಾಹೇಬಾ ಕಿರು ಚಲನ ಚಿತ್ರದ ಟೀಜರ ಬಿಡುಗಡೆ ಮಾಡಿ ಮಾತನಾಡಿದರು. 

ಕರ್ನಾಟಕ ರಾಜ್ಯದ ವಿವಿದ ವಿಶ್ವವಿದ್ಯಾಲಯಗಳ ಉಪನ್ಯಾಸಕರು ಹಾಗೂ ನಾಡಿನ ಬುದ್ಧ, ಬಸವ ಹಾಗೂ ಅಂಬೇಡ್ಕರ ಚಿಂತನೆಯ ಲೇಖಕರು ಸಾಹಿತಿಗಳು ವಿವಿಧ ಗೋಷ್ಠಿಯಲ್ಲಿ ಭಾಗವಹಿಸಿ ಉಪನ್ಯಾಸ ನೀಡಲಿದ್ದಾರೆ. ದಲಿತ ಸಾಹಿತ್ಯ ಪರಿಷತ್ತು, ಯಾವುದೇ ಒಂದು ಸಮಾಜಕ್ಕೆ ಸೀಮಿತವಾದುದ್ದಲ್ಲ. ಇದು ತುಳಿತಕ್ಕೊಳಗಾದ ಎಲ್ಲಾ ಸಮಾಜಗಳ ಧ್ವನಿಯಾಗಿ ಕೆಲಸ ಮಾಡುವಂತಹದು, ಸುಮಾರು ೨೯ ವರ್ಷಗಳ ಕಾಲ ನಿರಂತರವಾಗಿ ರಾಜ್ಯದಲ್ಲಿ ಬುದ್ಧ, ಬಸವ, ಹಾಗೂ ಅಂಬೇಡ್ಕರ್ ಚಿಂತನೆಯನ್ನು ಪ್ರಸಾರ ಮಾಡುವ ಕೆಲಸ ದ.ಸಾ.ಪ ಮಾಡಿಕೊಂಡು ಬರುತ್ತಿದೆ. ಬೆಳ್ಳಿ ಸಂಭ್ರಮದ ನಿಮಿತ್ಯ ವಿಜಯಪುರದಲ್ಲಿ ಅಖಿಲ ಭಾರತ ಮಟ್ಟದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಸಮ್ಮೇಳನ ಬಹು ವೈಶಿಷ್ಟಗಳು ಹೊಂದಿದೆ ಎಂದರು. 

ಸಮ್ಮೇಳನದ ಮೊದಲ ದಿನ ೨೯-೦೭-೨೦೨೩ ರಂದು ಬೆಳಿಗ್ಗೆ ೮ ಗಂಟೆಗೆ ಕಂದಗಲ್ ಹನುಮಂತರಾಯ ರಂಗಮAದಿರದ ಮುಂದೆ ಸಾಹಿತಿ ದೊಡ್ಡಣ್ಣ ಭಜಂತ್ರಿಯವರು ಪರಿಷತ್ತಿನ ಧ್ವಜಾರೋಹಣ ನೇರವೇರಿಸುವುದೊಂದಿಗೆ ಸಮ್ಮೇಳನಕ್ಕೆ ಚಾಲನೆ ಸಿಗಲಿವೆ. ಮುಖ್ಯ ಅತಿಥಿಗಳಾಗಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರುಗಳಾದ ರಮೇಶ ಆಸಂಗಿ, ಅಭಿಷೇಕ ಚಕ್ರವರ್ತಿ, ಭಾಗವಹಿಸಲಿದ್ದಾರೆ. 

ಅಂದು ಬೆಳಿಗ್ಗೆ ೮.೩೦ಕ್ಕೆ ನಗರದ ಹೃದಯ ಭಾಗ ಗಾಂಧಿ ವೃತ್ತದಿಂದ ಬಸವೇಶ್ವರ ವೃತ್ತ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜರುಗುವ ಸಮ್ಮೇಳಾಧ್ಯಕ್ಷರ ಮೆರವಣಿಗೆಗೆ ನಾಗಠಾಣ ಕ್ಷೇತ್ರದ ಮಾಜಿ ಶಾಸಕ ರಾಜು ಆಲಗೂರ ಅವರು ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಲಿತ ಸಂಘರ್ಷ ಸಮಿತಿ ಸಂಚಾಲಕರುಗಳಾದ ಅಡಿವೆಪ್ಪ ಸಾಲಗಲ್, ಚಂದ್ರಕಾAತ ಸಿಂಗೆ, ಶೇಷರಾವ್ ಮಾನೆ, ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 

ಕಾರ್ಯಕ್ರಮದ ಮುಖ್ಯ ಘಟ್ಟ,  ಉದ್ಘಾಟನಾ ಸಮಾರಂಭವನ್ನು ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಐಟಿ ಮತ್ತು ಬಿಟಿ ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸಲಿದ್ದಾರೆ.

ವಿಜಯಪುರ ಬುದ್ಧ ವಿಹಾರದ ಪೂಜ್ಯ ಸಂಘಪಾಲ ಬಂತೇಜಿಯವರು ನೇತೃತ್ವ ವಹಿಸಲಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಸಚಿವರಾದ ಪ್ರಿಯಾಂಕ ಖರ್ಗೆಯವರು ರಮಾ ಸಾಹೇಬಾ ಕಿರು ಚಿತ್ರ ಹಾಗೂ ಪರಿಷತ್ತಿನ ಗ್ರಂಥಗಳ ಬಿಡುಗಡೆ ಮಾಡಲಿದ್ದಾರೆ. 

ಚಿಂತಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಸಮ್ಮೇಳನದ ಆಶಯ ನುಡಿ ಆಡಲಿದ್ದಾರೆ. ಗಜಲ್ ಕವಿ ಅಲ್ಲಾಗಿರಿರಾಜ್ ನಿಕಟ ಪೂರ್ವ ಸಮ್ಮೇಳನಾಧ್ಯಕ್ಷರ ನುಡಿ ಆಡಲಿದ್ದಾರೆ. ಸಮ್ಮೇಳನಾಧ್ಯಕ್ಷ ಪ್ರೊ.ಎಚ್.ಟಿ ಪೋತೆ ಅವರು ಸಮ್ಮೇಳನ ಅಧ್ಯಕ್ಷ ನುಡಿ ಆಡಲಿದ್ದಾರೆ. ಜವಳಿ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಪುಸ್ತಕ ಮಳಿಗೆ ಉದ್ಘಾಟನೆ, ನಾಗಠಾಣ ಶಾಸಕ ವಿಠ್ಠಲ ಕಟಕದೋಂಡ ಅವರು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಮಾಜಿ ವಿಧಾನ ಪರಿಷತ್ತ ಸದಸ್ಯ ಡಿ.ಎಸ್. ವೀರಯ್ಯ ಅವರು ದಸಾಪ ಬೆಳ್ಳಿ ಸಂಭ್ರಮ ಕೈಪಿಡಿ ಬಿಡುಗಡೆ, ಸಿಂದಗಿ ಶಾಸಕ ಅಶೋಕ ಮನಗೂಳಿ, ಇತರ ಲೇಖಕರ ಕೃತಿ ಬಿಡುಗಡೆ ನೇರವೇರಿಸಲಿದ್ದಾರೆ. 

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ. ಸಾಗರ, ಸರ್ವಾಧ್ಯಕ್ಷರ ಪುಸ್ತಕ ಮಳಿಗೆ ಉದ್ಘಾಟನೆ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ದ.ಸಾ.ಪ. ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬುದ್ಧ ಎಜುಕೇಶನ್ ಸಮಿತಿ ಪ್ರ. ಕಾರ್ಯದರ್ಶಿ ತುಕಾರಾಮ ಚಂಚಲಕರ, ಕನ್ನಡ ಸಂಸ್ಕೃತಿ ಸಹಾಯಕ ನಿರ್ದೇಶಕ ಬಿ.ನಾಗರಾಜ, ಲೇಖಕೀಯರ ಸಂಘದ ಅಧ್ಯಕ್ಷೆ ಹೇಮಲತಾ ವಸ್ತçದ ಭಾಗವಹಿಸಲಿದ್ದಾರೆ. 

ಮಧ್ಯಾಹ್ನ ೧ ಗಂಟಗೆ ಜರುಗುವ ಗೋಷ್ಠಿ-೧ ವಿಶೇಷ ಉಪನ್ಯಾಸ ಮತ್ತು ಸಂವಾದದ ನೇತೃತ್ವವನ್ನು ಮೈಸೂರಿನ ವಿಶ್ವ ಮೈತ್ರಿ ಬುದ್ಧ ವಿಹಾರದ ಪೂಜ್ಯ ಡಾ. ಕಲ್ಯಾಣಸಿರಿ ಬಂತೇಜಿಯವರು ವಹಿಸಿಕೊಳ್ಳಲಿದ್ದಾರೆ. ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಎಮ್. ಪುಟ್ಟಯ್ಯನವರು ಪ್ರಬುದ್ಧ ಭಾರತ ನಿರ್ಮಾಣ ಎಂಬ ವಿಷಯ ಮಂಡಿಸಲಿದ್ದಾರೆ. ಸಾಹಿತಿಗಳಾದ ಅರುಣ ಜೋಳದ ಕೂಡ್ಲಗಿ, ಕರಿಗೂಳಿ ಶಂಕೇಶ್ವರ, ಡಾ.ಸೋಮಕ್ಕ, ಡಾ. ಮಲ್ಲೇಶಪ್ಪ ಸಿದ್ರಾಂಪೂರ, ಡಾ. ಸೂರ್ಯಕಾಂತ ಸುಜ್ಯಾತ, ಬಿ.ಎಂ.ಗುರುನಾಥ, ಪ್ರತಿಕ್ರಿಯೆ ನೀಡಲಿದ್ದಾರೆ. ಮಹಿಳಾ ವಿವಿ ಪ್ರಾಧ್ಯಾಪಕ ಡಾ. ನಾರಾಯಣ ಪವಾರ, ಡಾ. ಸಿದ್ಧಲಿಂಗಪ್ಪ ಕೋಟ್ನೇಕಲ್ಲ, ವೈ.ಸಿ. ಮಯೂರ, ಗೌರವ ಉಪಸ್ಥಿತಿ ವಹಿಸಲಿದ್ದಾರೆ. 

ಮಧ್ಯಾಹ್ನ ೨.೩೦ ಗಂಟೆಗೆ ಜರುಗುವ ಗೊಷ್ಠಿ-೨ ನಮ್ಮ ಸಂವಿಧಾನ ನಮ್ಮ ರಕ್ಷಣೆ ಕುರಿತು ಹೊಸತು ಪತ್ರಿಕೆಯ ಸಂಪಾದಕ ಡಾ. ಸಿದ್ಧಣಗೌಡ ಪಾಟೀಲ ವಿಷಯ ಮಂಡಿಸಲಿದ್ದಾರೆ. ಸಾಹಿತಿಗಳಾದ ಡಾ.ಸುಜಾತ ಚಲವಾದಿ, ಡಾ.ಓಬಳೇಶ, ಡಾ. ಪ್ರೇಮ ಅಪಚಂದ, ಡಾ. ರಾಮಚಂದ್ರ ಗಾಣಪೂರೆ, ಶ್ರೀದೇವಿ ಉತ್ಲಾಸರ ಅವರು ಪ್ರತಿಕ್ರಿಯೆ ನೀಡಲಿದ್ದಾರೆ. ಸಾಹಿತಿ ಸಂಘಟಕ ಅನೀಲ ಹೊಸಮನಿ, ಸಿ.ಎಸ್. ಆನಂದ, ಸಂದೀಪ ವಿಶ್ವನಾಥ ಅವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ. 

ಸಂಜೆ -೪ ಗಂಟೆಗೆ ಜರುಗುವ ಗೋಷ್ಠಿ - ೩ ಸಮ್ಮೇಳನಾಧ್ಯಕ್ಷರ ಸಾಹಿತ್ಯ- ಅಧ್ಯಕ್ಷತೆಯನ್ನು ಸಾಹಿತಿ ಡಾ. ಚನ್ನಪ್ಪ ಕಟ್ಟಿ ವಹಿಸಲಿದ್ದಾರೆ. ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಡಾ. ವಿಕ್ರಮ ವಿಸಾಜಿ ಯವರು ಸೃಜನ ಸಾಹಿತ್ಯ ಕುರಿತು ಮಾತನಾಡಲಿದ್ದಾರೆ. ಕ.ವಿ.ವಿ ಧಾರವಾಡ ಪ್ರಾಧ್ಯಾಪಕರಾದ ಡಾ. ಮುದೇನೂರು ನಿಂಗಪ್ಪ ಅವರು ಸೃಜನೇತರ ಸಾಹಿತ್ಯ ಕುರಿತು ವಿಷಯ ಮಂಡಿಸಲಿದ್ದಾರೆ. ಕಲಬುರಗಿಯ ಸಾಹಿತಿ ಡಾ. ಕಿರಣ ಗಾಜನೂರ ಅವರು ಜೀವನ ಚರಿತ್ರೆಗಳ ಕುರಿತು ಮಾತನಾಡಲಿದ್ದಾರೆ. ಬೆಂಗಳೂರಿನ ಸಾಹಿತಿ ಡಾ. ಶಿವರಾಜ ಬ್ಯಾಡರ ಹಳ್ಳಿಯವರು ಸಂಶೋಧನೆ ಕುರಿತು ಮಾತನಾಡಲಿದ್ದಾರೆ. ಡಾ. ಶಿವಗಂಗಾ ಬಲಗುಂದಿ, ಪ್ರೊ. ಅಂಜನಪ್ಪ ಅವರು ಪ್ರತಿಕ್ರಿಯೆ ನೀಡಲಿದ್ದಾರೆ. ವಿಜಯಪುರ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ, ಬುಕ್ ಬ್ರಹ್ಮ ಸಂಪಾದಕ ದೇವು ಪತ್ತಾರ, ಡಾ. ಜೈನೇಸ್ ಪ್ರಸಾದ, ಡಾ.ಬಸವರಾಜ ಪೂಜಾರ, ಮಹಿಳಾ ವಿ.ವಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಓಂಕಾರ ಕಾಕಡೆ ಗೌರವ ಉಪಸ್ಥಿತಿ ವಹಿಸಲಿದ್ದಾರೆ. 

ಸಂಜೆ -೫.೩೦ ಗಂಟೆಗೆ ಜರುಗುವ ಗೋಷ್ಠಿ - ೪ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಬೆಂಗಳೂರಿನ ಕವಿಗಳಾದ ಡಾ.ಟಿ. ಯಲ್ಲಪ್ಪ ವಹಿಸಲಿದ್ದಾರೆ. ರಾಯಚೂರಿನ ಕವಿಗಳಾದ ಡಾ. ಆರೀಫರಾಜಾ ಆಶಯನುಡಿಯಾಡಲಿದ್ದಾರೆ. ವಿಜಯಪುರ ಕವಯತ್ರಿ ಇಂದುಮತಿ ಲಮಾಣಿ ಅತಿಥಿಗಳಾಗಿ ಹಾಗೂ ಕೋಲಾರದ ದ.ಸಾ.ಪ ಅಧ್ಯಕ್ಷ ಡಾ.ಜಯಮಂಗಲ ಚಂದ್ರಶೇಖರ ಅವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ. 

ನಾಡಿನ ಸುಮಾರು ೨೪ ಹೆಸರಾಂತ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚಸಲಿದ್ದಾರೆ. 

ದಿನಾಂಕ : ೩೦-೦೭-೨೦೨೩ ರಂದು ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಬೆಳ್ಳಿ ಪ್ರಶಸ್ತಿ ಪ್ರದಾನ ಸಮಾರಂಭ ಶರಣ ಕಲಾ ಬಳಗದವರ ಸಮತಾ ಗೀತೆಗಳ ಮೂಲಕ ಪ್ರಾರಂಭವಾಗಲಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಕ.ವಿ.ವಿ ಹಂಪಿಯ ಪ್ರಾಧ್ಯಾಪಕ ಡಾ. ಚಲುವರಾಜು ಅಭಿನಂದನ ನುಡಿ ಆಡಲಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಡಿನ ವಿವಿಧ ಭಾಗದ ಸಾಹಿತಿಗಳಾದ ಆರ್. ದೊಡ್ಡೇಗೌಡ, ವೀರ ಹನುಮಾನ, ಶ್ರೀಶೈಲ ನಾಗರಾಳ, ಡಾ. ಗವಿಸಿದ್ದಪ್ಪ ಪಾಟೀಲ, ಮುರ್ತುಜಾ ಬೇಗಂ ಕೊಡಗಲಿ, ಹಾರೋಹಳ್ಳಿ ರವೀಂದ್ರ, ಪರುಶರಾಮ ಶಿವಶರಣ, ಸಮಾಜ ಸೇವೆಯಲ್ಲಿ ನರೇಂದ್ರ ನಾಗವಾಲ, ದಲಿತ ಚಳುವಳಿಯಲ್ಲಿ ಮಳ್ಳೂರ ಶಿವಮಲ್ಲು, ಪತ್ರಿಕಾರಂಗದಲ್ಲಿ ಡಾ. ಸಂಜೀವಕುಮಾರ ಮಾಲಗತ್ತಿ, ರಾಜು ವಿಜಯಪುರ, ಚಿತ್ರಕಕಲೆಯಲ್ಲಿ ಸೌಜನ್ಯ ಕರಡೋಣಿ, ಸಂಗೀತದಲ್ಲಿ ಸಿ.ಆರ್. ನಟರಾಜ, ಸಿನಿಮಾ ಕ್ಷೆತ್ರದಲ್ಲಿ ದೇವು ಕೆ. ಅಂಬಿಗ ಅವರಿಗೆ ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಸಂಭ್ರಮದ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 

ಸಂಜೆ ೭ ಗಂಟೆಗೆ ಜೀವನ ಸಿನಿ ಕ್ರಿಯೇಷನ್ಸ್ ಅರ್ಪಿಸುವ ರಮಾಸಾಹೇಬಾ ಕಿರುಚಿತ್ರ ಪ್ರದರ್ಶನ ಜರುಗಲಿದೆ.

ಇದೇ ಸಂದರ್ಭದಲ್ಲಿ ಉರಿವ ಕರುಳ ದೀಪ (ಕಾವ್ಯದ)ಲೇಖಕರಾದ ಬಿದಲೋಟಿ ರಂಗನಾಥ ಹಾಗೂ ಇರುವುದು ಒಂದೇ ರೊಟ್ಟಿ (ಕಾವ್ಯ) ಅವರಿಗೆ ಶ್ರೀಮತಿ ಚಂದ್ರಕಲಾ ಇಟಗಿ ಮಠ ದತ್ತಿ ಪ್ರಶಸ್ತಿ, 

ತಾಂಡ ಕಾದಂಬರಿ ಲೇಖಕರಾದ ಡಾ. ಶಾಂತಾನಾಯಕ ಶಿರಗಾನಹಳ್ಳಿ ಬೋಳೇ ಬಂಡೆಪ್ಪ ದತ್ತಿ ಪ್ರಶಸ್ತಿ, ಕಿಟಕಿಯಂಚಿನ ಮೌನ (ಕಥೆ)ಗೆ ರೇನುಕಾ ಹೆಳವರ ಅವರಿಗೆ ತಿಪ್ಪಣ್ಣ ಪೋತೆ ದತ್ತಿ ಪ್ರಶಸ್ತಿ, ಸೈಂಧವ ಸಂಕಥನದ (ಸಂಶೋಧನೆ) ಲೇ. ಪಿ.ಆರ್.ಡಿ ಮಲ್ಲಯ್ಯಕಟೇರ ಅವರಿಗೆ ಡಾ. ಶರಣಮ್ಮ ಗೋರೆಭಾಳ ದತ್ತಿ ಪ್ರಶಸ್ತಿ, ನೆಲರೂಪಿ (ವಿಮರ್ಶೆ) ಲೇ.ಡಾ.ಪ್ರಸನ್ನ ನಂಜಾಪುರ ಹಾಗೂ ಅಕ್ಷರ ಮೈತ್ರಿ ಲೆ. ಡಾ.ಗಿರೀಶ ಮುಗತಿ ಹಳ್ಳಿಯವರಿಗೆ ಶ್ರೀಮತಿ ವೆಂಕಟಲಕ್ಷö್ಮಮ್ಮ ದತ್ತಿ ಪ್ರಶಸ್ತಿ, ತ್ಯಾಗಮಯಿ ರಮಾಬಾಯಿ ಅಂಬೇಡ್ಕರ್ (ಅನುವಾದ) ಲೇ. ಪ್ರಭುಲಿಂಗ ನೀಲೂರೇ ಅವರಿಗೆ ರಾಧಾಭಾಯಿ ಭೋರಗಾಂವಕರ ದತ್ತಿ ಪ್ರಶಸ್ತಿ, ಮಾತಿನ ಮಂಟಪ (ಹರಟೆ) ಲೇ. ಗೌಡಗೇರ ಮಾಯುಶ್ರೀಯವರಿಗೆ ಸಂಜಯ ಕುರಣೆ ದತ್ತಿ ಪ್ರಶಸ್ತಿ, ಉರಿಪಾದ (ಅಂಕಣ) ಲೇ.ಡಾ.ಎಚ್.ಡಿ.ಉಮಾಶಂಕರ ಅವರಿಗೆ ಲಿಂಗಣ್ಣ ಜಂಗಮರ ಹಳ್ಳಿ ದತ್ತಿ ಪ್ರಶಸ್ತಿ, ಅಂಬೇಡ್ಕರ್ ಮಾರ್ಗ (ವೈಚಾರಿಕ) ಲೇ. ಸೋಮಲಿಂಗ ಗೆಣ್ಣೂರ ವೆಂಕಟಯ್ಯ ಅಪ್ಪಗೆರೆ ದತ್ತಿ ಪ್ರಶಸ್ತಿ, ನಾ ಯಾರಿಗಲ್ಲದವಳು (ಸಂಪಾದನೆ) ಲೇ. ಡಾ. ಹೊಂಬಯ್ಯ ಹೊನ್ನಲಗೆರೆ, ಸಾರ್ಥಕ ಬದುಕು ನ್ಯಾಯಮೂರ್ತಿ ಶಿವರಾಜ ಪಾಟೀಲರವರ ಕುರಿತು ಲೇ. ಡಾ.ಅಮರೇಶ ಯಾತಗಲ್, ವಿಜಯಪುರ ಪ್ರಾದೇಶಿಕ ಪದಕೋಶ (ಮೊದಲ ಕೃತಿ) ಡಾ.ಪೂರ್ಣಿಮಾ ಧಾಮಣ್ಣವರ, ಗಾಂಧಿ ನೇಯ್ದಿಟ್ಟ ಬಟ್ಟೆ (ಮೊದಲ ಕೃತಿ)ರಾಯಸಾಬ ದರ್ಗಾ ಅವರಿಗೆ ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 

ಇದೇ ಸಂಧರ್ಭದಲ್ಲಿ ಬೆಂಗಳೂರು ವಿಭಾಗೀಯ ಸಂಯೋಜಕರಾದ ಗಣಪತಿ ಚಲವಾದಿ, ರಾಯಚೂರ ಜಿಲ್ಲಾ ದ.ಸಾ.ಪ ಅಧ್ಯಕ್ಷ ತಾಯರಾಜ್ ಮರ್ಚಟಹಾಳ, ಸಿಂಧನೂರು ತಾಲೂಕಾಧ್ಯಕ್ಷ ಹುಸೇನಪ್ಪ ಅಮರಾಪೂರ ಅವರಿಗೆ  ದ.ಸಾ.ಪ ಅತ್ಯುತ್ತಮ ಸಂಘಟನಾ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 

ಮಧ್ಯಾಹ್ನ ೧ ಗಂಟೆಗೆ ಗೋಷ್ಠಿ - ೫ ಹೊಸ ತಲೆಮಾರಿನ ದಲಿತ ಸಾಹಿತ್ಯ ಸಾಂಸ್ಕೃತಿ ಸಮಸ್ಯೆ ಸವಾಲುಗಳ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಬೆಂಗಳೂರಿನ ವಿವಿ. ಪ್ರಾಧ್ಯಾಪಕರಾದ ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ವಹಿಸಲಿದ್ದಾರೆ, ದಲಿತ ಕಾವ್ಯ ಕುರಿತು ಡಾ. ಲಿಂಗಣ್ಣ ಜಂಗಮರ ಹಳ್ಳಿ ದಲಿತ ಕಥೆ ಕುರಿತು ಡಾ. ಸುಭಾಸ ರಾಜಮಾನೆ, ದಲಿತ ಕಾದಂಬರಿ ನಾಟಕ ಕುರಿತು ಡಾ. ನೆಲ್ಲಿಕಟ್ಟೆ ಸಿದ್ಧೇಶ ಅವರು ವಿಷಯ ಮಂಡಿಸಲಿದ್ದಾರೆ. ಡಾ. ಲಕ್ಷಿö್ಮÃ ದೇವಿ ವೈ. ಪ್ರೊ. ರಮೇಶ ರಾಠೋಡ, ಸಂಜು ಕಂಬಾಗಿ ಗೌರವ ಉಪಸ್ಥಿತಿ ವಹಿಸಲಿದ್ದಾರೆ. 

ಮಧ್ಯಾಹ್ನ – ೨.೩೦ ಗಂಟಗೆ ಗೋಷ್ಠಿ -೬ ಕಾವ್ಯ ಸಂಭ್ರಮ ೨ ಅಧ್ಯಕ್ಷತೆಯನ್ನು ಡಾ. ಜಯದೇವಿ ಗಾಯಕವಾಡ, ಅವರು ವಹಿಸಲಿದ್ದಾರೆ. ಡಾ. ದಸ್ತಗೀರ ಸಾಬ ದಿನ್ನಿ ಆಶಯನುಡಿ ಆಡಲಿದ್ದಾರೆ. 

ಅತಿಥಿಗಳಾಗಿ ಕ.ಸಾ.ಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ವಿದ್ಯಾವತಿ ಅಂಕಲಗಿಯವರು ಭಾಗವಹಿಸಲಿದ್ದಾರೆ.

ಕವಿಗೋಷ್ಠಿಯಲ್ಲಿ ನಾಡಿನ ಹೆಸರಾಂತ ಸುಮಾರು ೩೪ ಜನ ಕವಿಗಳು ಭಾಗವಹಿಸಿ ಕವನ ವಾಚಿಸಲಿದ್ದಾರೆ.

ಸಂಜೆ ೪ ಗಂಟೆಗೆ ಸಮಾರೋಪ ಹಾಗೂ ಸನ್ಮಾನ ನೇತೃತ್ವವನ್ನು ಬೀದರ ಅಣಗೂರ ಬೌದ್ಧವಿಹಾರದ ಪೂಜ್ಯವರಜ್ಯೋತಿ ಬಂತೇಜಿಯವರು ವಹಿಸಿಕೊಳ್ಳಲಿದ್ದಾರೆ. ದ.ಸಾ.ಪ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿಯವರ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರೊ. ಎಚ್.ಟಿ. ಪೋತೆಯವರು ಸಮ್ಮೇಳನ ಅಧ್ಯಕ್ಷರ ನುಡಿ ಆಡಲಿದ್ದಾರೆ. ಬೆಂಗಳೂರಿನ ಕವಿ ಸುಬ್ಬು ಹೊಲೆಯಾರ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಹಿಳಾ ವಿವಿಯ ಪ್ರೊ. ಸಕ್ಪಾಲ ಹೂವಣ್ಣ, ಸಿದ್ದು ರಾಯಣ್ಣವರ, ಅಶೋಕ ಚಲವಾದಿ, ಎಸ್.ಎಸ್.ಟಿ. ನೌಕರ ಸಂಘದ ಅಧ್ಯಕ್ಷ ಬಿ.ಎಚ್. ನಾಡಗೇರಿಯವರು ಭಾಗವಹಿಸಲಿದ್ದಾರೆ. 

ಇದೇ ಸಂದರ್ಭದಲ್ಲಿ ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವು ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು. 

ಅಂದು ಸಂಜೆ ೭ ಗಂಟೆಗೆ ನಾಡಿನ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. 

ಸಮ್ಮೇಳನದ ೨ ದಿನ ವಿನಾಯಕ ಕಮತದ ದ.ಸಾ.ಪ ಗದಗ, ಚಿತ್ರಕಲಾ ಹಾಗೂ ಛಾಯಾಚಿತ್ರ ಪ್ರದರ್ಶನ ವಿಜಯಪುರದ ಪೊನ್ನಪ್ಪ ಕಡೇಮನಿ ಚಿತ್ರಕಲೆ ಪ್ರದರ್ಶನ ಲಕ್ಷö್ಮಣ ಹಂದ್ರಾಳ ಹಾಗೂ ಸತೀಶ ಕೆ ಛಾಯಾಚಿತ್ರ ಪ್ರದರ್ಶನ ನಡೆಸಲಿದ್ದಾರೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿಯವರು ಪತ್ರಿಕಾ ಗೋಷ್ಠಿಯಲ್ಲಿ ಸುಧೀರ್ಗವಾಗಿ ಮಾತನಾಡಿದರು. 

ಪತ್ರಿಕಾ ಗೋಷ್ಠಿಯಲ್ಲಿ ದ.ಸಾ.ಪ ರಾಜ್ಯ ಘಟಕದ ಖಜಾಂಚಿ ಡಾ.ಎಚ್. ಬಿ. ಕೋಲಕಾರ, ಕಾರ್ಯದರ್ಶಿ ಸುಭಾಸ ಹುದ್ಲೂರ, ಸಮ್ಮೇಳನದ ಸಂಯೋಜಕ ದ.ಸಾ.ಪ ಜಿಲ್ಲಾಧ್ಯಕ್ಷ ಬಸವರಾಜ ಜಾಲವಾದಿ, ತಾಲೂಕಾ ದ.ಸಾ.ಪ ಅಧ್ಯಕ್ಷೆ ಡಾ. ಪೂರ್ಣಿಮಾ ದಾಮಣ್ಣವರ, ವಿಭಾಗೀಯ ಅಧ್ಯಕ್ಷೆ ಡಾ. ಸುಜಾತಾ ಚಲವಾದಿ, ಸಾಹಿತಿ ದೊಡ್ಡಣ್ಣ ಭಜಂತ್ರಿ, ಎಸ್.ಸಿ./ಎಸ್.ಟಿ. ನೌಕರ ಸಂಘದ ಅಧ್ಯಕ್ಷ ಬಿ.ಎಚ್. ನಾಡಗೇರಿ, ಸುರೇಖಾ ರಾಠೋಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Friday, July 21, 2023

ಪಿಂಚಣಿ ವ್ಯವಸ್ಥೆ ಜಾರಿ ಮಾಡಲು ಬೃಹತ್ ಪ್ರಮಾಣದ ಹೋರಾಟದ ಅಗತ್ಯ : ಕಾಂ. ನಾಡಗೌಡರು


ಈ ದಿವಸ ವಾರ್ತೆ

 ವಿಜಯಪುರ: ಪಿಂಚಣಿ ವ್ಯವಸ್ಥೆ ಜಾರಿ ಮಾಡಲು ಬೃಹತ್ ಪ್ರಮಾಣದ ಹೋರಾಟದ ಅಗತ್ಯ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಕಾಂ. ಎಂ. ಬಿ. ನಾಡಗೌಡರು ಹೇಳಿದರು.

ಅವರು ನಗರದ ನೀಲಕಂಠೇಶ್ವರ ಮಂಗಲ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘ (ರಿ) (ಸಿಐಟಿಯು) ಸಂಯೋಜಿತ ಜಿಲ್ಲಾ ಸಮಿತಿ ವಿಜಯಪುರ ವತಿಯಿಂದ 10 ನೇ ಜಿಲ್ಲಾ ಸಮ್ಮೇಳನವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.


ನೌಕರರು ಸಂಘಟಿತರಾಗಲು ಕರೆ ನಿಡಿದರು. ಹೋರಾಟದಿಂದ ವೇತನ ಹೆಚ್ಚಳ ಕಂಡಿದೆ. ಹೋರಾಟದಿಂದ ಅನೇಕರು ಸರಕಾರಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಇದೇ ಸಂದರ್ಭ ದಲ್ಲಿ ಹಿರಿಯ ಹೋರಾಟಗಾರ ಕಾಂ. ಭೀಮಶಿ ಕಲಾದಗಿ  ಅವರನ್ನು ಸನ್ಮಾನಿಸಲಾಯಿತು.

ಸಮ್ಮೇಳನ ಉದ್ದೇಶಿಸಿ ಹಿರಿಯ ಹೋರಾಟಗಾರರಾದ ಭೀಮಶಿ ಕಲಾದಗಿ ಮಾತನಾಡಿ, ಹೋರಾಟ ಫಲದಿಂದ ವೇತನ, ಬಡ್ತಿ ಸೇರಿದಂತೆ ನೌಕರರಿಗೆ ಅನುಕೂಲವಾಗಿದೆ. ಈಗಾಗಲೇ ಸಂಘಟನೆಯಿAದ ಸಂಘ ಬಲಿಷ್ಠವಾಗಿದೆ. ಇನ್ನು ಹೆಚ್ಚು ಹೆಚ್ಚಾಗಿ ಸಂಘವು ಬಲಿಷ್ಠಗೊಳ್ಳಲು ಎಲ್ಲರೂ ಕೈ ಜೋಡಿಸಬೇಕು ಎಂದರು. ಸಂಘದ ಅವಿರತ 1988 ರಿಂದ ಮಾಡಿದ ಹೋರಾಟ ನೌಕರರು ವೇತನ ಸರಿಯಾಗಿ ಪಡೆಯುವಂತಾಗಿದೆ.ಕನಿಷ್ಠ ವೇತನ,ಅನುಮೋದನೆ ಪಡೆಯಲು ಸಾಧ್ಯವಾಯಿತು ,ನೌಕರರು ಸಂಘಟಿತರಾಗಲು ಕರೆ ನೀಡಿದರು.

ಜಿಲ್ಲಾ ಸಮಿತಿ ಅಧ್ಯಕ್ಷರಾದ ಅಬ್ದುಲರಜಾಕ ಎಂ ತಮದಡ್ಡಿ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭ ದಲ್ಲಿ ಹಿರಿಯ ಹೋರಾಟಗಾರ ಕಾಂ. ಅಣ್ಣಾರಾಯ ಈಳಗೇರ ಅವರನ್ನು ಸನ್ಮಾನಿಸಲಾಯಿತು.

ಜಿ.ರಾಮಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಸಿಐಟಿಯು ಜಿಲ್ಲಾಧ್ಯಕ್ಷರಾದ ಕಾಂ ಅಣ್ಣಾರಾಯ ಇಳಗೇರ, ಪ್ರಧಾನ ಕಾರ್ದಯರ್ಶಿ ಲಕ್ಷಣ ಹಂದ್ರಾಳ, ವಿಠ್ಠಲ ಹೊನಮೋರೆ, ಅಯ್ಯನಗೌಡ ಬಾಗೇವಾಡಿ, ಜಿ.ಎಸ್.ಗಂಗಶೆಟ್ಟಿ, ಶಿವನಗೌಡ ಬಿರಾದಾರ, ಮಲ್ಲು ತಳೆವಾಡ, ಯಲ್ಲನಗೌಡ ಬಿರಾದಾರ, ಶ್ರೀಶೈಲಕವಿ, ತುಕಾರಾಮ ಮಾರನೂರ, ಮಲ್ಲಿಕಾರ್ಜುನ ಮಾದರ, ಎಂ.ಕೆ.ಕಳ್ಳಗಿ, ಲಾಲಾಹ್ಮದ ಶೇಖ,ಕೆ.ಐ. ಮಡಿವಾಳರ, ಮುದಿಗೌಡರ ಮುಗಳಿ,  ಶ್ರೀಮತಿ ಕಾಳಮ್ಮ ಬಡಿಗೇರ, ಶ್ರೀಮತಿ ಭಾರತಿ ವಾಲಿ ಅತಿಥಿಗಳಾಗಿ ಭಾಗವಹಿಸಿದ್ದರು.

ಇದೇ ಸಂದರ್ಭ ದಲ್ಲಿ ಹಿರಿಯ ಹೋರಾಟಗಾರ ಕಾಂ. ಲಕ್ಷ್ಮಣ ಹಂದ್ರಾಳ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಿವಾನಂದ ಬಿರಾದಾರ ಸ್ವಾಗತಿಸಿದರು. ಚಂದ್ರಶೇಖರ ವಾಲಿಕಾರ ನಿರೂಪಿಸಿದರು. ರಾಮಚಂದ್ರ ನಂದೂರ ವಂದಿಸಿದರು.

ಇದೇ ಸಂದರ್ಭ ದಲ್ಲಿ  ಹೋರಾಟಗಾರ್ತಿ ಭಾರತಿ ವಾಲಿ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭ ದಲ್ಲಿ  ಹೋರಾಟಗಾರ್ತಿ ಕಾಳಮ್ಮ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.

ಕುವೆಂಪು ಪ್ರಶಸ್ತಿಗೆ ಹಿರಿಯ ಸಾಹಿತಿ ಮಲ್ಲಿಕಾ ಘಂಟಿ ಆಯ್ಕೆ

           

ಈ ದಿವಸ ವಾರ್ತೆ

ವಿಜಯಪುರ: ಕುವೆಂಪು ಕಲಾನಿಕೇತನ ಸಂಸ್ಥೆಯು ರಾಷ್ಟ್ರಕವಿ ಕುವೆಂಪುರವರ 119ನೇ ಜಯಂತಿ ಅಂಗವಾಗಿ ಪ್ರತಿ ವರ್ಷ ನೀಡುವ 'ರಾಷ್ಟ್ರ ಕವಿ ಕುವೆಂಪು ಪ್ರಶಸ್ತಿ'ಗೆ ಹಿರಿಯ ಸಾಹಿತಿ ಹಾಗೂ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಎಸ್‌.ಘಂಟಿ ಆಯ್ಕೆಯಾಗಿದ್ದಾರೆ. 

ಈ ಪ್ರಶಸ್ತಿಯು 25 ಸಾವಿರ ನಗದು, ಬೆಳ್ಳಿ ಪದಕ, ಪ್ರಶಸ್ತಿ ಪತ್ರ ಒಳಗೊಂಡಿದೆ. ಆ.8ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಸಾಹಿತಿ ಡಾ.ಮಲ್ಲಿಕಾ ಎಸ್‌.ಘಂಟಿ ಅವರಿಗೆ ಪ್ರದಾನ ಮಾಡಲಿದ್ದಾರೆಂದು ಸಂಸ್ಥೆ ಅಧ್ಯಕ್ಷ ಕುವೆಂಪು ಪ್ರಕಾಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಹಿರಿಯ ಸಾಹಿತಿ ಮಲ್ಲಿಕಾ ಘಂಟಿ ಕುವೆಂಪು ಪ್ರಶಸ್ತಿಗೆ ಭಾಜನ ರಾದ ಹಿನ್ನೆಲೆ ವಿಜಯಪುರ ಜಿಲ್ಲೆಯ ಮಲ್ಲಿಕಾ ಘಂಟಿ ಅವರ ಅಭಿಮಾನಿ ಬಳಗದವರು ಅಭಿನಂದಿಸಿದ್ದಾರೆ.

22 ರಂದು ಗಾನಬನದಲ್ಲಿ ಗುರುವಂದನಾ ಕಾರ್ಯಕ್ರಮ


ವಿಜಯಪುರ : ಶ್ರೀ ಗುರು ಕುಮಾರೇಶ್ವರ ಪ್ರತಿμÁ್ಠನ (ರಿ) ಶ್ರೀ ಗಾನಯೋಗಿ ಪಂಚಾಕ್ಷರ ಪ್ರತಿμÁ್ಠನ (ರಿ) ವಿಜಯಪುರ ಇವರ ಸಹಯೋಗದಲ್ಲಿ ಶ್ರೀ ಶಿವಯೋಗಿ ಪುಟ್ಟರಾಜ ಗಾನಬನದ ಸಂಸ್ಥಾಪಕರಾದ ಗುರುಕಾರುಣ್ಯತೇಜ, ಗಾನಬನದ ಗಾನಗಂದರ್ವ, ಶ್ರೀ ಪಂ. ತೋಂಟದಾರ್ಯ ಕವಿಗವಾಯಿಗಳವರ 59ನೇ ಜನ್ಮದಿನದ ಅಂಗವಾಗಿ ಗುರುವಂದನಾ ಕಾರ್ಯಕ್ರಮವನ್ನು ದಿನಾಂಕ: 22-07-2023 ರಂದು ಶನಿವಾರ ರಂದು ಸಂಜೆ 6.30 ಗಂಟೆಗೆ ಶಿವಯೋಗಿ ಪುಟ್ಟರಾಜ ಗಾನಬನದ ಆವರಣ, ಎನ್.ಸಿ.ಸಿ. ಕಾರ್ಯಾಲಯದ ಹಿಂದುಗಡೆ, ಶ್ರೀ ಗಾನಯೋಗಿ ಪಂಚಾಕ್ಷರಿ ರಸ್ತೆ ವಿಜಯಪುರದಲ್ಲಿ ಹಮ್ಮಿಕೊಳ್ಳಲಾಗಿದೆ.

ದಿವ್ಯ ಸಾನ್ನಿಧ್ಯವನ್ನು ಬಸವನ ಬಾಗೇವಾಡಿ ಸಂಸ್ಥಾನ ಒಡೆಯರ ಹಿರೇಮಠದ ಶ್ರೀ ಷ.ಬ್ರ. ಶಿವಪ್ರಕಾಶ ಶೀವಾಚಾರ್ಯ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಜ್ಞಾನ ಯೋಗಾಶ್ರಮದ ಅಧ್ಯಕ್ಷರಾದ ಪ.ಪೂ. ಬಸವಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಗಾನಯೋಗಿ ಪಂಚಾಕ್ಷರ ಪ್ರತಿಷ್ಠಾನ (ರಿ) ಗೌರವಾಧ್ಯಕ್ಷರಾದ ಬಸವರಾಜ ಪಿ. ಕೆಂಗನಾಳ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿಜಯಪುರ ಜಿಲ್ಲೆಯ ಉಪನೋಂದಣಾಧಿಕಾರಿಗಳಾದ ಬಿ.ಎಸ್.ಬಿರಾದಾರ, ಪ್ರಥಮ ದರ್ಜೆ ಗುತ್ತಿಗೆದಾರರಾದ ಲಿಂಗರಾಜ ಹಿರೇಮಠ, ಚಿಕ್ಕಮಕ್ಕಳ ತಜ್ಞರಾದ ಡಾ. ಪರೀಕ್ಷಿತ ಕೋಟಿ ಭಾಗವಹಿಸಲಿದ್ದಾರೆ.

ಹಚ್ಯಾಳ ಹಿರೇಮಠದ ವೇ.ಮೂ. ವಿರುಪಾಕ್ಷಯ್ಯ ಶಾಶ್ತ್ರಿಗಳು ಪ್ರವಚನ ನುಡಿಗಳನ್ನಾಡಲಿದ್ದಾರೆ.

ತೊರವಿ ಹಿರೇಮಠದ ವೇ.ಮೂ. ಚಿದಾನಂದ ಶಾಸ್ತ್ರಿಗಳು ಉಪನ್ಯಾಸ ನೀಡಲಿದ್ದಾರೆ.

ಎಮ್.ವ್ಹಿ. ಹಿರೇಮಠ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ, ಶಿಕ್ಷಕರಾದ ಕೈಲಾಸನಾಥ ಮದಭಾವಿ ನಿರೂಪಿಸಲಿದ್ದಾರೆ. ಪಿ.ಸಿ. ಅರಕೇರಿಮಠ ಸ್ವಾಗತಿಸಲಿದ್ದಾರೆ. ಸುಭಾಸಚಂದ್ರ ಕನ್ನೂರ ವಂದಿಸಲಿದ್ದಾರೆ.  ಪಂ. ತೋಂಟದಾರ್ಯ ಕವಿ ಗವಾಯಿಗಳು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


ಗುರು ಕಾರುಣ್ಯತೇಜ

 ಮನುಷ್ಯನ ಜೀವನ ಉನ್ನತ ಸ್ಥಿತಿಗೇರಬೇಕಾದರೆ ಅವನ ಸಾಧನೆ ಹಾಗೂ ಗುರುಕೃಪೆಯೇ ಕಾರಣವೆಂದು ಗ್ರಹಿಸಬೇಕಾಗುತ್ತದೆ. ಮನುಷ್ಯನ ಸಾಧನೆ ಯಾವ ಕ್ಷೇತ್ರದಲ್ಲಿಯೇ ಇರಲಿ ಅದು ಆಧ್ಯಾತ್ಮ ಕ್ಷೇತ್ರವಾಗಿರಲಿ, ಧಾರ್ಮಿಕ ಕ್ಷೇತ್ರವಾಗಿರಲಿ, ರಾಜಕೀಯ ಕ್ಷೇತ್ರವಾಗಿರಲಿ, ಸಂಗೀತ-ಚಿತ್ರಕಲೆಯಂತಹಾ ಯಾವುದೇ ಕ್ಷೇತ್ರವಾಗಿರಲಿ ಇವುಗಳಲ್ಲಿ ಸಾಧನೆ ಮಾಡಿ ಸಿದ್ಧಿ ಪಡೆಯಬೇಕಾದರೆ ಅದಕ್ಕೇಲ್ಲಾ ಸಮರ್ಥ ಗುರುವಿನ ಮಾರ್ಗದರ್ಶನ ಬೇಕೆಬೇಕು. ಅದಕ್ಕೇನೆ ಗುರು ಮತ್ತು ಶಿಷ್ಯನ ಸಂಬಂಧ ಅನ್ಯೋನ್ಯ ಹಾಗೂ ಅವರ್ನಿಯ. 

 ವೇದ ಕಾಲದ ಇತಿಹಾಸದೂದಕ್ಕು ಖ್ಯಾತಿವಂತರ ಚರಿತ್ರೆಗಳು ಗೋಚರವಾಗುತ್ತವೆ. ಗುರುವಿನಿಂದ ವಿದ್ಯೆ ಸಂಪಾದಿಸಿಕೊಂಡು ಶಿಷ್ಯರು ಗುರುಗಳ ಬಗೆಗೆ ಅಪಾರವಾದ ಗೌರವ ವಿನರ್ಮತೆ ಹೊಂದಿರುತ್ತಾರೆ. ಇದಕ್ಕೆ ಮಹಾಭಾರತದಲ್ಲಿ ಕಾಣಬರುವ ದ್ರೋಣಾಚಾರ್ಯ್ಯರ ಅವರ ಶಿಷ್ಯ ಏಕಲವ್ಯನಂತವರೇ ಸಾಕ್ಷಿ. ಶಿಷ್ಯರು ಜೀವನದಲ್ಲಿ ಯಾವತ್ತಿಗೂ ಗುರುವಿನನ್ನ ಮರೆಯಲಾರರು. ಅದಕ್ಕಾಗಿಯೇ ಪ್ರತಿ ಆಷಾಡ ಹುಣ್ಣಿಮೆಯನ್ನು ಗುರುಪೊರ್ಣಿಮೆ, ಬುದ್ಧ ಪೊರ್ಣಿಮೆಯೆಂದು ಆಚರಿಸುತ್ತಾ ಬರಲಾಗಿದೆ. ಶಿಷ್ಯರು ತಮ್ಮ ಗುರುಗಳಿಗೆ ವಿಶೇಷವಾಗಿ ಗೌರವ ಸಲ್ಲಿಸುವ ಉದೇಶಕ್ಕಾಗಿಯೇ ಗುರುವಂದನಾಯೆಂಬ ಭಕ್ತಿ ಸಮರ್ಪನಾ ಕಾರ್ಯಕ್ರಮವನ್ನು ನಾಡಿನಯಲ್ಲಡೆ ಆಚರಿಸುತ್ತಾರೆ. ಇಂತಹ ಕಾರ್ಯಕ್ರಮವೊಂದು ವಿಜಯಪುರ ನಗರದ ಗಾನಬನವೆಂಬ ಹೆಸರಿನ ಶ್ರೀ ಕುಮಾರೇಶ್ವರ ಸಂಗೀತ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವುದು ತುಂಬಾ ಸಂತೋಷದ ಸಂಗತಿ. ಗಾನಬನದ ರುವಾರಿಗಳಾದ ಶ್ರೀ ಪಂಡೀತ ತೋಂಟದಾರ್ಯ ಕವಿ ಗವಾಯಿಗಳವರ ಬದುಕು ಆವರ್ಣಿಯವಾದದ್ದು. ತಮ್ಮ ವಿದ್ಯಾಗುರುಗಳಾದ ಪೂಜ್ಯ ಲಿಂ. ಡಾ. ಪಂಡೀತ ಪುಟ್ಟರಾಜ ಗುರುವರ್ಯರ ಜೀವನವನ್ನೇ ಆದರ್ಶವಾಗಿ ಇಟ್ಟುಕೊಂಡು ಜೀವನ ನಡೆಸತಕ್ಕವಂತರು. ಗುರುಗಳ ಕೃಪಾಪೋಷಣೆಯಲ್ಲಿ ಗಾನಬನದ ಸಂಗೀತ ಗುರುಕುಲದಲ್ಲಿ ಹಲವಾರು ವಿದ್ಯಾರ್ಥಿಗಳನ್ನು ಇಟ್ಟುಕೊಂಡು ಅವರಿಗೆ ಊಟ, ವಸತಿ, ವಿದ್ಯೆಯನ್ನು ನೀಡುತ್ತಾ ಬರುತ್ತಿದ್ದಾರೆ. ಇವರಿಂದ ಅನೇಕರು ಸಂಗೀತ ವಿದ್ಯೆಯನ್ನು ಪಡೆದು ತಮ್ಮ ಬದುಕಿನ ನೆಲೆಯನ್ನು ಕಂಡುಕೊಂಡಿದ್ದಾರೆ. ಹೀಗೆ ತಮ್ಮ ನಿಸ್ವಾರ್ಥ ಸೇವೆಯನ್ನು ಸಮಾಜಕ್ಕೆ ಸಮರ್ಪಿಸುವ ನಿಟ್ಟಿನಲ್ಲಿ ಸಂತೃಪ್ತಿ ಜೀವನ ನಡೆಸುತ್ತಿದ್ದಾರೆ. 

 ಇವರು ಶಿಷ್ಯರಿಗೆ ಸಂಗೀತ ಕಲೆಯನ್ನು ಧಾರಾಳವಾಗಿ ಅವರ ಅವರ ಅರ್ಹತೆ ಅನುಗುಣವಾಗಿ ಕೊಡುತ್ತಾ ಬಂದಿದ್ದಾರೆ. ತಮ್ಮ ಸ್ವಂತ ಜೀವನಕ್ಕೆ ಹೆಚ್ಚು ಗಮನ ಕೊಡದೇ ಸದಾ ಗಾನಬನದ ಶ್ರೇಯೋಭಿವೃದ್ಧಿಗಾಗಿ ವಿದ್ಯಾರ್ಥಿಗಳ ಯೋಗಕ್ಷೇಮದ ಬಗೆಗೆನೆ ಚಿಂತಿಸುತ್ತಿರುತ್ತಾರೆ. ಇವರ ಸೇವೆಯನ್ನು ಗುರುತಿಸಿ ಸಂಗೀತ ಕಲಾಭಿಮಾನಿಗಳು ತಮ್ಮ ಸಹಾಯ ಸಹಕಾರವನ್ನು ನೀಡುತ್ತಾ ನಮ್ಮ ಭಾಗÀದಲ್ಲಿ ಇದೊಂದು ಸಂಗೀತ ಸೇವಾ ಸಂಸ್ಥೆ ಬೆಳೆಯಲೆಂದು ತಮ್ಮ ಮುಕ್ತ ಮನಸ್ಸಿನಿಂದ ಹಾರೈಸುತ್ತಿದ್ದಾರೆ. ಭಕ್ತರ ಹಾಗೂ ಮಠಾಧೀಶರ ದೇಣಿಗೆಯ ಕೊಡುಗೆಯಿಂದ ನಿರ್ಮಾಣಗೊಂಡ ಗುರುತ್ರಯರ ಮೂರ್ತಿಗಳ ಮಂದಿರ ಕಂಗೊಳಿಸುತ್ತಿದೆ. ಇದಕ್ಕೇಲ್ಲಾ ಕಾರಣರು ಗಾನಬನದ ನಿರ್ಮಾತೃಗಳಾದ ಶ್ರೀ ಪಂ. ತೋಂಟದಾರ್ಯ ಕವಿಗವಾಯಿಗಳವರು ಇಂತಹ ತೋಂಟದಾರ್ಯರ ಕಾರ್ಯಗಳನ್ನು ಮೆಚ್ಚಿ ಅವರ ಶಿಷ್ಯರೆಲ್ಲರೂ ಸೇರಿ ಶ್ರದ್ಧಾ-ಭಕ್ತಿಯಿಂದ "ಗುರುವಂದನಾ" ಎಂಬ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ಇದೇ ತಿಂಗಳ ಅಂದರೆ 22-07-2023 ಶನಿವಾರದಂದು ಸಮಯ ಸಂಜೆ : 6-30ಕ್ಕೆ ಗಾನಬನದಲ್ಲಿ ಜರುಗಲಿದೆ. ಇಂತಹ ಯೋಗ್ಯ ಕಾರ್ಯಕ್ರಮಕ್ಕೆ ಸ್ವಾಗತ ಬಯಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸೋಣ.

 ರಚನೆ - ಶ್ರೀ ವೇ.ಮೂ. ವೀರುಪಾಕ್ಷಯ್ಯ ಶಾಸ್ತ್ರೀಗಳು, ಹಿರೇಮಠ, ಹಚ್ಚಾ್ಯಳ 


ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳಿಗೆ, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.

ಕಲ್ಲಪ್ಪ ಶಿವಶರಣ

ವ್ಯವಸ್ಥಾಪಕ ಸಂಪಾದಕ

ಈ ದಿವಸ ಕನ್ನಡ ದಿನ ಪತ್ರಿಕೆ

 ಮೊ: 7204279187/     

          9900378892

ತಾವು ಟೈಪಿಸಿ ವ್ಯಾಟ್ಸಪ್ ಅಥವಾ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.