Sunday, January 18, 2026

ನಮ್ಮೂರ ಜಾತ್ರೆಯಲ್ಲಿ ಜನಮಸೂರೆಗೊಂಡ ಬಾಲ ಪ್ರತಿಭೆ ಮೇಘನಾಳ ಭರತ ನಾಟ್ಯ

ವಿಜಯಪುರ : ಶ್ರೀ ಸಿದ್ಧೇಶ್ವರ ಸಂಸ್ಥೆ ಸಂಕ್ರಮಣ ಮಹೋತ್ಸವ ನಿಮಿತ್ಯ ಶ್ರೀ ಸಿದ್ಧೇಶ್ವರ ದೇವಸ್ಥಾನದ ಮುಖ್ಯವೇದಿಕೆಯಲ್ಲಿ ಮೇಘಾ ಮೆಲೋಡಿ ವಿಜಯಪುರ ವತಿಯಿಂದ ನಡೆಸಿಕೊಟ್ಟ ರಸಮಂಜರಿ ಕಾರ್ಯಕ್ರಮದಲ್ಲಿ ಬಾಲ ಪ್ರತಿಭೆ ಕುಮಾರಿ ಮೇಘನಾ ಶಿವಶರಣ ಭರತ ನಾಟ್ಯ ಪ್ರದರ್ಶನವು ಜನಸೊರೆಮನಗೊಂಡಿತು.

ವೇದಿಕೆಯಲ್ಲಿ ಸಾಹಿತಿ ಸಂಗಮೇಶ ಬದಾಮಿ, ಡಾ. ಸೋಮಶೇಖರ ವಾಲಿ, ಸಾಹೇಬಗೌಡ ಬಸರಕೋಡ, ಬಸವರಾಜ ಒಂಟಗೋಡಿ, ಪ್ರಶಾಂತ ಚೌಧರಿ, ವಿರೇಶ ವಾಲಿ, ಸಂತೋಷ ತಳಕೇರಿ, ಚಿದಾನಂದ ಚಲವಾದಿ, ಸುನೀಲ ಚಲವಾದಿ, ಮೇಘಾ ಮೆಲೋಡಿ ತಂಡದ ನಾಯಕ, ಗಾಯಕ, ಚಿತ್ರನಟ ಮಹೇಶ ಶಿವಶರಣ, ಮಾಡಿವಾಳ ಗಾಯಕರು, ಪ್ರೀತಿ, ಅಜಯ, ಮಹಾಂತೇಶ, ರಾಜೇಶ, ಗಾಯಕ ಜಗದೀಶ ಮಣೂರ, ಮಲ್ಲಿಕಾರ್ಜುನ ತಳವಾರ, ಉಮೇಶ, ಭೀಮರಾಯ, ಸುನೀಲ, ಅಶ್ವಿನಿ ಸೇರಿದಂತೆ ಮುಂತಾದವರು ಇದ್ದರು.

No comments:

Post a Comment