Thursday, December 26, 2024

ಜಗತ್ತಿನಾದ್ಯಂತ ಭಕ್ತ ಸಮೂಹ ಹೊಂದಿದ ಅತ್ಯಂತ ಸರಳ ಮತ್ತು ಶ್ರೇಷ್ಠ ಸಂತ : ಮಹೇಶ ಮಾಶಾಳ

 ವಿಜಯಪುರ :  ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಜಗತ್ತನ್ನೇ ಗೆದ್ದಂತವರು. ಜಗತ್ತಿನಾದ್ಯಂತ ಭಕ್ತ ಸಮೂಹ ಹೊಂದಿದ ಅತ್ಯಂತ ಸರಳ ಮತ್ತು ಶ್ರೇಷ್ಠ ಸಂತ ಎಂದು ಖ್ಯಾತ ಭಾಷಣಕಾರ ಮಹೇಶ ಮಾಶಾಳ ಹೇಳಿದರು.

ನಗರದ ಜ್ಞಾನಯೋಗಾಶ್ರಮದಲ್ಲಿ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಯವರ ಗುರುನಮನ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ "ಜ್ಞಾನಾರಾಧನೆ" ಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಾನು ಮೊದಲು ಶ್ರೀ ಸಿದ್ದೇಶ್ವರ ಅಪ್ಪಾಜಿಯವರನ್ನು ಭೇಟಿ ಮಾಡಿದ್ದು ಸಿಂದಗಿಯ ಒಂದು ಕಾಲೇಜಿನಲ್ಲಿ. ಅವರನ್ನು ಭೇಟಿಯಾಗುವುದಕ್ಕೂ ಮುನ್ನ ನಾನು ಅಹಂಕಾರದಿAದ ಭಾಷಣ ಮಾಡುತ್ತಿದ್ದೆ. ಆದರೆ ಅವರನ್ನು ನೋಡಿದ ಮೇಲಿನಿಂದ ನಾನು ಪ್ರಜ್ಞಾವಂತಿಕೆಯಿAದ ಭಾಷಣ ಮಾಡುವುದನ್ನು ಕಲಿತುಕೊಂಡೆ. ನನ್ನ ಇಡೀ ಜೀವನದಲ್ಲಿಯೇ ನಾನು ಈ ಮಟ್ಟಿಗೆ ಏನಾದರೂ ಬೆಳೆದಿದ್ದೇನೆ ಎಂದರೆ ಅದಕ್ಕೆ ಅಪ್ಪಾಜಿಯವರೇ ಕಾರಣ. ನನಗೆ ಒಂದು ಮಾತು ಹೇಳಿದ್ದರು ನೀನು ಎಷ್ಟು ಕಲಸ್ತಿಯಾ ಅಷ್ಟು ಕಲಿತಿಯಾ ಹೀಗಾಗಿ ನೀನು ನಿನ್ನ ಭಾಷಣದ ಮೂಲಕ ಜನರಿಗೆ ಕಲಿಸ್ತಾ ಹೋಗು ಇನ್ನು ಹೆಚ್ಚಿಗೆ ಅವರಿಂದ ಕಲಿತಿಯಾ ಎಂದು ಹೇಳಿದ್ದರು ಅವರ ಈ ಮಾತು ನಾನು ಎಲ್ಲವನ್ನು ಕಲಿತು ಮುಗಿಸಿದ್ದೇನೆ ಎನ್ನುವ ಅಹಂಕಾರವನ್ನು ಮುರಿತು ಜೀವನ ಪೂರ್ತಿ ನಾನು ಕಲಿಯುವುದು ಬಾಖಿ ಇದೆ ಎಂದು ತೋರಿಸಿ ಕೊಟ್ಟರು. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ನಮ್ಮೆಲ್ಲರನ್ನು ಸತ್ಯದ ದಾರಿಯಲ್ಲಿ ನಡೆಯಿರಿ ಎಂದು ತೋರಿಸಿಕೊಟ್ಟವರು. ನಮ್ಮಲ್ಲಿರುವ ಎಲ್ಲ ಹೊಲಸನ್ನು ಹೊರಗೆ ಹಾಕಿ ನಮ್ಮನ್ನ ಮತ್ತು ನಮ್ಮ ಬದುಕನ್ನು ಶುಚಿಗೊಳಿಸಿದ ಮಹಾತ್ಮರು. ನಮ್ಮೆಲ್ಲರ ಮನಸ್ಸೊಳಗೆ ಅರಿವಿನ ದೀಪ ಹಚ್ಚಿದ ಅಪ್ಪನವರು ನಮ್ಮ ಮನಸ್ಸಲ್ಲಿ ಎಂದೆAದಿಗೂ ಇರುತ್ತಾರೆ ಎಂದರು.  


ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಬದುಕಿದ ಜೀವನ ಶೈಲಿ ಇಡೀ ಜಗತ್ತಿನ ಸಂತ ಸಮೂಹಕ್ಕೆ ಹಾಗೂ ಅವರ ಸರಳತೆ ನಮ್ಮೆಲ್ಲರ ಬದುಕಿಗೆ ಮಾದರಿ ಎಂದರು. ನಮಗೆ ಯಾವಾಗಲೂ ಉತ್ತಮ ಸಲಹೆಗಳನ್ನು ನೀಡುವ ಮೂಲಕ ನಮ್ಮನ್ನು ತಿದ್ದುತ್ತಿದ್ದರು. ನಮಗೆ ಎಂದಿಗೂ ಪ್ರಚಾರಕ್ಕಾಗಿ ಹೋರಾಟ, ಕೆಲಸಗಳನ್ನು ಮಾಡಬೇಡಿ ನಿಮ್ಮ ಹೋರಾಟ ಯಶಸ್ವಿಯಾಗಿ ನಿಮ್ಮ ಕೆಲಸಗಳು ಸಾರ್ಥಕತೆ ತರಬೇಕು ಆ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಸಲಹೆಗಳನ್ನು ನೀಡುವ ಮೂಲಕ ನಮ್ಮ ಬದುಕಿಗೆ ಪ್ರೇರಣೆಯಾಗಿದ್ದಾರೆ ಎಂದರು.  


ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕದೋಂಡ ಮಾತನಾಡಿ, ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಹುಟ್ಟಿದ ಭೂಮಿಯಲ್ಲಿ ಹುಟ್ಟಿದ ನಾವೇ ಪುಣಿತರು. ಶ್ರೀ ಅಪ್ಪಾಜಿಯವರ ಮಾತುಗಳಲ್ಲಿ ಬರೀ ನಾಲ್ಕಾನೆ ಭಾಗ ನಮ್ಮಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಪಾವನವಾಗುತ್ತದೆ. ನುಡಿದಂತೆ ನಡೆದ ಆತ್ಯಂತ ಸರಳ ಮತ್ತು ಜಗತ್ತಿನ ಶ್ರೇಷ್ಠ ಸಂತ ಅದು ಶ್ರೀ ಸ್ವಾಮೀಜಿಯವರು. ಅವರ ಜೀವನದುದ್ದಕ್ಕೂ ನಮಗೆ ಜ್ಞಾನಾರಾಧನೆ ಮಾಡಿದಂತವರು ಅಂತಹವರ ನೆರಳಲ್ಲಿ ನಾವು ನಿವೆಲ್ಲರೂ ಬೆಳೆದಿದ್ದೇವೆ ಎಂದರೆ ಅದು ನಮ್ಮ ಪುಣ್ಯ. ಹೀಗಾಗಿ ಅವರು ಹಾಕಿ ಕೊಟ್ಟ ದಾರಿಯಲ್ಲಿ ಅವರು ಕಲಿಸಿದ ಸತ್ಯದ ದಾರಿಯಲ್ಲಿ ನಡೆಯುವ ಮೂಲಕ ನಾವು ಅವರಿಗೆ ನಿಜವಾದ ಗುರುನಮನ ಸಲ್ಲಿಸೋಣ ಎಂದರು.

ಸಿದ್ದಣ್ಣ ಲಂಗೂಟಿ ಮಾತನಾಡಿ, ಸಿದ್ದೇಶ್ವರ ಅಪ್ಪಗಳು ವಿಶ್ವಜ್ಞಾನಿಗಳು, ಅವರು ಆಧ್ಯಾತ್ಮ ಲೋಕದಲ್ಲಿ ದೊಡ್ಡ ಕ್ರಾಂತಿ ಮಾಡಿದ್ದಾರೆ. ಆಶ್ರಮದಲ್ಲಿದ್ದ ಎಲ್ಲ ಗುರುಗಳು ವಿದ್ಯಾರ್ಥಿಗಳಲ್ಲಿ ವಿಶ್ವ ತತ್ವಜ್ಞಾನದ ಚಿಂತನೆಗೆ ಕರೆದುಕೊಂಡು ಹೋದವರು ಪೂಜ್ಯ ಸಿದ್ದೇಶ್ವರ ಅಪ್ಪಗೋಳು ಎಂದು ಹೇಳಲು ಹರ್ಷವಾಗುತ್ತದೆ ಎಂದರು.

ಭಾರತದ ೩೦ ಭಾಷೆಗಳಿಗೆ ನಮ್ಮ ಶರಣರ ವಚನಗಳು ಅನುವಾದಗೊಂಡಿವೆ. ೨೩ ಸಂಪುಟಗಳನ್ನು ಪ್ರಧಾನ ಮಥ್ರಿ ನರೆಂದ್ರ ಮೋದಿ ಅವರು ಅನಾವರಣಗೊಳಿಸಿದ್ದಾರೆ. ೧೪ ವಿದೇಶಿ ಭಾಷೆಗಳಲ್ಲೂ ಅನುವಾದಗೋಳ್ಳುತ್ತಿದ್ದು ಶೀಗ್ರದಲ್ಲಿಯೇ ರಾಷ್ಟçಪತಿ ಮುರ್ಮುಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಒಟ್ಟು ೫೦ ವಿದೇಶಿ ಭಾಷೆಗಳಲ್ಲಿ ವಚನಗಳು ಅನುವಾದಗೊಳುತ್ತವೆ. ಇಷ್ಟು ಕೆಲಸ ಮಾಡಲು ನನಗೆ ಪ್ರೇರಣೆ ನೀಡಿದವರು ಶ್ರೀ ಸಿದ್ದೇಶ್ವರ ಅಪ್ಪಾಜಿಯವರು ಎಂದು ಹೇಳಲು ಸಂತೋಷವೆನಸುತ್ತದೆ ಎಂದು ಹೇಳಿದರು. 


ಇಸ್ಲಾಂ ವಿದ್ವಾಂಸರು ಕಾಶ್ಮೀರದಲ್ಲಿ ವಚನ ಅನುವಾದದ ಬಗ್ಗೆ ಕೇಳಿದಾಗ ಅದರಲ್ಲಿ ಮಾನವೀಯತೆಯ ಗುಣಗಳಿವೆ ಹಾಗಾಗಿ ನಾವು ಅದನ್ನು ಅನುವಾದ ಮಾಡುತ್ತಿದ್ದೇವೆ ಎಂದು ಉತ್ತರ ನೀಡಿದರು. ಅಂತಹ ದಿವ್ಯ ಶಕ್ತಿ ನಮ್ಮ ವಚನಗಲ್ಲಿ ಇವೆ. ನಾವು ಅವುಗಳಲ್ಲಿನ ಜ್ಞಾನವನ್ನು ಅಳವಡಿಸಿಕೊಂಡು ಬದುಕು ಸಾಗಿಸಬೇಕು. ಅವುಗಳು ನಮ್ಮ ಸಂಪತ್ತು ಎಂದು ಅವುಗಳನ್ನು ರಕ್ಷಣೆ ಮಾಡಿ ಬದುಕಬೇಕು. ಜಗತ್ತಿನಲ್ಲಿ ವಿಜ್ಞಾನ ಇದೆ, ಸುಜ್ಞಾನ ಇದೆ, ಆದರೆ ಇಂದು ವಿಜ್ಞಾನದಿಂದ ಜಗತ್ತು ನಾಶದ ಕಡೆಗೆ ಹೊರಟಿದೆ ಆದರೆ ಸುಜ್ಞಾನದಿಂದ ಜಗತ್ತು ಬೇಳಗಲಿದೆ ಎಂದರು


ಇದೇ ಸಂದರ್ಭದಲ್ಲಿ ಮುಚಳಂಬಾ ನಾಗಭೂಷಣ ಶಿವಯೋಗಿಗಳ ಸಂಸ್ಥಾನ ಮಠದ ಪರಮ ಪೂಜ್ಯ ಶ್ರೀ ಪ್ರಣವಾನಂದ ಮಹಸ್ವಾಮಿಗಳು ಆಶೀರ್ವಚನ ನೀಡಿ, ಹೇಳುವುದು ಸರಳ ಮಾಡುವುದು ಬಹಳ ಕಷ್ಟ ಆದರೆ ಹೇಳಿದಂತೆ ಬದುಕಿ ಇಡೀ ಜಗತ್ತಿಗೆ ಪ್ರೇರಣೆಯಾದಂತವರು ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು. ಅವರು ಬದುಕಿದ ದಿನಗಳಲ್ಲಿ ನಾವು ಕೂಡ ಬದುಕಿದ್ದೇವು ಎನ್ನುವುದು ನಮಗೆ ಹೆಮ್ಮೆ. ಸಿದ್ದೇಶ್ವರ ಅಪ್ಪಾಜಿಯವರು ಜ್ಞಾನೋಪಾಸಕರು. ಅವರು ಜ್ಞಾನದ ಮೂಲಕ  ನಮಗೆ ಅಮೃತವನ್ನು ನೀಡಿದ್ದಾರೆ ಎಂದರು. ಬದುಕಿನಲ್ಲಿ ಆಧ್ಯಾತ್ಮದ ಕೀಲಿ ಮರೆತರೆ ನಿಮ್ಮ ಬದುಕು ನಿರರ್ಥಕವಾಗುತ್ತದೆ ಎಂದು ಸಿದ್ದೇಶ್ವರ ಅಪ್ಪಾಜಿಯವರು ನಮಗೆ ಹೇಳಿ ಹೋಗಿದ್ದಾರೆ. ಅವರು ಹೇಳಿದ ಮಾತನ್ನು ಪಾಲನೆ ಮಾಡಬೇಕು ಎಂದು ಹೇಳಿದರು.

ಜ್ಞಾನಯೋಗಾಶ್ರಮ ಅಧ್ಯಕ್ಷ ಗುರುಗಳಾದ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ತಮ್ಮ ಜೀವನದೂದ್ದಕ್ಕೂ ಇಡೀ ಜಗತ್ತಿಗೆ ಜ್ಞಾನದಾಸೋಹ ಬಡಿಸಿದಂತವರು. ಅವರು ಬಿತ್ತಿದ ಜ್ಞಾನದ ಬೀಜ ನಮ್ಮಲ್ಲಿ ಮೊಳಕೆಯೊಡೆದು ಹೆಮ್ಮರವಾಗಿ ಬೆಳೆಯಬೇಕಿದೆ. ಅವರು ನೀರೆರೆದ ಜ್ಞಾನದಲ್ಲಿ ಸ್ವಲ್ಪವಾದರೂ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಗಿದ್ದೇ ಆದಲ್ಲಿ ಅವರ ಆಶಯ ಸಾರ್ಥಕವಾಗುತ್ತದೆ ಎಂದರು.

ಈ ಸಮಯದಲ್ಲಿ ವಿವಿಧ ಮಠಾಧೀಶರು, ಸ್ವಾಮೀಜಿಯವರು, ರೈತ ಮುಖಂಡರು, ನಾಯಕರು, ಸಾವಿರಾರು ಭಕ್ತಾಧಿಗಳು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment