Saturday, March 2, 2024

ಐಎಎಸ್ ಅಧಿಕಾರಿ ಕೆ. ಶಿವರಾಮು ರವರಿಗೆ ಭಾವಪೂರ್ಣ ಶ್ರದ್ದಾಂಜಲಿ

 ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ : ಛಲವಾದಿ ಮಹಾಸಭಾದ ಸಂಸ್ಥಾಪಕರು ಹಾಗೂ ರಾಜ್ಯ ಅಧ್ಯಕ್ಷರು, ಹಿರಿಯ ಐಎಎಸ್ ಅಧಿಕಾರಿಗಳು ಮತ್ತು ಚಲನಚಿತ್ರ ನಟರಾದ ಕೆ.ಶಿವರಾಮು ರವರ ಅಗಲಿಕೆಯಿಂದಾಗಿ ಭಾವಪೂರ್ಣ ಶ್ರದ್ದಾಂಜಲಿ ಸಭೆಯನ್ನು ವಿಜಯಪುರ ನಗರದ ಸರಕಾರಿ ನೌಕರರ ಭವನದಲ್ಲಿ ಛಲವಾದಿ ಮಹಾಸಭಾ ಜಿಲ್ಲಾ ಸಮಿತಿ ವಿಜಯಪುರ ವತಿಯಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸುನೀಲ ಹೊಸಳ್ಳಿ ಅಧ್ಯಕ್ಷರು ಮಾತನಾಡಿ, ಕೆ.ಶಿವರಾಮು ಸಾಹೇಬರು, ಒಬ್ಬ ಧೀಮಂತ ಹಿರಿಯ ಐಎಎಸ್ ಅಧಿಕಾರಿಗಳಾಗಿ ತಮ್ಮ ಅಧಿಕಾರ ಅವಧಿಯಲ್ಲಿ ಎಲ್ಲ ಜಾತಿ, ಮತ, ಪಂಥ ಜನಾಂಗದವರೊಂದಿಗೆ ಒಳ್ಳೆಯ ನಿಕಟ ಸಂಪರ್ಕವನ್ನು ಹೊಂದಿದ್ದರು. ಇವರು ಎಲ್ಲ ಜನರಿಗೆ ಸಹಾಯ ಸಹಕಾರ ನೀಡುತ್ತಾ ತಮ್ಮ ಕಾರ್ಯನಿಷ್ಠೆಯನ್ನು ಅತ್ಯಂತ ಶ್ರದ್ದೆಯಿಂದ ಸಲ್ಲಿಸಿದ ಮಹಾನ ನಾಯಕರಾದ ಇವರು ಸರಕಾರಿ ನೌಕರಿಯಿಂದಿಗೆ ತಮ್ಮನ್ನು ಗುರ್ತಿಸಿದ ಛಲವಾದಿ ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಇದರೊಂದಿಗೆ ಇವರು ಚಲನಚಿತ್ರದಲ್ಲಿಯೂ ಸಹ ಅಚ್ಚಳಿಯದಂತಹ ಚಿತ್ರಗಳನ್ನು ನೀಡಿದ ಇವರು ನಟಿಸಿದ ಚಿತ್ರಗಳು ಹಾಡುಗಳು ಜನಮಾನಸದಲ್ಲಿ ಜನಾನುರಾಗಿ ಆಗಿವೆ ಎಂದು ನೆನಪು ಮಾಡಿಕೊಂಡರು.

ಈ ಸಂದರ್ಭದಲ್ಲಿ ಆಯಾಜ ಎಚ್. ರೋಜೆವಾಲೆ, ಯುನುಸ್ ವಿಜಯಪುರ, ಜಿ.ಡಿ.ಹೊಸಮನಿ, ಬಿ.ಆ‌ರ್. ಲಿಂಬೂಡಕರ, ಫಯಾಜ ಜಮಾದಾರ, ಎಮ್.ಆರ್. ಮೆಟಗಾರ, ಸುರೇಶ ಕೋಟ್ಯಾಳಕರ, ರಾಜಕುಮಾರ ಆರ್. ಕಟ್ಟಿ, ಇಬ್ರಾಹಿಂ ಒಂಟಿ, ಸಿದ್ದಾರ್ಥ ಅಹಿರಸಂಗ, ಶಶಿಕಾಂತ ಕಟ್ಟಿ ಇನ್ನಿತರರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment