Wednesday, January 10, 2024

ಸಮೃದ್ಧಿ ಶಾಲೆಗೆ ಪ್ರಿಂಟರ್ ದೇಣಿಗೆ

ವಿಜಯಪುರ : ನಗರದ ರಾಜಕುಮಾರ ಲೇಔಟನಲ್ಲಿರುವ ಸಮೃದ್ಧಿ ಶಾಲೆಯಲ್ಲಿ ಇಂದು ಶೇಠ್ ತಾಪಿದಾಸ ತುಳಸಿದಾಸ ಮತ್ತು ವೈಜದಾಸ ಚಾರಿಟೆಬಲ್ ಟ್ರಸ್ಟ್ ವತಿಯಿಂದ ರೂ. 20000 ಮೊತ್ತದ ಪ್ರಿಂಟರ್ ಅನ್ನು ಉಚಿತವಾಗಿ ನೀಡಿದರು. ಸಂಸ್ಥೆಯ ಸಮನ್ವಯಾಧಿಕಾರಿ ಶ್ರೀಯುತ ವಿಶ್ವನಾಥ .ಎಮ್. ಸಿಂದಗಿ ಸಮೃದ್ಧಿ ಶಾಲೆಯಲ್ಲಿ ಪ್ರಿಂಟರ್ ನ್ನು ಉದ್ಘಾಟಿಸಿ ಮಾತನಾಡಿ ಈ ಒಂದು ಪ್ರಿಂಟರನ್ನು ಮಕ್ಕಳ ಉದಯೋನ್ಮುಖ ಬೆಳವಣಿಗೆಗೆ ಉಪಯೋಗಿಸಿಕೊಳ್ಳಲು ಸಲಹೆ ನೀಡಿದರು. 

ಮುಖ್ಯ ಅಥಿತಿಗಳಾದ ಶ್ರೀಯುತ ಅಂಬಾದಾಸ ಜೋಷಿ ಅವರು ಮಾತನಾಡಿ ಇಂದಿನ ತಾಂತ್ರಿಕ ಯುಗದಲ್ಲಿ ಮಹಾನ್ ದಾನಿಗಳ ಕೊಡುಗೆಯನ್ನು ಶ್ಲಾಘಿಸಿದರು.

ಈ ಒಂದು ಕಾರ್ಯಕ್ರಮದಲ್ಲಿ ಸಂಸ್ಥೆಯಮುಖ್ಯಸ್ಥರಾದ ಶ್ರಿಯುತ ರಮೇಶರವರು ಮುಖ್ಯ ಗುರುಮಾತೆ ಕಾಂತಾ ಬಿ ಕುಲಕರಣಿ, ಶ್ರೀಮತಿ ಸವಿತಾ ಭಜಂತ್ರಿ , ಶ್ರೀಮತಿ ಶ್ರೀದೇವಿ ಶಿಂದೆ , ಶ್ರೀಮತಿ ಪರಿಮಳಾ ಕುಲಕರಣಿ, ಶ್ರೀಮತಿ ಜ್ಯೋತಿ ಬಸರಗಿ , ಶ್ರೀಮತಿ ಅರಚನಾ ಕನಮಡಿ ,ಶ್ರೀಮತಿ ಕವಿತಾ ರಾಠೋಡ , ಶ್ರೀಮತಿ ಭವಾನಿ ದೊಡ್ಡ ಪತ್ತಾರ, ಶ್ರೀಮತಿ ವಿಶಾಲಾಕ್ಷಿ ಅಥಣಿ ಮುಂತಾದವರು ಪಾಲ್ಗೊಂಡಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment