Tuesday, June 30, 2020

ಪತ್ರಿಕೆ ಎಂಬುದು ಒಂದು ನಾಡಿನ ಸಾಕ್ಷಿ ಪ್ರಜ್ಞೆ



ವಿಶ್ವಾದ್ಯಂತದ ಮಾಹಿತಿ ಕಲೆ ಹಾಕಿ
ಸಮಾಜದ ಹಿತ ದೃಷ್ಟಿಯ ಬಯಸಿ
ದಿನ ಬೆಳಗಾದರೆ ಸಾಕು
ನಮ್ಮ ಮನೆಯ ಅಂಗಳದಲ್ಲಿಹುದು
ದಿನದಸುದ್ದಿ ತಿಳಿಸುವ  ಅತಿಥಿಯಾಗಿ
ಈ ದಿನ ಪತ್ರಿಕೆಯು
ಆಚರಿಸುವ ಬನ್ನಿ ಪತ್ರಿಕೆಯ ದಿನಾಚರಣೆ ನಾವೆಲ್ಲರೂ ಸೇರಿ ಇಂದು

ಪತ್ರಿಕೆ ಎಂಬುದು ಒಂದು ನಾಡಿನ ಸಾಕ್ಷಿ ಪ್ರಜ್ಞೆ ,ದೇಶದ ಅಭಿವೃದ್ಧಿ ಏಕತೆ ಸಮಾಜದಲ್ಲಿ ಸಾಮರಸ್ಯ ಕಾಪಾಡುವಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಪ್ರಮುಖವಾದದ್ದು ಬಂಡವಾಳ ಶಾಹಿಗಳ ಕಪಿ ಮುಷ್ಟಿಗೆ ಒಳಗಾಗದೆ ಸತ್ಯವನ್ನು ಸಮಾಜಕ್ಕೆ ತೋರಿಸುವಂತದ್ದು. ಪತ್ರಕರ್ತರು ಪ್ರಾಮಾಣಿಕ ನಿಷ್ಠೆ ವರದಿಗೆ ಹೆಚ್ಚಿನ ಮಹತ್ವ ನೀಡುವುದರ ಜೊತೆಗೆ ಸಮಾಜದಲ್ಲಿ ನೊಂದವರ ಬಡವರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪತ್ರಕರ್ತರಿಗೆ ನಮ್ಮದೊಂದು ಹೃದಯಪೂರ್ವಕ ಧನ್ಯವಾದಗಳನ್ನು & ಅಭಿನಂದನೆಗಳನ್ನು  ಅರ್ಪಿಸಲೇಬೇಕು. 

ಹೃದಯಗಳ ಪಿಸು ಮಾತಿಗೂ ಹಾಗೂ ದೌರ್ಜನ್ಯದ ವಿರುದ್ಧ ಧ್ವನಿ ಒಗ್ಗೂಡಿಸಲು ಮತ್ತು ದಾಖಲಿಸಲು ಇರುವ ವೇದಿಕೆಯೇ ಈ ಪತ್ರಿಕೆಯು.
 ಸಾಮಾನ್ಯ ಆಸಕ್ತಿಯ ಪತ್ರಿಕೆಗಳು ವಿಶಿಷ್ಟವಾಗಿ ಸುದ್ದಿ ಲೇಖನಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳು ಹಾಗೂ ಸ್ಥಳೀಯ ಸುದ್ದಿ ಪ್ರಕರಣಗಳು ರಾಜಕೀಯ ಘಟನೆಗಳು ವ್ಯಾಪಾರ ಮತ್ತು ಹಣಕಾಸು ಅಪರಾಧ ತೀವ್ರ ಹವಾಮಾನ ಮತ್ತು ನೈಸರ್ಗಿಕ ವಿಪತ್ತುಗಳು ಒಳಗೊಂಡಂತೆ ಆರೋಗ್ಯ ಔಷಧ ವಿಜ್ಞಾನ ಮತ್ತು ತಂತ್ರಜ್ಞಾನ ಕ್ರೀಡೆ ಮತ್ತು ಮನರಂಜನೆ ಸಮಾಜ ಆಹಾರ ಮತ್ತು ಅಡುಗೆ ಬಟ್ಟೆ ಮತ್ತು ಮನೆ ಸಾಮಾನ್ಯವಾಗಿ ಕಾಗದದ ಆ ಪ್ರಮುಖ ಗುಂಪುಗಳನ್ನು ಪ್ರತಿಯೊಂದು ಭಾಗಗಳಾಗಿ ವಿಂಗಡಿಸಿ ಪ್ರಕಟಿಸುವುದೇ ಈ ಪತ್ರಿಕೆಯು.

1843 ನೇ ಜುಲೈ 1 ರಂದು ಪ್ರಾರಂಭವಾದ *ಮಂಗಳೂರು ಸಮಾಚಾರ* ವೆಂಬ ಪತ್ರಿಕೆಯ ಕರ್ನಾಟಕದ ಪ್ರಥಮ ಪತ್ರಿಕೆ ಎಂದು ಪರಿಗಣಿಸಲಾಗಿದೆ. ಕನ್ನಡದಲ್ಲಿ ಪತ್ರಿಕೋದ್ಯಮ ಪ್ರಾರಂಭವಾದದ್ದು ಪಾಶ್ಚಾತ್ಯರ ಸಂಪರ್ಕವಾದ ಮೇಲೆ ಅವರು ಮುದ್ರಣ ಯಂತ್ರವನ್ನು ಕರ್ನಾಟಕದಲ್ಲೂ ಬಳಕೆಗೆ ತಂದರು ನಂತರ ಅವರಿಂದಲೇ ಪತ್ರಿಕೆಗಳು ಪ್ರಾರಂಭವಾದವು. 

ಸಮೃದ್ಧ ಪತ್ರಿಕೆಗಳು ಆ ನಾಡಿನ ಸಂಸ್ಕೃತಿ ಹಾಗೂ ಸಾಹಿತ್ಯ ಸಮೃದ್ಧಿಯ ಪತ್ರಿಕೆ ಒಂದು ನಾಡಿನ ಸಮೃದ್ಧತೆ ಕೇವಲ ಭೌತಿಕ ವಸ್ತುಗಳಲ್ಲಿರುವುದಿಲ್ಲ ಅದು ನಾಡಿನ ಸಮೃದ್ಧತೆಯನ್ನು  ಒಳಗೊಂಡಿರುತ್ತದೆ ಪತ್ರಿಕೆಗಳು ಒಂದು ವೇಳೆ ನಿಂತು ಹೋದರೆ ನಿಜಕ್ಕೂ ಸಾಂಸ್ಕೃತಿಕದ ಆತ್ಮಹತ್ಯೆ ಆಗುವುದು. 

ಇತ್ತೀಚಿನ ದಿನಮಾನಗಳಲ್ಲಿ ಪತ್ರಿಕೆಗಳ ಓದುಗರೂ ಹೆಚ್ಚು ಪತ್ರಿಕೆಗಳು ಹೆಚ್ಚಾಗಿರುವುದನ್ನು ಕಾಣುವೆವು.ಪತ್ರಿಕೆಯಲ್ಲಿ ಸುದ್ದಿಯನ್ನು ಹರಿಸಬೇಕಾದರೆ ಪತ್ರಕರ್ತರ ಶ್ರಮ ಬಹಳಷ್ಟು ಇರುವುದು ಗಮನಿಸಬೇಕಾಗುತ್ತದೆ. ಏಕೆಂದರೆ ಪತ್ರಿಕೆಯಲ್ಲಿ ಪ್ರಕಟವಾಗುವ ವಿಷಯ ನಿಶ್ಚಿತವಾಗಿ ನೇರವಾಗಿ ಇರುವಂತಹ ವಿಷಯಗಳಾಗಿರುತ್ತವೆ ಹಾಗಾಗಿ ಸುಳ್ಳು ಕಲ್ಲುಗಳ ಸುದ್ದಿ ಪ್ರಕಟಿಸಲಾಗಿದೆ ಅಂತಹ ಪತ್ರಿಕೆಗಳು ಜನಮನ್ನಣೆ ಪಡೆಯಲಾಗದು. ಜನಮನ್ನಣೆಗೆ ಪಾತ್ರವಾಗಬೇಕಾದರೆ ಆ ಪತ್ರಿಕೆಯಲ್ಲಿ ತುಂಬಾ ಅಗತ್ಯ ಮತ್ತು ಮುಖ್ಯ  ಸುದ್ದಿಗಳನ್ನು ಪ್ರಕಟಿಸಬೇಕು. ವಿಶ್ವಾದ್ಯಂತದ ಸುದ್ದಿಗಳನ್ನು ಒಗ್ಗೂಡಿಸಿ ಸತ್ಯನಿಷ್ಠೆ ಆದ ವಿಷಯವನ್ನು ಪ್ರಕಟಣೆ ಮಾಡಿ ಓದುಗರಿಗೆ ಜ್ಞಾನ ತುಂಬುವ ಕಾರ್ಯ ಪತ್ರಕರ್ತರದ್ದಾಗಿದೆ. ಒಂದು ವಿಷಯವನ್ನು ಸಂಗ್ರಹಣೆ ಮಾಡಬೇಕಾದರೆ ಅದಕ್ಕೆ ಅಲೆದಾಟ ಓಡಾಟ ತುಂಬಾ ಶ್ರಮದ ಕಾರ್ಯವಾಗಿರುವುದು. ದಿನ ಬೆಳಗಾದರೆ ಜನರಿಗೆ ಸುದ್ದಿ ಮುಟ್ಟಿಸುವ ಕಾರ್ಯ ಪತ್ರಿಕೆಯದ್ದಾಗಿದೆ.ಪತ್ರಿಕೆಯ ಮಹತ್ವ ಅಪಾರವಾದದ್ದು ಎಂಬುದು ಜನರಿಗೆ ಈಗಾಗಲೇ ಅರಿವಾಗಿದೆ. ಸಮಾಜದ ಒಡಕು ತೊಡಕುಗಳ ನಿರ್ಮೂಲನೆಗೆ ಧ್ವನಿ ಎತ್ತಿ ನಿಲ್ಲುವುದೇ  ಈ ಪತ್ರಿಕೆ. ಅದರಲ್ಲೂ ಜನರ ಕಷ್ಟಗಳಿಗೆ ಅವರ  ಭಾವಮಿಡಿತಕ್ಕೆ  ಅವರ ಸ್ಪಂದನೆಗೆ ಮೊದಲು ಓ ಗೊಡುವ  ಕಾರ್ಯ ಈ ಪತ್ರಿಕೆಯದ್ದೆ. ಹಾಗಾಗಿ ಈ ಪತ್ರಿಕೆಯ ಪತ್ರಕರ್ತರಿಗೆ  ನಾವು ಬಹು ದೊಡ್ಡ ಸಲಾಂ ನ್ನು ಹೇಳಲೇಬೇಕು. ತಮ್ಮ ಮನೆಯ ಚಿಂತೆಯನ್ನು ಬದಿಗೊತ್ತಿ ಸಮಾಜದ ಚಿಂತೆಯನ್ನು ಮಾಡುವ ಪತ್ರಕರ್ತರಿಗೆ ಧನ್ಯವಾದಗಳು ತಿಳಿಸುತ್ತಾ .
ಹಲವಾರು ಪತ್ರಿಕೋದ್ಯಮಿಗಳಿಗೆ ಪತ್ರಿಕೆಗಳಿಗೆ ಜುಲೈ 1 ಪತ್ರಿಕಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲೇಬೇಕು ನಾವೆಲ್ಲ ಒಗ್ಗೂಡಿ.

ಮಮತಾ ಗುಮಶೆಟ್ಟಿ
ವಿಜಯಪುರ

No comments:

Post a Comment