Saturday, June 14, 2025

ರಕ್ತದಾನ ಮಾಡುವ ಭಾಗ್ಯ ಸಿಕ್ಕರೆ ತಪ್ಪದೆ ಮಾಡಿ ಜೀವ ಉಳಿಸಿ

 

ವಿಜಯಪುರ ನಗರದ ವಿಜಯಪುರ ರಕ್ತ ನಿಧಿ ಕೇಂದ್ರದಲ್ಲಿ. ದೇಶ ರಕ್ಷಕರ ಪಡೆ ಸಂಚಾಲಿತ ಆಕಾಶ ರಕ್ತ ಸಹಾಯವಾಣಿ ವತಿಯಿಂದ ರಕ್ತ ದಾನ ಮಾಡುವ ಮೂಲಕ ವಿಶ್ವ ರಕ್ತದಾನಿಗಳ ದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ದೇಶ ರಕ್ಷಕರ ಪಡೆ ಸಂಸ್ಥಾಪಕರಾದ ರೋಹನ್ ಆಪ್ಟೆ ಮಾತನಾಡಿ ಕಳೆದ 5 ವರ್ಷಗಳಿಂದ ನಮ್ಮ ಸಂಘಟಣೆಯ ಪ್ರತಿ ಕಾರ್ಯಕರ್ತರು ಪ್ರತಿ 3 ತಿಂಗಳಿಗೆ ರಕ್ತದಾನ ಮಾಡತಾ ಬಂದಿದ್ದಾರೆ. ಅದರಜೊತೆ ಕರ್ನಾಟಕ, ಮಹಾರಾಷ್ಟ್ರ, ಹಾಗು ಹೈದರಾಬಾದ ಸೇರಿ 4600 ಕ್ಕೂ ಅಧಿಕ ಜನರಿಗೆ ಆಕಾಶ ರಕ್ತ ಸಹಾಯವಾಣಿ ವತಿಯಿಂದ ರಕ್ತ ಪಡೆಯಲು ಸಹಾಯವಾಗಿದೆ. ಜನರು ರಕ್ತದಾನ ಮಾಡುವ ಮಹತ್ವ ತಿಳಿದಕೊಳ್ಳ ಬೇಕು. ಅದೆಷ್ಟು ರಕ್ತದಾನ ಮಾಡದೆ ಇರುವ ಜನರಿಗೆ ಕೂಡ ಅವರ ಆಪ್ತರಿಗೆ ರಕ್ತ ಬೇಕಾದಾಗ ರಕ್ತದಾನ ಎಷ್ಟು ಅಮೂಲ್ಯ ಅಂತ ಗೊತ್ತಾಗುತ್ತೆ. ಆದಕಾರಣ ರಕ್ತದಾನ ಮಾಡುವ ಭಾಗ್ಯ ಸಿಕ್ಕರೆ ತಪ್ಪದೆ ಮಾಡಿ ಜೀವ ಉಳಿಸಿ ಅಂದರು.


ಆಕಾಶ ರಕ್ತ ಸಹಾಯವಾಣಿ ಅಧ್ಯಕ್ಷರಾದ ವಿಕ್ರಮ ತಾಂಬೆಕರ ಮಾತನಾಡಿ ನಮ್ಮ ದೇಶ ರಕ್ಷಕರ ಪಡೆ ಕಾರ್ಯಕರ್ತ ಆಕಾಶ ಕುಲಕರ್ಣಿ ಅವರು 2020 ರಲ್ಲಿ ವಿದ್ಯುತ್ ಅಪಘಾತದಲ್ಲಿ ಸಾವನ್ನಪ್ಪಿದ್ದು. ನೇರವಾಗಿ ಜನರ ಜೀವ ಉಳಿಸುವ ಅವರ ಒಂದು ಆಸೆಯಂತೆ ರಕ್ತ ಸಹಾಯವಾಣಿ ಕೇಂದ್ರಕ್ಕೆ ಅವರ ಹೆಸರು ಇಡುವ ಮುಖಾಂತರ ಜನರ ಸೇವೆ ಮಾಡುತ್ತಾ ಇದ್ದೇವೆ ಅಂದರು.

ದೇಶ ರಕ್ಷಕರ ಪಡೆ ಪ್ರಧಾನಕಾರ್ಯದರ್ಶಿ ಜಗದೀಶ ರೂಗಿಮಠ ಮಾತನಾಡಿ ರಕ್ತದಾನವು ಬಹಳ ಮುಖ್ಯವಾದ ಕೆಲಸ. ಇದು ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ ರಕ್ತ ಪರಿಚಲನೆಗೆ ಸಹಕಾರಿಯಾಗಿದೆ. ರಕ್ತದಾನ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ ಮತ್ತು ಇದು ಸಮಾಜಕ್ಕೆ ಬಹಳ ಉಪಯುಕ್ತವಾಗಿದೆ. ಇಲ್ಲಿಯವರೆಗೆ ರಕ್ತದಾನದ ಮಾಡದೇ ಇರುವ ಯಾವುದೋ ಒಂದು ಭಯದಿಂದ ಹಿಂಜರಾಗುತ್ತ ಇದ್ದಾರೆ ಅದರೆ ಅಂಥವರು ಕೂಡಾ ಧೃಡ ನಿರ್ಧಾರ ಮಾಡಿ ಜೀವ ಉಳಿಸುವ ಪುಣ್ಯದ ಕೆಲಸದಲ್ಲಿ ಪಾಲಗೋಳ್ಳ ಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ದೇಶ ರಕ್ಷಕರ ಪಡೆ ಅಧ್ಯಕ್ಷಾರಾದ ಆಕಾಶ ಇಂಡಿ ಮಾತನಾಡಿ ಇವತ್ತಿನ ಯುವ ಸಮುದಾಯ ಹೆಚ್ಚು ರಕ್ತದಾನ ಮಾಡಿ ಸಮಾಜಕ್ಕೆ ಸ್ಫೂರ್ತಿ ನೀಡಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ

ಕಿರಣ್ ಕೋಳುರಗಿ, ಶಿವಾನಂದ ತುಪ್ಪದ,ವಿನೋದ ಪತ್ತಾರ, ಆದಿತ್ಯ ಬಡಿಗೇರ, ಅಭಯ ಹದನುರ, ಆದಿತ್ಯ ಹಳ್ಳಿ, ರಾಘವೇಂದ್ರ ಮಿರೇಕರ, ಸಾಗರ ಭಜಂತ್ರಿ, ಪವನ ಶರ್ಮಾ, ಪ್ರಸನ್ನ ಗಣಿಯಾರ, ಕೃಷ್ಣಾ ಮಾಯಾಚಾರಿ, ವಿವೇಕ ತಾವರಗೇರಿ ರೋಹನ್ ವಿನಯ ಆಪ್ಟೆ. ಉಪಸ್ಥಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Friday, June 13, 2025

ಕಿಬ್ಬೊಟ್ಟೆಯ ಕ್ಷಯರೋಗದ ವಿಜಯಪುರ ಮೂಲದ ಮಹಿಳೆಗೆ ರೊಬೋಟ್‌ ಚಿಕಿತ್ಸೆ


ವಿಜಯಪುರ: ಜೂನ್ 2025: ಅತಿ ಅಪರೂಪದ ಮೈಕೋಬ್ಯಾಕ್ಟೀರಿಯಾದಿಂದ ಉಂಟಾಗುವ ಕಿಬ್ಬೊಟ್ಟೆಯ ಕ್ಷಯರೋಗಕ್ಕೆ ಒಳಗಾಗಿದ್ದ ವಿಜಯಪುರ ಮೂಲದ 25 ರ‍್ಷದ ಮಹಿಳೆಗೆ 
ಫೋರ್ಟಿಸ್‌ ಆಸ್ಪತ್ರೆಯಲ್ಲಿ  (ಬೆಂಗಳೂರಿನ ಬನ್ನೇರುಘಟ್ಟ ರಸ್ತೆ) ಸುಧಾರಿತ ರೊಬೋಟ್‌ ನೆರವಿನಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ.

ಆಸ್ಪತ್ರೆಯಲ್ಲಿ ಒಬಿಜಿವೈಎನ್, ರೋಬೋಟಿಕ್, ಫಲವತ್ತತೆ ಮತ್ತು ಲ್ಯಾಪರೊಸ್ಕೋಪಿಕ್ ರ‍್ಜನ್ ಡಾ. ಉಷಾ ಬಿ.ಆರ್ ಅವರ ಆರೈಕೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ವಿಜಯಪುರದ ಅಲ್ಬೆಲಿ ಎಂಬ 25 ರ‍್ಷದ ಮಹಿಳೆ ದರ‍್ಘಕಾಲದ ಹೊಟ್ಟೆ ನೋವು ಮತ್ತು ಆರು ತಿಂಗಳುಗಳಿಂದ ನಿರಂತರ ಶ್ರೋಣಿಯ ಉಂಡೆಯಿಂದ ಬಳಲುತ್ತಿದ್ದರು. ಐದು ರ‍್ಷಗಳ ಹಿಂದೆ ವಿವಾಗವಾಗಿದ್ದ ಅವರ ಆರೋಗ್ಯ ಚೆನ್ನಾಗಿಯೇ ಇತ್ತು, ನಂತರದಲ್ಲಿ ಹೊಟ್ಟೆ ನೋವಿಗೆ ಒಳಗಾಗಿದ್ದರು. ಈ ಹಿಂದೆ ಸ್ಥಳೀಯ ಆಸ್ಪತ್ರೆಯಲ್ಲಿ ತೆರೆದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಇದು ಕರುಳಿನ ಗಾಯದಿಂದ ಜಟಿಲವಾಗಿತ್ತು ಹಾಗೂ ನರ‍್ಣಾಯಕ ರೋಗನರ‍್ಣಯ ಉಂಟುಮಾಡುವಲ್ಲಿ ವಿಫಲವಾಗಿದೆ. ಕಿಬ್ಬೊಟ್ಟೆಯ ಕ್ಷಯರೋಗದ ಪ್ರಕರಣ ಎಂದು ಶಂಕಿಸಲಾಗಿರುವ ಆಕೆಗೆ ಪ್ರಮಾಣಿತ ಟಿಬಿ ಔಷಧಿಗಳನ್ನು ಸಹ ನೀಡಲಾಗಿತ್ತು, ಆದರೆ ಆಕೆಯ ಸ್ಥಿತಿ ಸುಧಾರಿಸಲಿಲ್ಲ.

ಖಚಿತವಾದ ರೋಗನರ‍್ಣಯ ಮತ್ತು ಪರಿಣಾಮಕಾರಿ ಚಿಕಿತ್ಸೆಯ ಹುಡುಕಾಟದಲ್ಲಿ, ಆಕೆ, ಬೆಂಗಳೂರಿನ ಫರ‍್ಟಿಸ್ ಆಸ್ಪತ್ರೆಗೆ ತೆರಳಿದರು. ಅಲ್ಲಿ ವಿವರವಾದ ಕ್ಲಿನಿಕಲ್ ರೋಗನರ‍್ಣಯವು ತೀವ್ರವಾದ ಶ್ರೋಣಿಯ ಸಮಸ್ಯೆ ಬಹಿರಂಗಪಡಿಸಿತು. ಹಿಂದಿನ ವೈದ್ಯಕೀಯ ಮೌಲ್ಯಮಾಪನಗಳಲ್ಲಿ ತಪ್ಪಿಸಿಕೊಂಢಿದ್ದ ಅಂಡಾಶಯ ಮತ್ತು ಫಾಲೋಪಿಯನ್ ಟ್ಯೂಬ್‌ಗಳನ್ನು ಒಳಗೊಂಡ ಸೋಂಕು ಎಂದು ತಿಳಿದುಬಂತು. \ಡಾ. ಉಷಾ ರೊಬೊಟಿಕ್ ನೆರವಿನ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಿದರು.

ಡಾ. ಉಷಾ ಬಿ.ಆರ್, ಸಲಹೆಗಾರರು  OBGYN, ರೋಬೋಟಿಕ್ ರ‍್ಜನ್, ಫಲವತ್ತತೆ ಮತ್ತು ಲ್ಯಾಪರೊಸ್ಕೋಪಿಕ್ ರ‍್ಜನ್, ಫರ‍್ಟಿಸ್ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ, ಬೆಂಗಳೂರು, “ಇದು ಅಸಾಧಾರಣವಾದ ಸಂಕರ‍್ಣ ಪ್ರಕರಣವಾಗಿದೆ. ರೊಬೊಟಿಕ್ ನೆರವಿನ ತಂತ್ರಜ್ಞಾನ ಬಳಸಿಕೊಂಡು, ನಾವು ಈ ರಚನೆಗಳನ್ನು ನಿಖರವಾಗಿ ಬರ‍್ಪಡಿಸಲು, ಶ್ರೋಣಿಯ ದ್ರವ್ಯರಾಶಿಯನ್ನು ತೆಗೆದುಹಾಕಲು, ಫಾಲೋಪಿಯನ್ ಟ್ಯೂಬ್‌ಗಳಿಂದ ಸಂಗ್ರಹವಾದ ರಕ್ತವನ್ನು ಸ್ಪಷ್ಟಪಡಿಸಲು ಮತ್ತು ಹಿಂದಿನ ಸೋಂಕಿನಿಂದಾಗಿ ರೂಪುಗೊಂಡ ಅಸಹಜ ಪ್ರದೇಶವನ್ನು ತೆಗೆದುಹಾಕಲು ಸಾಧ್ಯವಾಯಿತು ಎಂದರು ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.