Friday, July 28, 2023

ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದ ಹಿರಿಯ ಸಾಹಿತಿ ದೊದ್ದಣ್ಣ ಭಜಂತ್ರಿ


ಈ ದಿವಸ ವಾರ್ತೆ

ವಿಜಯಪುರ: ದಲಿತ ಸಾಹಿತ್ಯ ಪರಿಷತ್ತು (ರಿ) ರಾಜ್ಯ ಘಟಕ, ಗದದ ಬೆಳ್ಳಿ ಸಂಭ್ರಮದ ನಿಮಿತ್ಯ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಹಾಗೂ 30 ಎರಡು ದಿನಗಳ ಕಾಲ  ಹಮ್ಮಿಕೊಂಡಿರುವ  10ನೇಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ 

ಪರಿಷತ್ತಿನ ಧ್ವಜಾರೋಹಣ ವನ್ನು ಹಿರಿಯ ಸಾಹಿತಿ ಶ್ರೀ ದೊಡ್ಡಣ್ಣ ಭಜಂತ್ರಿ ನೆರವೇರಿಸುವ ಮೂಲಕ ಸಮ್ಮೇಳನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.



ಈ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಣರಾದ ಪ್ರೊ. ಎಚ್.ಟಿ.ಪೋತೆ ಹಾಗೂ ಅವರ ಧರ್ಮಪತ್ನಿ ಲಲಿತಾ ಪೋತೆ , ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ, ಜಿಲ್ಲಾಧ್ಯಕ್ಷ ಸವರಾಜ ಜಾಲವಾದಿ,  ಕಾರ್ಯದರ್ಶಿ ಸುಬಾಸ ಹುದ್ಲೂರ, అತಿಥಿಗಳಾದ ದ.ಸಂ.ಸ ರಾಜ್ಯ ಸಂಘಟನಾ ಸಂಚಾಲಕರಮೇಶ ಆಸಂಗಿ,  ದ.ಸಂ.ಸರಾಜ್ಯ ಸಂಚಾಲಕ ಅಭಿಷೇಕ ಚಕ್ರವರ್ತಿ,  ಮಂಜುನಾಥ ಹಿರೇಮನಿ , ಸುಜಾತಾ ಚಲವಾದಿ, ಡಾ. ಪೂರ್ಣಿಮಾ ದಾಮಣ್ಣವರ,ಎಚ್. ಎಂ. ದೊಡಮನಿ, ಉಮೇಶ ಶಿವಶರಣ, ತ್ರಿವೇಣಿ ಬನಸೋಡೆ , ವಿಜು ಕಾಳಶೆಟ್ಟಿ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ , ಯಶವಂತ ದೊಡಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

29-07-2023 EE DIVASA KANNADA DAILY NEWS PAPER

ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಎಚ್.ಟಿ.ಪೋತೆ ಅವರಿಗೆ ಅದ್ಧೂರಿ ಸ್ವಾಗತ

ಈ ದಿವಸ ವಾರ್ತೆ

ವಿಜಯಪುರ: ದಲಿತ ಸಾಹಿತ್ಯ ಪರಿಷತ್ತು (ರಿ) ರಾಜ್ಯ ಘಟಕ, ಗದಗ ಬೆಳ್ಳಿ ಸಂಭ್ರಮದ ನಿಮಿತ್ಯ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜುಲೈ 29 ಹಾಗೂ 30 ರಂದು ನಡೆಯಲಿರುವ 10ನೇಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ.ಎಚ್.ಟಿ.ಪೋತೆ ಹಾಗೂ ಅವರ ಧರ್ಮಪತ್ನಿ ಲಲಿತಾ ಲಲಿತಾ ಪೋತೆ ಅವರು ವಿಜಯಪುರ ನಗರಕ್ಕೆ ಆಗಮಿಸಿದ ನಿಮಿತ್ಯ ವಿಜಯಪುರ ನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಅದ್ಧೂರಿಯಾಗಿ ಪುಸ್ತಕ ನೀಡಿ ಆತ್ಮೀಯವಾಗಿ ಸ್ವಾಗತಿಸಿಕೊಂಡರು.

ಈ ಸಂದರ್ಭದಲ್ಲಿ ದ.ಸಾ.ಪ ರಾಜ್ಯಾಧ್ಯಕ್ಷರಾದ ಡಾ.ಅರ್ಜುನ ಗೊಳಸಂಗಿ, ಉಪಾಧ್ಯಕ್ಷ ಡಾ.ಎಚ್.ಬಿ.ಕೋಲಕಾರ, ಕಾರ್ಯದರ್ಶಿ ಸುಭಾಸ ಹುದ್ಲೂರ, ಸಮ್ಮೇಳನದ ಸಂಯೋಜಕ ಶ್ರೀನಾಥ ಪೂಜಾರಿ, ಸಹ ಸಂಯೋಜಕ ಉಮೇಶ ಶಿವಶರಣ, ದ.ಸಾ.ಪ ಜಿಲ್ಲಾಧ್ಯಕ್ಷ ಬಸವರಾಜ ಜಾಲವಾದಿ, ಬೆಳಗಾವಿ ವಿಭಾಗೀಯ ಅಧ್ಯಕ್ಷೆ ಡಾ. ಸುಜಾತಾ ಚಲವಾದಿ, ಸಾಹಿತಿ ದೊಡ್ಡಣ್ಣ ಭಜಂತ್ರಿ, ಹಿರಿಯ ಪತ್ರಕರ್ತ ಅನೀಲ ಹೊಸಮನಿ, ಪ್ರಭುಗೌಡ ಪಾಟೀಲ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ, ಮೋಹನ ಕಟ್ಟಿಮನಿ, ಚೆನ್ನು ಕಟ್ಟಿಮನಿ, ಫಯಾಜ ಕಲಾದಗಿ, ಡಾ.ಭುವನೇಶ್ವರಿ ಕಾಂಬಳೆ, ತ್ರಿವೇಣಿ ಬನಸೋಡೆ, ವನಜಾಕ್ಷಿ ನಿಡೋಣಿ, ಹೇಮಲತಾ ವಸ್ತ್ರದ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Thursday, July 27, 2023

28-07-2023 EE DIVASA KANNADA DAILY NEWS PAPER

ನಾಳೆ ( ಜು.28) ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ; ಜಿಲ್ಲಾಧಿಕಾರಿ ಟಿ.ಭೂಬಾಲನ ಆದೇಶ

 

ಈ ದಿವಸ ವಾರ್ತೆ

ವಿಜಯಪುರ: ವಿಜಯಪುರ ಜಿಲ್ಲಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ  ಮುಂಜಾಗೃತಾ ಕ್ರಮವಾಗಿ ಹಾಗೂ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು,ಸರ್ಕಾರಿ ಹಾಗೂ ಖಾಸಗಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಹಾಗೂ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ ಶುಕ್ರವಾರ (ಜುಲೈ-28) ರಂದು ರಜೆ ಘೋಷಿಸಿ, ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಅವರು ಆದೇಶಿಸಿದ್ದಾರೆ.


ಎಲ್ಲ ಪದವಿ,ಸ್ನಾತಕೋತ್ತರ ಪದವಿ,ಡಿಪ್ಲೋಮಾ, ಇಂಜಿನೀಯರಿಂಗ್ ಮತ್ತು ಐಟಿಐ ಕಾಲೇಜುಗಳಿಗೆ ರಜೆ ಘೊಷಿಸಿರುವುದಿಲ್ಲ.

 ಎಂದಿನಂತೆ ತರಗತಿ ನಡೆಯಲಿವೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಸಕಲಾ ಕಲಾ ವಲ್ಲಭ ಪ್ರಕಾಶ ಕುಂಬಾರ ಸಾವು

ಈ ದಿವಸ ವಾರ್ತೆ

ವಿಜಯಪುರ: ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಜಿಲ್ಲೆಯ ಕನ್ನಡಪರ ಹೋರಾಟಗಾರ ಪ್ರಕಾಶ ಕುಂಬಾರ ದಾರುಣ ಸಾವಿಗೀಡಾದ ಘಟನೆ ವಿಜಯಪುರ ತಾಲೂಕಿನ ನಾಗಠಾಣ ಬಳಿ ಗುರುವಾರ ನಡೆದಿದೆ‌.

ಇಲ್ಲಿನ ಸೊಲ್ಲಾಪುರ ರಸ್ತೆಯ ಶಾಂತಿ ನಗರದ ನಿವಾಸಿ ಪ್ರಕಾಶ ಕುಂಬಾರ (56) ಮೃತಪಟ್ಟ ದುರ್ದೈವಿ.


ಪ್ರಕಾಶ ಕುಂಬಾರ ಈತ ಕನ್ನಡಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡು ಜಿಲ್ಲೆ ಹಾಗೂ ನಾಡಿನ ಜ್ವಲಂತ ಸಮಸ್ಯೆಗಳ ಕುರಿತು ಹೋರಾಟ ನಡೆಸಿದ್ದರು. ನಗರ ಹೃದಯ ಭಾಗವಾದ ಗಾಂಧಿ ವೃತ್ತದಲ್ಲಿರುವ ಶತಮಾನ ಕಂಡ ಐತಿಹಾಸಿಕ ಕನ್ನಡ ಬಾಲಕಿಯರ ಶಾಲೆ ನಂ. 1 ರ ಉಳುವಿಕೆಗಾಗಿ, ತಮ್ಮ ಹೋರಾಟದ ಮೂಲಕ ಶ್ರಮಿಸಿದ್ದರು. ಅದರಂತೆ ವಿಜಯಪುರ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ, ಪ್ರಕಾಶ ಕುಂಬಾರ ಅವರು ಕದಂಬ ಕಿಡಿ  ಪತ್ರಿಕೆಯ ಸಂಪಾದಕರಾಗಿದ್ದರು.

ಅದರಂತೆ ಪ್ರಗತಿ ಪರ ಚಿಂತಕರಾಗಿದ್ದರು.

ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ತಂದೆ- ತಾಯಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಹೋರಾಟಗಾರ ಪ್ರಕಾಶ ಕುಂಬಾರ ಅಗಲಿಕೆಗೆ ಶಿವಶರಣ ಗ್ರಾಫಿಕ್ಸ್ & ಸುಶಾಂತ ಪ್ರಿಂಟರ್ಸ್ ವಿಜಯಪುರ ಹಾಗೂ  ವಿವಿಧ ಸಂಘಟನೆ ಮುಖಂಡರು, ಗಣ್ಯರು, ಗೆಳೆಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.