Monday, July 20, 2020

ಬಲು ಎಚ್ಚರದಿಂದಿರು ಮನುಜ



ಓ ಮನುಜ
ನೀ ಇರು ಬಲು ಎಚ್ಚರದಿಂದ 
ತುಸು ನೀ ಎಚ್ಚರ ತಪ್ಪಿದರ
ಹೋಗತಿ ನೀ
ಯಾರ ಕೈಗೂ ಸಿಗದಂಗ।

ಮಹಾಮಾರಿ ಕೊರೋನಾ
 ವಕ್ರಸೈತಿ ನೋಡು ಈ ಜಗದ ತುಂಬ
ಹಬ್ಬಿ ನಿಂತೈತಿ ನಮ್ಮನ ಬಿಡದಂಗ
ಬೆನ್ನಿಗಿ ಬಿದ್ದ ಬೇತಾಳದಂಗ।

ನೀ ಸಿಕ್ಕರ ಕೊರೋನಾ ಕೈಗಿ
ಹೇಳದಂಗ ಹೊಗತಿ ನೀ ದೂಳಿಪಟದಂಗ
ದುಷ್ಟ ಕೊರೋನಾ ಕಣ್ಣಿಗೆ ಬಿದ್ದರ
 ಆಗತಿ ನೀ ಅನಾಥ ಶವದಂಗ।

ಎಷ್ಟಿದ್ದರ ಏನು ಬಂಧುಬಳಗ
ಆಗ ಬರುದಿಲ್ಲ  ನೋಡ 
ಯಾರು ನಿನ್ನ ನೋಡಾಕ
ನೀ ಸೇರತಿ ನೋಡ ಮಣ್ಣಾಗ
ಶವಸಂಸ್ಕಾರದ ಯಾವ ಆಚಾರ ವಿಚಾರ ಸಂಪ್ರದಾಯವಿಲ್ಲದಂಗ ।

ಅದಕ ಹೇಳುದು ನೋಡು
ಬರಬ್ಯಾಡ ನೀ ಮನಿ ಬಿಟ್ಟು ಹೋರಗ
ನೀ ಬಂದರ ಹೊರಗ 
ಕಾದು ಕುತದ ಅನಿಷ್ಠ
ಈ ಕೊರೋನಾ ಎಂಬ ಜಡ್ಡ 

ಎಚ್ಚರದಿಂದ ಇರು ನೀನು
ಜರ ತಪ್ಪಿದರ ನೀ ಎಚ್ಚರ
ಹೇಗಲೇರಿ ಕುರುತದ ನೋಡು
ಈ ದರಿದ್ರ  ಕೊರೋನಾ ರೋಗ
ಬಿಡುದಿಲ್ಲ ನೋಡು ನಿನ್ನ 
 ನೀ ವಿನಾಶವಾಗುವತನಕ॥


ಮಮತಾ ಗುಮಶೆಟ್ಟಿ
ವಿಜಯಪುರ

21-07-2020 EE DIVASA KANNADA DAILY NEWS PAPER

Saturday, July 18, 2020

ನಡೆದಾಡುವ ದೇವರು



ಗೊಮ್ಮಟಕ್ಕೂ ಎತ್ತರದ
ತತ್ವಜ್ಞಾನದ ಮೇರುಶಿಖರ. 
ಕೃಷ್ಣೆಗೂ ಮಿಗಿಲಾದ 
ಜ್ಞಾನದ ಸಾಗರ. 

ಸ್ವಚ್ಛ ಬಿಳುಪಿನೊಳಗೆ
ಶಾಂತಮೂರ್ತಿ. 
ಶುಭ್ರ ಹೊಳಪಿನೊಳಗೆ 
ಸಹಜಕೀರ್ತಿ. 

ಅರಸಿ ಬಂದ ಪದ್ಮವ 
ತ್ಯಾಗ ಮಾಡಿದ ತ್ಯಾಗಿ. 
ಹರಸಿಬಂದ ಆಸೆಗಳೆಲ್ಲವ
ದೂರ ಮಾಡಿದ ಯೋಗಿ

ಬಂಧನದ ಭವದೊಳಗೆ
ಮುಕ್ತಿಯ ಓಂಕಾರ.
ಆಡಂಬರದ ಜಗದೊಳಗೆ
ಸರಳತೆಯ ಜೇಂಕಾರ. 

ಹೇಳುತಿರೆ ಮೃದು ಸ್ವರದಿ 
ಅನುಭವ'ದ ಅನುಭಾವ. 
ಹೊಳೆಯುವುದು ಮನದಿ 
ಅನಂತತೆಯ ಅನುಭವ.

ನುಡಿ-ನುಡಿಗೂ  ಹೂವೆಂದ
ಹೂವಂತ ಮನದವರು.
ನಡೆ-ನುಡಿ ಸಮವೆಂದ
ನಡೆದಾಡುವ ದೇವರು.

ಅಂಬರೀಷ ಎಸ್. ಪೂಜಾರಿ.