Thursday, June 25, 2020
Tuesday, June 23, 2020
Monday, June 22, 2020
ಜಿಲ್ಲೆಯಲ್ಲಿ ಸೋಮವಾರ ಮತ್ತೆ 15 ಕೋವಿಡ್-19 ಪಾಸಿಟಿವ್ : ತ್ರಿಶತಕ ದಾಟಿದ ಕೋರೋನಾ
ಈ ದಿವಸ ವಾರ್ತೆ
ವಿಜಯಪುರ : ಜಿಲ್ಲೆಯಲ್ಲಿ ಈವರೆಗೆ ಒಟ್ಟು 301 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ 74 ರೋಗಿಗಳು ಕೋವಿಡ್-19 ಪಾಸಿಟಿವ್ ಸಕ್ರಿಯ ರೋಗಿಗಳಾಗಿದ್ದಾರೆ. ಇಂದು ಮತ್ತೆ 15 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.
ಜಿಲ್ಲೆಯ ಸೋಂಕಿತರಲ್ಲಿ ರೋಗಿ ಸಂಖ್ಯೆ 9170 (60 ವರ್ಷದ ಹೆಣ್ಣು) ರೋಗಿ ಸಂಖ್ಯೆ 9171 (20 ವರ್ಷದ ಹೆಣ್ಣು) ರೋಗಿ ಸಂಖ್ಯೆ 9172 (32 ವರ್ಷದ ಹೆಣ್ಣು) ರೋಗಿ ಸಂಖ್ಯೆ 9173 (28 ವರ್ಷದ ಹೆಣ್ಣು) ರೋಗಿ ಸಂಖ್ಯೆ 9175 (20 ವರ್ಷದ ಹೆಣ್ಣು) ರೋಗಿ ಸಂಖ್ಯೆ 9176 (70 ವರ್ಷದ ಗಂಡು) ಇವರಿಗೆ ರೋಗಿ ಸಂಖ್ಯೆ 6246 ದಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ.
ರೋಗಿ ಸಂಖ್ಯೆ 9168 (20 ವರ್ಷದ ಹೆಣ್ಣು) ರೋಗಿ ಸಂಖ್ಯೆ 9169 (20 ವರ್ಷದ ಹೆಣ್ಣು) ರೋಗಿ ಸಂಖ್ಯೆ 9177 (30 ವರ್ಷದ ಗಂಡು) ರೋಗಿ ಸಂಖ್ಯೆ 9178 (20 ವರ್ಷದ ಗಂಡು) ರೋಗಿ ಸಂಖ್ಯೆ 9179 (52 ವರ್ಷದ ಹೆಣ್ಣು) ರೋಗಿ ಸಂಖ್ಯೆ 9182 (50 ವರ್ಷದ ಗಂಡು) ಇವರಿಗೆ ಐಎಲ್ಐ ಸೋಂಕು ತಗುಲಿರುವುದು ದೃಢಪಟ್ಟಿದೆ.
ರೋಗಿ ಸಂಖ್ಯೆ 9174 (68 ವರ್ಷದ ಹೆಣ್ಣು) ರೋಗಿ ಸಂಖ್ಯೆ 9181 (56 ವರ್ಷದ ಗಂಡು) ಇವರಿಗೆ ತೀವ್ರ ಉಸಿರಾಟದ ತೊಂದರೆ - ಸಾರಿ ಹಾಗೂ ರೋಗಿ ಸಂಖ್ಯೆ 9180 (33 ವರ್ಷದ ಗಂಡು) ಇವರಿಗೆ ರೋಗಿ ಸಂಖ್ಯೆ 6588 ದಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ 34132 ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಇಲ್ಲಿಯವರೆಗೆ ಒಟ್ಟು 301 ಕೋವಿಡ್ -19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದಾರೆ. 12808 ಜನರು 28 ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. 21097 ಜನರು (1 ರಿಂದ 28 ದಿನಗಳ) ರಿಪೋರ್ಟಿಂಗ್ ಅವಧಿಯಲ್ಲಿದ್ದು, ಈವರೆಗೆ ಒಟ್ಟು 7 ಜನ ಕೋವಿಡ್-19 ರೋಗಿಗಳು ಮೃತಪಟ್ಟಿದ್ದಾರೆ. 220 ಜನರು ಕೋವಿಡ್-19 ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 76 ಜನರು ಆಸ್ಪತ್ರೆಯಲ್ಲಿರುವ ಕೋವಿಡ್-19 ಸಕ್ರಿಯ ರೋಗಿಗಳಾಗಿದ್ದಾರೆ. ಈವರೆಗೆ 26989 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, 26612 ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ 76 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Sunday, June 21, 2020
ಸೂರ್ಯಗ್ರಹಣವಂತೆ!
ಭೂಮಿ -ಭಾನು ಸಹಜ ಪಥದಲ್ಲಿ
ಚಲಿಸುತ್ತಿರಲು ಸರಳ ಚಲನೆಯಲ್ಲಿ
ಚಂದ್ರ ಬರಲು ಮಧ್ಯದಲ್ಲಿ
ಸೂರ್ಯಗ್ರಹಣವಂತೆ! ಧರಣಿಯಲಿ
ಬೆಳಕಿಗೆ ನೆರಳು ನೆರಳಾಗುವ ನೋಟ,
ನೆರಳು- ಬೆಳಕಿನಾಟ.
ಬಾನಬೆರಗು 'ಅವನಿ'ಗೆ ಬೆರಗಿನ ನೋಟ,
ಶಶಿ -ಭಾಸ್ಕರರಾಟ.
ಹಗಲೊಳಗೆ ಕತ್ತಲಾಗುವ
ಗಗನದ ಅದ್ಭುತ.
ಮನದೊಳಗೆ ದಿಗಿಲಾಗುವ
ಕೌತುಕದ ದಿಗಂತ.
ಮುಗಿಲ ಮೇಲಣ ಚೆಲುವು,
ಕಣ್ತುಂಬುವ ಬದಲು.
ಹೇಳುವರು ಗೊಂದಲ ಹಲವು,
ವಿವೇಕತೆಯೇ ಅದಲು-ಬದಲು.
ನೀರು ಕುಡಿಯದ ನಿರಾಹಾರ,
ಉಪವಾಸವಂತೆ.
ಭವಿಷ್ಯವೇ ಗೊತ್ತಿರದವರ
ರಾಶಿಫಲವಂತೆ.
ಬೆಡಗಿನಲ್ಲಿ ಭಾನುತೋರುವ
ಬಾನಾಟ,
ಕತ್ತಲೆ -ಬೆಳಕಿನಾಟ.
ಮುಗಿಲ ಮೇಲೆ ತೋರುವ.
ಮಿಗಿಲಾಟ,
ಅಂಧತೆಯೇ ಮೇಲಾಟ.
ಅಂಬರೀಷ ಎಸ್. ಪೂಜಾರಿ.
ಭೂಮಿ -ಭಾನು ಸಹಜ ಪಥದಲ್ಲಿ
ಚಲಿಸುತ್ತಿರಲು ಸರಳ ಚಲನೆಯಲ್ಲಿ
ಚಂದ್ರ ಬರಲು ಮಧ್ಯದಲ್ಲಿ
ಸೂರ್ಯಗ್ರಹಣವಂತೆ! ಧರಣಿಯಲಿ
ಬೆಳಕಿಗೆ ನೆರಳು ನೆರಳಾಗುವ ನೋಟ,
ನೆರಳು- ಬೆಳಕಿನಾಟ.
ಬಾನಬೆರಗು 'ಅವನಿ'ಗೆ ಬೆರಗಿನ ನೋಟ,
ಶಶಿ -ಭಾಸ್ಕರರಾಟ.
ಹಗಲೊಳಗೆ ಕತ್ತಲಾಗುವ
ಗಗನದ ಅದ್ಭುತ.
ಮನದೊಳಗೆ ದಿಗಿಲಾಗುವ
ಕೌತುಕದ ದಿಗಂತ.
ಮುಗಿಲ ಮೇಲಣ ಚೆಲುವು,
ಕಣ್ತುಂಬುವ ಬದಲು.
ಹೇಳುವರು ಗೊಂದಲ ಹಲವು,
ವಿವೇಕತೆಯೇ ಅದಲು-ಬದಲು.
ನೀರು ಕುಡಿಯದ ನಿರಾಹಾರ,
ಉಪವಾಸವಂತೆ.
ಭವಿಷ್ಯವೇ ಗೊತ್ತಿರದವರ
ರಾಶಿಫಲವಂತೆ.
ಬೆಡಗಿನಲ್ಲಿ ಭಾನುತೋರುವ
ಬಾನಾಟ,
ಕತ್ತಲೆ -ಬೆಳಕಿನಾಟ.
ಮುಗಿಲ ಮೇಲೆ ತೋರುವ.
ಮಿಗಿಲಾಟ,
ಅಂಧತೆಯೇ ಮೇಲಾಟ.
ಅಂಬರೀಷ ಎಸ್. ಪೂಜಾರಿ.
Subscribe to:
Posts (Atom)
