Wednesday, February 5, 2025

ಬೈಕ್, ಕ್ಯಾಂಟರ್ ವಾಹನ ಡಿಕ್ಕಿ: ಬೈಕ್ ಸವಾರ ಸಾವು



ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ: ಬೈಕ್ ಹಾಗೂ ಕ್ಯಾಂಟರ್ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಸಿಂದಗಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ನಡೆದಿದೆ.

ಮೃತಪಟ್ಟವನನ್ನು ಆಲಮೇಲ ತಾಲೂಕಿನ ಅಲ್ಲೋಳ್ಳಿ ಗ್ರಾಮದ ಶರಣಗೌಡ ಬಿರಾದಾರ (40) ಎಂದು ಗುರುತಿಸಲಾಗಿದೆ.

ಶರಣಗೌಡ ಬಿರಾದಾರ ಈತ ಕಕ್ಕಳಮೇಲಿ ಗ್ರಾಮ ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತಿದ್ದರು. ಕಚೇರಿಯಿಂದ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಸ್ಥಳಕ್ಕೆ ಪಿಎಸ್ಐ ಆರಿಫ್ ಮುಷಾಪುರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Tuesday, January 28, 2025

ಇಂದಿನಿಂದ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವ

 


ಚಡಚಣ: ಶ್ರೀ ಸಂಗಮೇಶ್ವರ ಸಂಸ್ಥೆ, ಕೃಷಿ ಉತ್ಪನ್ನ ಮಾರುಕಟ್ಟೆ  ಹಾಗೂ ಪಟ್ಟಣ ಪಂಚಾಯತ ಚಡಚಣ ಇವರ ಸಹಯೋಗದೊಂದಿಗೆ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಸಂಗಮೇಶ್ವರ ದೇವರ ಜಾತ್ರೆಯು ಅದ್ದೂರಿಯಾಗಿ ಜರುಗುತ್ತಿದ್ದು , ದಿನಾಂಕ: 29.01.2025 ರಂದು ಬುಧವಾರ ದಿವಸ ಮುಂಜಾನೆ  ಶ್ರೀ ಸಂಗಮೇಶ್ವರ ದೇವರಿಗೆ ಮಹಾರುದ್ರಾಭಿಷೇಕ ಮತ್ತು ನಂದೀಶನಿಗೆ  ಎಣ್ಣೆಮಜಲು  ಪೂಜೆ ನಡೆಯುವುದು, ಮುಂಜಾನೆ 7-೦೦ ಗಂಟೆಗೆ ಶ್ರೀ ವೀರಭದ್ರೇಶ್ವರ ದೇವರ ಗುಡಿಯಿಂದ ಪಲ್ಲಕ್ಕಿ, ನಂದಿಧ್ವಜ, ವಾದ್ಯ-ವೈಭವಗಳೊಂದಿಗೆ ಶ್ರೀ ಸಂಗಮೇಶ್ವರ ದೇವಸ್ಥಾನಕ್ಕೆ ತಲುಪುವುದು. ಮುಂಜಾನೆ 9-೦೦ ಗಂಟೆಗೆ "ದೇವರ ನುಡಿ" ಜರುಗುವುದು ಮುಂಜಾನೆ 10=00 ಗಂಟೆಗೆ "ಶಿವೋಹಂ" ಡಾನ್ಸ್ ಅಕಾಡಮಿ ವಿಜಯಪುರ ಇವರಿಂದ "ಭರತನಾಟ್ಯ" ಕಾರ್ಯಕ್ರಮ ಜರುಗುವುದು. ಅಂದು ರಾತ್ರಿ 9-೦೦ ಗಂಟೆಗೆ ದೇವಸ್ಥಾನ ಆವರಣದಲ್ಲಿ ರಂಗ ಸಂಗಮ ಶ್ರೀಮತಿ ರೇಶ್ಮಾ ಅಳವಂಡಿ ಇವರಿಂದ "ಮಲಮಗಳು" ಎಂಬ ಸಾಮಾಜಿಕ ನಾಟಕ ಜರುಗುವುದು.

ದಿನಾಂಕ: 30.01.2025 ಗುರುವಾರ ಸಾಯಂಕಾಲ 3.00 ಗಂಟೆಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ-ನಂದೀಧ್ವಜವು ಬಾಜಾ ಬಜಂತ್ರಿಯೊಂದಿಗೆ ಹೊರಟು ಶ್ರೀ ಸಂಗಮೇಶ್ವರ ದೇವಸ್ಥಾನಕ್ಕೆ ಬರುವುದು. ರಾತ್ರಿ 9.00 ಗಂಟೆಗೆ ದೇವಸ್ಥಾನದ ಹತ್ತಿರವಿರುವ ಎತ್ತರದ ಸ್ಥಳದಲ್ಲಿ ಶ್ರೀ ದತ್ತ ಶುಗರ್ಸ್ ಹಾವಿನಾಳ ಅವರಿಂದ “ಚಿತ್ರ-ವಿಚಿತ್ರವಾದ ಮದ್ದು" ಸುಡಲಾಗುವುದು. ಅಂದು ರಾತ್ರಿ 10.00 ಗಂಟೆಗೆ ಶ್ರೀಮತಿ ಉಷಾರಾಣಿ ಬಾರಿಗಿಡದ ಇವರಿಂದ ನಲವಡಿ "ಹೇಮರಡ್ಡಿ ಮಲ್ಲಮ್ಮ" ಎಂಬ ಪೌರಾಣಿಕ ಭಕ್ತಿಮಯ ನಾಟಕ ಜರುಗುವುದು.

ದಿನಾಂಕ : 31.01.2025   ಶುಕ್ರವಾರ ಮಧ್ಯಾಹ್ನ: 2.30 ಗಂಟೆಗೆ "ಪ್ರಸಿದ್ಧ ಮಲ್ಲರ ಕುಸ್ತಿಗಳು" ಜರಗುವವು. ವಿಜೇತ ಪೈಲವಾನರಿಗೆ ಬಹುಮಾನ ಕೊಡಲಾಗುವುದು.ಅಂದು ರಾತ್ರಿ 10.00 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಹಾಸ್ಯ ಚತುರ ಸಿದ್ದು ನಾಲ್ವತವಾಡ ಇವರಿಂದ"ನೀನೂ ಸಾಹುಕಾರನಾಗು" ಎಂಬ ಹಾಸ್ಯಮಯ ನಾಟಕ ಜರುಗುವುದು. ದಿನಾಂಕ : 01.02.2025  ಶನಿವಾರ  ಮಧ್ಯಾಹ್ನ: 3-೦೦ ಗಂಟೆಗೆ  ಪಶು ವೈದ್ಯಾಧಿಕಾರಿಗಳು ಆಯ್ಕೆ ಮಾಡಿದ ಯೋಗ್ಯ ರಾಸುಗಳಿಗೆ ಜಾನುವಾರ ಪ್ರಶಸ್ತಿ ಸಮಾರಂಭ ಜರಗುವುದು. ದಿನಾಂಕ : 02.02.2025  ರವಿವಾರ ರಾತಿ 9-೦೦ ಗಂಟೆಗೆ ಸರಿಗಮ ಖ್ಯಾತಿಯ ಕುಮಾರಿ ದಿವ್ಯಾ ಹೆಗಡೆ, ಲಫಂಗ ರಾಜಾ, ಮ್ಯೂಜಿಕ ಮೈಲಾರಿ ಇವರುಗಳಿಂದ ಶ್ರೀ ಕಾಂತುಗೌಡ ಪಾಟೀಲ ಬಿಜೆಪಿ ಮಂಡಲ ಅಧ್ಯಕ್ಷರು ಇವರ ಪ್ರಾಯೋಜಿಕ ವತಿಯಿಂದ  ರಸಮಂಜರಿ ಕಾರ್ಯಕ್ರಮ ಜರುಗುವದು. ದಿನಾಂಕ : 04.02.2025  ಮಂಗಳವಾರ ಶ್ರೀ ಸಂಗಮೇಶ್ವರ ದೇವಸ್ಥಾನದಿಂದ 7  ದಿವಸಕ್ಕೆ ಪಲ್ಲಕ್ಕಿ-ನಂದಿಧ್ವಜ ನಾನಾ ತರಹದ ವಾದ್ಯಗಳೊಂದಿಗೆ ಶ್ರೀ ವೀರಭದ್ರೇಶ್ವರ ದೇವರ ಗುಡಿಗೆ ಹೋಗುವದು. ದಿನಾಂಕ: 29.01.2025  ರಂದು ಶ್ರೀ ರವಿ ಪಾವಲೆ ಇವರಿಂದ ಮತ್ತು  ಶ್ರೀ ವಿವೇಕಾನಂದ ಹಿಟ್ನಳ್ಳಿ, ಶ್ರೀ ಚೌಡೇಶ್ವರಿ ಡ್ರೆಸಿಸ್ ಚಡವಣ ಇವರಿಂದ ದಿನಾಂಕ 30.01.2025 ರಿಂದ 02.02.2025 ರ ವರೆಗೆ  "ಅನ್ನ ಪ್ರಸಾದ" ಸೇವೆ ಇರುತ್ತದೆ. 

ಆದ ಕಾರಣ ಹೆಚ್ಚು ಹೆಚ್ಚು ಸಂಖ್ಯೇಯಲ್ಲಿ ಭಕ್ತಾದಿಗಳು ಆಗಮಿಸಿ ಈ ಜಾತ್ರೆಗೆ ಹೆಚ್ಚು ಮೆರಗು ತರ ಬೇಕೆಂದು ಶ್ರೀ ಸಂಗಮೇಶ್ವರ ಸಂಸ್ಥೆಯ ಅಧ್ಯಕ್ಯರಾದ ಜಿ,ಡಿ.ಪಾವಲೆ ಅವರು ತಿಳಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Saturday, January 25, 2025

ಯಜೋಟಿಕಾ ಕಾಲೋನಿ ಹಾಗೂ ಸಾಯಿ ರೆಸಿಡೆನ್ಸಿಯ ಅದ್ಧೂರಿ ಗಣರಾಜ್ಯೋತ್ಸವ

 


ವಿಜಯಪುರ: 

ಯಜೋಟಿಕಾ ಕಾಲೋನಿ ಹಾಗೂ ಸಾಯಿ ರೆಸಿಡೆನ್ಸಿಯ ವಿನಾಯಕ ವೃತದಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು.

ಬಡಾವಣೆಯ ಎಲ್ಲ ನಿವಾಸಿಗಳು ತಾಯಂದಿರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಿವೃತ್ತ ಶಿಕ್ಷಕರಾದ  ಮಮದಾಪುರ್ ಗುರುಗಳು ಧ್ವಜಾರೋಹಣ ನೆರವೇರಿಸಿದರು.

 ಈ ಕಾರ್ಯಕ್ರಮದಲ್ಲಿ ಎಂ ಆರ್ ಬಿರಾದಾರ್ , ಎಸ್ .ಡಿ. ಕೃಷ್ಣಮೂರ್ತಿ ಗಜಾನನೋತ್ಸವ ಸೇವಾ ಸಮಿತಿ ಅಧ್ಯಕ್ಷರಾದ ಶ್ರೀ ವಿಜಯ ವಿಠ್ಠಲ್ ಪೂಜಾರಿ , ಸಮಾಜಸೇವಕರಾದ ಸಿದ್ದು ಇಜೇರಿ, 

ಕುಂಬಾರ್ ಗುರುಗಳು, ಪಂಡಿತ ರಾವ್ ಪಾಟೀಲ್ ಗುರುಗಳು, ಗೌರಾ ಬಾಯಿ ಕುಬಕಡ್ಡಿ, ಶೋಭಾ ಕಸನಕ್ಕೆ,  ಶಾಂತ ಬಿರಾದಾರ್, ದೇವಕಿ ನಾಯಕ್ ಸೇರಿದಂತೆ ಅನೇಕ ಹಿರಿಯರು ಇದರಲ್ಲಿ ಭಾಗವಹಿಸಿದ್ದರು.



ಭಾರತೀಯರ ಪಾಲಿಗೆ ಆತ್ಮಾವಲೋಕನ ಹಾಗೂ ಸಂಕಲ್ಪದ ಸುದಿನ:ಶಿವಾಜಿ ಗಾಯಕವಾಡ





ವಿಜಯಪುರ: ಇಂದಿನ ಗಣರಾಜ್ಯೋತ್ಸವ ಕೇವಲ ಸಂಭ್ರಮದ ದಿನ ಮಾತ್ರವಲ್ಲ. ಭಾರತೀಯರ ಪಾಲಿಗೆ ಆತ್ಮಾವಲೋಕನ ಹಾಗೂ ಸಂಕಲ್ಪದ ಸುದಿನ ಎಂದು ವಿಜಯಪುರದ ಛತ್ರಪತಿ ಶಿವಾಜಿ ಮಹಾರಾಜ ಶಿಕ್ಷಣ ಸಂಸ್ಥೆ ಹಾಗೂ ವೀರ ಶಿವಾಜಿ ಡಿಫೆನ್ಸ್ ಅಕಾಡೆಮಿ ಅಧ್ಯಕ್ಷ ಶಿವಾಜಿ ಗಾಯಕವಾಡ ಹೇಳಿದರು. ಅವರು ಇಂದು ನಗರದ ರವೀಂದ್ರನಾಥ ಠಾಗೋರ್ ಶಾಲಾ ಕಾಲೇಜಿನ ಆವರಣದಲ್ಲಿ 76 ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.  ಭಾರತೀಯ ಪಾಲಿಗೆ ಜನವರಿ 26 ಹೆಮ್ಮೆಯ ದಿನವಾಗಿದ್ದು, ಸ್ವಾತಂತ್ರ್ಯ ಸಿಕ್ಕ ದಿನವನ್ನು ಎಷ್ಟು ಸಂಭ್ರಮದಿಂದ ಆಚರಿಸುತ್ತೇವೋ ಅಷ್ಟೇ ಸಂಭ್ರಮದಿಂದ ಈ ದಿನವನ್ನು ಆಚರಿಸುತ್ತೇವೆ. ದೇಶದ ಸಂವಿಧಾನ ಅಸ್ತಿತ್ವಕ್ಕೆ ಬಂದ ದಿನವಾಗಿದ್ದು, ಜನವರಿ 26 ರಂದು ಈ ಐತಿಹಾಸಿಕ ಕ್ಷಣವನ್ನು ಆಚರಿಸುವ ಮೂಲಕ ನೆನಪಿಸಿಕೊಳ್ಳುತ್ತೇವೆ. ಈ ವರ್ಷ 75ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿದ್ದು, ಈ ದಿನದ ಮಹತ್ವ ಹಾಗೂ ಇತಿಹಾಸ ಎಲ್ಲರಿಗೂ ಗೊತ್ತಿರಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳು ಇತ್ತಿಚೆಗೆ ಮೊಬೈಲ್ ಎಂಬ ಮಾಯಾಲೋಕದ ಜಾಲದಲ್ಲಿ ಬಿದ್ದು ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಿರಿ. ಮೊಬೈಲ್ ಮಾಯೆ ಎಂಬ ಜಾಲದಿಂದ ಹೊರ ಬಂದು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಿ. ನಿಮ್ಮ ಕುಟುಂಬ, ದೇಶ ರಾಜ್ಯದ ಏಳಿಗೆಯಲ್ಲಿ ನಿಮ್ಮ ಪಾತ್ರ ಮಹತ್ವದ್ದು, ಆದ್ದರಿಂದ ಶಿಕ್ಷಣದ ಕಡೆ ಹೆಚ್ಚಿನ ಗಮನ ಹರಿಸಿ ಎಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಸಂಸ್ಥೆಯ ಕಾರ್ಯದರ್ಶಿ ರೀತಾ ಗಾಯಕವಾಡ, ಪ್ರಿನ್ಸಿಪಲ್ ಶ್ರೀನಿವಾಸ ಪುಕಾಳೆ, ಹೆಡ್ ಮಾಸ್ಟರ್ ಶಿವರಾಮ ಜಮ್ಮನಕಟ್ಟಿ, ಪ್ರಲ್ಹಾದ ಹೂಗಾರ ವೇದಿಕೆ ಮೇಲಿದ್ದರು‌. ಧ್ವಜಾರೋಹಣ ಬಳಿಕ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಇದೇ ಪ್ರಥಮ ಬಾರಿಗೆ ರವೀಂದ್ರನಾಥ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮ ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಬಳಿಕ ದೇಶಭಕ್ತಿಯ ಜಾಗೃತಿ ಮನರಂಜನಾ ಕಾರ್ಯಕ್ರಮಗಳು ಜರುಗಿದವು. 


ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.