Monday, August 21, 2023

ಹೆಣ್ಣು ಮಕ್ಕಳ ಹಬ್ಬ ಪಂಚಮಿ ಹಬ್ಬ

ಈ ದಿವಸ ವಿಶೇಷ ವರದಿ

ಹಬ್ಬವೆಂದರೆ ಎಲ್ಲರಿಗೂ ಇಷ್ಟ ಅದರ ಸಡಗರ ಮನೆಯಲ್ಲಿ ತುಂಬಾ ಜೋರಾಗಿರುತ್ತದೆ ಇದು ಪಂಚಮಿ ಎಂದರೆ ಹೆಣ್ಣು ಮಕ್ಕಳಾಚರಿಸುವ ಒಂದು ಪ್ರಮುಖವಾದ ಹಬ್ಬ ಶ್ರಾವಣ ಮಾಸದ ಮೊದಲ ಹಬ್ಬ ಇದಾಗಿದೆ. ಒಂದು ವಾರಕ್ಕೆ ಮೊದಲೇ ಮನೆಯಲ್ಲಿ  ಸಿಹಿ ತಯಾರಿಸಲು ಪ್ರಾರಂಭ ಮಾಡಿರುತ್ತಾರೆ ಎಲ್ಲಾ ತರಹದ ಉಂಡೆಗಳು ನಾಗರ ಪಂಚಮಿ ಪೂಜೆ ಸಲುವಾಗಿ ಮಾಡುತ್ತಾರೆ.

ಮುಂಗಾರಿನ ಮಳೆಯ ಆದನಂತರ ಬರುವ ಮೊದಲ ಹಬ್ಬ ಇದಾಗಿದೆ ಸುಂದರವಾಗಿ ಅಲಂಕಾರವನ್ನು ಮಾಡಿಕೊಂಡು ಮನೆಯ ತುಂಬಾ ಓಡಾಡುವುದು ಹೆಣ್ಣು ಮಕ್ಕಳು ಅವರಿಂದಲೇ ಒಂದು ಕಳೆ ಬರುತ್ತದೆ ಈ ಹಬ್ಬಕ್ಕೆ ನಾಗದೇವನಿಗೆ ಹಾಲೆರೆಯುವುದು  ನೈವಿದ್ಯ ಸಹ ತೆಗೆದುಕೊಂಡು ಹೋಗುತ್ತಾರೆ ಹಳ್ಳಿಯ ಕಡೆ ಗೆಳತಿಯರು ಎಲ್ಲಾ ಸೇರಿಕೊಂಡು ಯಾರ ಮನೆಯ ಮುಂದೆ ಜೋಕಾಲಿ ಇದ್ದ ಕಡೆ ಅಲ್ಲಿ ಹೋಗಿ ಆಟವನ್ನು ಆಡುತ್ತಾ ಯಾವುದೇ ಭೇದ ಭಾವ ಇಲ್ಲದೆ ಎರಡು ದಿನಗಳ ಕಾಲ ಆಚರಿಸುತ್ತಾರೆ.

ಹಿಟ್ಟು ಅಥವಾ ಉಂಡಿ ತಿನ್ನುವ ದಿನವೆಂದು ಹಳ್ಳಿ ಕಡೆ ಆಚರಣೆಯನ್ನು ಮಾಡುತ್ತಾರೆ ಎಲ್ಲರೂ ತಮ್ಮ ತಮ್ಮ ಮನೆ ಪಕ್ಕದವರ ಮನೆಗೆ ಹೋಗಿ ತುಂಟಾಟ ಮಾಡುತ್ತಾ ಉಂಡಿ‌ತಿಂದು ಹೋಗುತ್ತಾರೆ ನಾಗಗಳನ್ನು ಪೂಜಿಸುವ ಹಬ್ಬ ಇದಾಗಿದೆ ಏಕೆಂದರೆ ಅವುಗಳ ಮೇಲೆ ಅಪಾರವಾದ ನಂಬಿಕೆ ಭಕ್ತಿಯನ್ನು ಇಟ್ಟುಕೊಂಡ ಜನರು ಯಾವುದೇ ರೀತಿಯಲ್ಲಿ ತೊಂದರೆ ಸಮಸ್ಯೆ ಕುಟುಂಬದಲ್ಲಿ ಬರಬಾರದೆಂದು ಬೇಡಿಕೊಳ್ಳುತ್ತಾರೆ  ಪೂಜಿಸುತ್ತಾರೆ ಹಾಲು ಎರೆಯುವ ಮೂಲಕ ಮೂಲಕ ಭಕ್ತಿಯಿಂದ ಪೂಜಿಸುತ್ತಾರೆ ಇದರಲ್ಲೇ ಪ್ರಮುಖ ಪಾತ್ರ ಮಹಿಳೆಯರು   ಮನೆಯ ಒಳತಿನ ಸಲವಾಗಿ ಉಪವಾಸವನ್ನು ಸಹಿತ ಮಾಡುತ್ತಾರೆ.

ತಮ್ಮ ಎಲ್ಲಾ ಕಷ್ಟಗಳು ನಾಗದೇವರು ದೂರವಾಗುತ್ತದೆ  ಎಂದು ಖುಷಿಯಿಂದ ಗೆಳತಿಯರ ಜೊತೆ ಹರಟೆಯನ್ನು ಹೊಡೆಯುತ್ತಾರೆ ಮತ್ತು ಗಂಡು ಮಕ್ಕಳು ಸಹಿತ  ಈ ಹಬ್ಬವನ್ನು ಆಚರಿಸುತ್ತಾರೆ ಏಕೆಂದರೆ ಅವರು ನಿಂಬೆಕಾಯಿ ಎಸೆತ ದಷ್ಟು ದೂರ ಹೋಗಬೇಕು  ಪಂದ್ಯ ಎಷ್ಟು ಸಮಯದ ವರೆಗೆ ಜೋಕಾಲಿ‌ ಆಡುತ್ತಾರೆ ಗೆದ್ದು ತುಂಬಾ ಸಂಭ್ರಮಾಚರಣೆಯಿಂದ ಯಾವುದೇ ಬೇಧ ಭಾವವಿಲ್ಲದೆ ಜೋಕಾಲಿಯನ್ನು ಆಡುತ್ತಾರೆ. ಉಂಡೆಗಳನ್ನು ತಿನ್ನುತ್ತಾ ಮಜಾ ಮಾಡುವುದೇ ಈ ಹಬ್ಬ ಪ್ರಮುಖವಾಗಿ ಅನ್ನ ತಂಗಿಯ ಬಂಧ ಬೇಸೆಯುವ  ಹಬ್ಬದ ನಂತರ ಕೊಬ್ಬರಿ  ಕುಬಸ  ತಂಗಿಯ ಮನೆಗೆ ಕೊಟ್ಟು ಕಳುಹಿಸುತ್ತಾರೆ ತಮ್ಮ ಬಂದು ಮಿತ್ರರಿಗೆ ಎಲ್ಲರಿಗೂ ಕೊಡುತ್ತಾರೆ   ಎಲ್ಲಾರೂ  ಒಂದೇ ಎನ್ನುವ ಮನೋಭಾವದಿಂದ ಆಚರಿಸುವ ಪಂಚಮಿ ಹಬ್ಬ ಎಂದೆನಿಸಿಕೊಳ್ಳುತ್ತದೆ

ಚೇತನಾ‌ ಶ್ರೀ ಬೆಳ್ಳೆನವರ, ಕಲಬೀಳಗಿ

Thursday, August 17, 2023

18-08-2023 EE DIVASA KANNADA DAILY NEWS PAPER

ಮುರುಗೇಶ ನಿರಾಣಿ ದಲಿತ ವಿರೋಧಿ ಕೈಗಾರಿಕಾ ಮಾಜಿ ಸಚಿವ: ಶ್ರೀನಿವಾಸನ ಆರೋಪ

 

ವಿಜಯಪುರದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಎ. ಶ್ರೀನಿವಾಸ ಮಾತನಾಡಿದರು.

ಈ ದಿವಸ ವಾರ್ತೆ
ವಿಜಯಪುರ: ಈ ಹಿಂದೆ ಕೈಗಾರಿಕಾ ಸಚಿವರಾಗಿದ್ದ ಮುರುಗೇಶ ನಿರಾಣಿ ಕೆಐಎಡಿಬಿಯ ನಿವೇಶನ ಹಂಚಿಕೆಯಲ್ಲಿ ದಲಿತರಿಗೆ ಅನ್ಯಾಯ ಮಾಡಿದ್ದು, ದಲಿತ ವಿರೋಧಿ ಸಚಿವರಾಗಿದ್ದರು ಎಂದು ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಎ. ಶ್ರೀನಿವಾಸನ್ ಆರೋಪಿಸಿದರು.

ನಗರದಲ್ಲಿ ಗುರುವಾರ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುರುಗೇಶ ನಿರಾಣಿ ಕೈಗಾರಿಕಾ ಸಚಿವರಾಗಿದ್ದ ಸಂದರ್ಭ, ದಲಿತರಿಗೆ ಬಹಳಷ್ಟು ವಂಚಿಸಿದ್ದು, ಕೆಐಎಡಿಬಿಯ ನಿವೇಶನ ಹಂಚಿಕೆಯ ಕಮಿಟಿಯಲ್ಲಿ ದಲಿತರಿಗೆ ಇಟ್ಟಿದ್ದ ಜಾಗವನ್ನು ಬೇರೆಯವರಿಗೆ ಹಂಚಿಕೆ ಮಾಡಿರುವುದು ಸರಿಯಲ್ಲ. ಈ ಸಂಬಂಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿ ಇಟ್ಟಿದ್ದ 675 ಎಕರೆ ಜಮೀನನ್ನು ಬೇರೆಯವರಿಗೆ ನೀಡಿದ್ದಾರೆ. ಈ ಬಗ್ಗೆ ಮುರುಗೇಶ ನಿರಾಣಿಯವರ ಗಮನಕ್ಕೆ ತಂದರೂ ಅಂದು ಅವರು ಬಗೆಹರಿಸುವ ಪ್ರಯತ್ನವನ್ನು ಮಾಡಲಿಲ್ಲ. ಇದು ಅವರ ದಲಿತ ವಿರೋಧಿ ನೀತಿಯಾಗಿದೆ. ಈ ಅಕ್ರಮವನ್ನು ದಾಖಲೆ ಸಮೇತ ನಾನು ಸಾಬೀತು ಪಡಿಸುವೆ. ಅಲ್ಲದೆ ಈ ಬಗ್ಗೆ ನನ್ನ ಬಳಿ ಸಾಕ್ಷ್ಯಗಳು ಇವೆ ಎಂದರು.
ಕೆಐಎಡಿಬಿಯ ನಿವೇಶನ ಹಂಚಿಕೆಯಲ್ಲಿ ಈ ಹಿಂದೆ ಪರಿಶಿಷ್ಟ ಜಾತಿಯವರಿಗೆ ಅನ್ಯಾಯವಾಗಿರುವ ಕುರಿತು ಸದ್ಯ ಸರ್ಕಾರದ ಗಮನಕ್ಕೆ ತಂದಿರುವೆ. ಕೂಡಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದರು.
ಇನ್ನು ವಿಜಯಪುರ- ಬಾಗಲಕೋಟೆ ಅವಳಿ ಜಿಲ್ಲೆಯ ದಲಿತ ಉದ್ದಿಮೆದಾರರ ಸಂಘದ ಜಿಲ್ಲಾ ಘಟಕಗಳ ಅಡಿಯಲ್ಲಿ ನಗರದಲ್ಲಿ ದಲಿತ ಉದ್ದಿಮೆದಾರರ ಐತಿಹಾಸಿಕ ಸಮ್ಮೇಳನ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರಿಗೆ ಭೇಟಿಯಾಗಿ ಮನವಿ ಮಾಡಲಾಗಿದ್ದು, ಅವರು ಸಮಾವೇಶಕ್ಕೆ ಆಗಮಿಸಲು ಒಪ್ಪಿಕೊಂಡಿದ್ದಾರೆ. ಅತಿ ಶೀಘ್ರದಲ್ಲಿ ನಗರದಲ್ಲಿ ದಲಿತ ಉದ್ದಿಮೆದಾರರ ಐತಿಹಾಸಿಕ ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಅದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ದಿಮೆದಾರರು ಹೆಚ್ಚಿದ್ದು, ಈ ನಿಟ್ಟಿನಲ್ಲಿಯೂ ಬೆಳಗಾವಿ ಜಿಲ್ಲೆಯಲ್ಲಿಯೂ ಜವಳಿ ಕ್ಷೇತ್ರದ ದಲಿತ ಕೈಗಾರಿಕಾ ಉದ್ದಿಮಿಗಳ ಬೃಹತ್ ಸಮಾವೇಶ ಕೂಡಾ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಜವಳಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರಿಗೂ ಭೇಟಿ ಮಾಡಿ ಮನವಿ ಮಾಡಿದ್ದು, ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಅಧಿಕಾರಿ ರಾಜಶೇಖರ ಯಡಿಹಳ್ಳಿ ಇದ್ದರು.