Friday, October 7, 2022

ಮಹಿಳಾ ವಿವಿ: ಎಂಫಿಲ್/ಪಿಎಚ್‌ಡಿ ಪ್ರವೇಶಕ್ಕೆ ಅರ್ಜಿ ಆಹ್ವಾನ


ಈ ದಿವಸ ವಾರ್ತೆ

ವಿಜಯಪುರ: ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ 2022-13 ನೇ ಶೈಕ್ಷಣಿಕ ಸಾಲಿನ ಎಂಫಿಲ್ /ಪಿಎಚ್‌ಡಿ ಕೋರ್ಸುಗಳ ಪ್ರವೇಶಕ್ಕೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ಕನ್ನಡ, ಇಂಗ್ಲೀಷ್, ಹಿಂದಿ, ಅರ್ಥಶಾಸ್ತç, ಸಮಾಜಶಾಸ್ತ್ರ, ಮಹಿಳಾ ಅಧ್ಯಯನ, ಸಮಾಜಕಾರ್ಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಬಯೋ ಇನ್ಪಾರ್ಮೆಟಿಕ್ಸ್, ಔಷಧೀಯ ರಸಾಯನಶಾಸ್ತç, ಆಹಾರ ಸಂಸ್ಕರಣೆ ಮತ್ತು ಪೋಷಣೆ, ವಿದ್ಯುನ್ಮಾನ, ಭೌತಶಾಸ್ತç, ಗಣಕಯಂತ್ರ ವಿಜ್ಞಾನ, ಶಿಕ್ಷಣ, ವ್ಯವಹಾರ ಅಧ್ಯಯನ, ವಾಣಿಜ್ಯ ಅಧ್ಯಯನ ಮತ್ತು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಷಯಗಳಲ್ಲಿ ಎಂಫಿಲ್ ಮತ್ತು ಪಿಎಚ್‌ಡಿ ಅಧ್ಯಯನಕ್ಕೆ ಪ್ರವೇಶ ಪಡೆದುಕೊಳ್ಳಬಹುದಾಗಿದೆ.

ಹೆಚ್ಚಿನ ವಿವರಗಳನ್ನು ಮಹಿಳಾ ವಿಶ್ವವಿದ್ಯಾನಿಲಯದ ವೆಬ್‌ಸೈಟ್:  www.kswu.ac.in ನಿಂದ ಪಡೆದುಕೊಳ್ಳಬಹುದಾಗಿದೆ ಎಂದು ವಿವಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

08-10-2022 EE DIVASA KANNADA DAILY NEWS PAPER

Thursday, October 6, 2022

ಶಾಸಕ ಶಿವಾನಂದ ಪಾಟೀಲ ಪರಿವಾರದಿಂದ ಬನ್ನಿವಿನಿಮಯ

 


ಈ ದಿವಸ ವಾರ್ತೆ

ವಿಜಯಪುರ: ನಗರದ ರಿಂಗ ರಸ್ತೆ ಹತ್ತಿರ ಬಸವನ ಬಾಗೇವಾಡಿ ಶಾಸಕರ ಮನೆಯಲ್ಲಿ ಹಬ್ಬದ ಸಂಭ್ರಮ ಇಮ್ಮಡಿಗೊಂಡಿದೆ. ಸಾರ್ವಜನಿಕರ ಸಾಲು ಸಾಲು ತಂಡೋಪ, ತಂಡವಾಗಿ ಅದ್ದೂರಿ ದಸರಾ ಹಾಗೂ ವಿಜಯ ದಶಮಿ ಹಬ್ಬದ ನಿಮಿತ್ಯವಾಗಿ, ಬನ್ನಿ ವಿನಿಮಯ ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರು ಬನ್ನಿವಿನಿಯಮ ಮಾಡಿಕೊಂಡು ಅರ್ಥಪೂರ್ಣ ದಸರಾ ಆಚರಿಸಿದರು.



ಇದೇ ಸಂದರ್ಭದಲ್ಲಿ ಬಸವನ ಬಾಗೇವಾಡಿ ಶಾಸಕರಾದ ಶಿವಾನಂದ ಪಾಟೀಲ, ಶಾಸಕರ ಸಹೋದರರಾದ ಶಿವಶರಣ .ಎಸ್. ಪಾಟೀಲ ಹಾಗೂ ಡಿಸಿಸಿ ಬ್ಯಾಂಕ ನಿರ್ದೇಶಕಿಯಾದ ಸಂಯುಕ್ತ ಪಾಟೀಲ ಮತ್ತು ಅವರ ಪತಿ ಹಾಗೂ ಸಕಲ ಪಾಟೀಲ ಕುಟುಂಬದ ವತಿಯಿಂದ ಸರ್ವರಿಗೂ ಹಬ್ಬದ ಶುಭಕೋರಿ ಬನ್ನಿ ನೀಡಿ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.