ದೇಶದ ಗಡಿ ಕಾಯಲು ಹೋದರೆ ಸೈನಿಕ
ಅನ್ನ ನೀಡುವ ರೈತನೇ ಈ ದೇಶದ ಪಾಲಕ
ಕಣ್ಣೀರಿಗಿಂತಲೂ ಕಠೋರ ಈತನ ಕಾಯಕ
ದೇಶದ ಉದ್ಧಾರಕ ನಿಂತಿಹ ನೀ ಸಾಧಕ...
ಹಸಿದು ಬಳಿದವರಿಗೆ ಅನ್ನ ದಾನ ಮಾಡುವನು
ಆದರೂ, ಸದಾ ತಾ.. ಕಷ್ಟದಲ್ಲಿ ಕೈ ತೊಳೆವನು
ಬರ, ಪ್ರವಾಹ, ಸಾಲಗಳ ಹೇಗೆ ತಡೆವನು
ಇದರಿಂದ ; ರೈತನ ಆತ್ಮಹತ್ಯೆಗೆ ಕೊನೆಯಿಲ್ಲ ಇನ್ನು...
ಹೆಣ್ಣು ಕೊಡಲು ಇರಬೇಕು ಜಮೀನು
ಆದರೆ, ರೈತನನಾಗಿರಬಾರದು ಅವನು
ಕೃಷಿ ಮಾಡುವ ಹೊಸ ಜನತೆಯ ಗತಿಯೇನು
ಯಂತ್ರೋಪಕರಣಗಳ ಬಳಕೆ ಹೆಚ್ಚಾಗಿದೆ ಇನ್ನು...
ಬದಲಾಗಬೇಕು ರೈತರ ಸ್ಥಾನಮಾನ
ರೈತರಿಗೆ ಸಿಗುವಂತಾಗಲಿ ದೊಡ್ಡ ಸನ್ಮಾನ....
ಪಾರ್ವತಿ ನಾ ಮೆಟಗೊಡ್ಲಿ
ಬಿ ಎ ಅಂತಿಮ ವರ್ಷ
ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳಿಗೆ, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.
ಕಲ್ಲಪ್ಪ ಶಿವಶರಣ
ವ್ಯವಸ್ಥಾಪಕ ಸಂಪಾದಕ
ಈ ದಿವಸ ಕನ್ನಡ ದಿನ ಪತ್ರಿಕೆ
ಮೊ: 7204279187/
9900378892
ತಾವು ಟೈಪಿಸಿ ವ್ಯಾಟ್ಸಪ್ ಅಥವಾ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.
No comments:
Post a Comment