ಓಡುವ ಮೋಡಗಳೇ
ಓಡದಿರಿ ನಿಲ್ಲಿ ನಿಂತು
ಒಂದಿಷ್ಟು ಹನಿಸಿ ಹೋಗಿ
ಈ ಮಿಂಚಿನ ಹುಡುಗಿಗಾಗಿ
ನಿನ್ನ ಹನಿಗೆ
ಮುತ್ತಾಗುವ ಆಸೆ
ಕಾಮನಬಿಲ್ಲಿನ ಕಣ್ಣಿನ
ಈ ಹುಡುಗಿಗೆ
ಚೆದುರಿದ ಮೋಡಗಳೇ
ಮತ್ತೆ ಒಂದಾಗಿ
ನಿಮ್ಮ ಮಿಲನ
ಸ್ಪೂರ್ತಿ ಆಗಬಹುದು ಈ ಹುಡುಗಿಗೆ
ಹನಿಗೆ ಹಸಿಯಾಗುವಾಸೆ
ಹೃದಯಾಳದಲ್ಲಿ ಹವಳವಾಗುವಾಸೆ
ಚೆಂದುಟಿಯ ಚೆಂದುಳ್ಳಿ
ಈ ಹುಡುಗಿಗೆ
ಜಿಟಿ ಜಿಟಿ ಮಳೆ
ಪುಳಕಗೊಂಡಿದೆ ಇಳೆ
ಉನ್ಮತ್ತವಾಗಿದೆ ಮನಸು
ಈ ಮಳೆ ಹುಡುಗಿಗೆ
ಹನಿ ಹನಿಯಾಗಿ
ಹನಿಸೋ ಸೊಲ್ಲಿಗೆ
ಜೇನಿಟ್ಟಿದೆ ಎದೆಯ ಗೂಡಲ್ಲಿ
ತೊಟ್ಟಿಕ್ಕುವಾಸೆ ಈ ಹುಡುಗಿಗೆ
ಮುಂಗಾರಿನ ಆರ್ಭಟ
ಕೇಳಿಸಲೇ ಇಲ್ಲ
ಯಾಕೆಂದರೆ ನಿನ್ನ ಪ್ರೇಮದ
ಪಿಸುದನಿ ಅನುರಣಿಸಿದೆ
ಈ ಮಳೆ ಹುಡುಗಿಯ ಎದೆಯಲ್ಲಿ
ಡಾ. ಮೀನಾಕ್ಷಿ ಪಾಟೀಲ್
ಉಪನ್ಯಾಸಕರು
ಬಾಲಿಕೆಯ ಸರ್ಕಾರಿ ಪದವಿ ಪೂರ್ವ ಕಾಲೇಜು
ವಿಜಯಪುರ.
ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳಿಗೆ, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.
ಕಲ್ಲಪ್ಪ ಶಿವಶರಣ
ವ್ಯವಸ್ಥಾಪಕ ಸಂಪಾದಕ
ಈ ದಿವಸ ಕನ್ನಡ ದಿನ ಪತ್ರಿಕೆ
ಮೊ: 7204279187/
9900378892
ತಾವು ಟೈಪಿಸಿ ವ್ಯಾಟ್ಸಪ್ ಅಥವಾ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.
No comments:
Post a Comment