Tuesday, May 13, 2025

ವಿಜಯಪುರ ಕೃಷಿ ಮಹಾವಿದ್ಯಾಲಯಕ್ಕೆ ಸಮಗ್ರ ಕೃಷಿ ವಿಶ್ವವಿದ್ಯಾಲಯ ರಚನಾ ಸಮಿತಿ ಸದಸ್ಯರ ಭೇಟಿ

ವಿಜಯಪುರ: 2024-25ನೇ ಸಾಲಿನ ಆಯವ್ಯಯ ಘೋಷಣೆಯನ್ವಯ, ಕರ್ನಾಟಕ ರಾಜ್ಯದಲ್ಲಿ ಸಮಗ್ರ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಮತ್ತು ಅರಣ್ಯ ಕಾಲೇಜುಗಳ ಮರು ಸಂಘಟನೆಯೊAದಿಗೆ ಸಮಗ್ರ ಕೃಷಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ರಚಿಸಲಾದ ತಜ್ಞರ ಸಮಿತಿಯು ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಹಾಗೂ ಎರಡನೇಯ ಆಡಳಿತ ಸುಧಾರಣೆ ಆಯೋಗದ ಮಾಜಿ ಅಧ್ಯಕ್ಷ ಡಾ. ಟಿ. ಎಂ. ವಿಜಯಬಾಸ್ಕರ್ ನೇತೃತ್ವದಲ್ಲಿ ಇಂದು ವಿಜಯಪುರ ಕೃಷಿ ಮಹಾವಿದ್ಯಾಲಯಕ್ಕೆ ಆಗಮಿಸಿ ಇಲ್ಲಿರುವ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ರೈತ ಪ್ರತಿನಿಧಿಗಳೊಂದಿಗೆ ತನ್ನ ಅಭಿಪ್ರಾಯ ಸಂಗ್ರಹಿಸಿತು. 

ಈ ಸಂದರ್ಭ ಹಾಜರಿದ್ದ ಪ್ರತಿಯೊಬ್ಬರು ಸಮಗ್ರ ವಿವಿ ಸ್ಥಾಪಿಸುವ ಕುರಿತಂತೆ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸಮಿತಿಯಲ್ಲಿ ರಾಯಚೂರು ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ. ಪಿ. ಎಂ. ಸಾಲಿಮಠ, ವಿಶ್ರಾಂತ ಶಿಕ್ಷಣ ನಿರ್ದೇಶಕ ಡಾ. ಎಮ್. ಜಿ. ಪಾಟೀಲ, ಬೆಂಗಳೂರು ಕೃಷಿ ವಿವಿ ಪ್ರತಿನಿಧಿ ಡಾ. ಶಿವಪ್ರಕಾಶ, ಡಾ. ನಾಗರತ್ನ, ಬಾಗಲಕೋಟ ತೋಟಗಾರಿಕೆ ವಿವಿ ಪ್ರತಿನಿದಿ ಕುಲಪತಿ ಹಿಪ್ಪರಗಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡೀನ್ ಡಾ. ಅಶೋಕ ಎಸ್. ಸಜ್ಜನ ಸ್ವಾಗತಿಸಿದರು. ಸಹ ಸಂಶೋಧನಾ ನಿರ್ದೇಶಕ ಡಾ. ಎಸ್. ಬಿ. ಜಗ್ಗಿನವರ ವಂದಿಸಿದರು.

ಸಭೆಯಲ್ಲಿ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ, ಮುಖ್ಯ ವಿಜ್ಞಾನಿ ಡಾ. ಮಿಲಿಂದ ಪೋತದಾರ, ಹಿರಿಯ ವಿಜ್ಞಾನಿ ಡಾ. ಎಸ್. ಎಂ. ವಸ್ತçದ, ಡಾ. ಉಮರಫಾರೂಕ್ ಮೋಮಿನ್, ಪ್ರಾಧ್ಯಾಪಕರುಗಳಾದ ಡಾ. ಎಂ. ಬಿ. ಪಾಟೀಲ, ಡಾ. ಆರ್. ಬಿ. ಜೊಳ್ಳಿ, ಡಾ. ಎಮ್. ವಾಯ್. ತೆಗ್ಗಿ, ಡಾ. ಎಸ್. ಜಿ. ಅಸ್ಕಿ, ಡಾ. ಎ. ಪಿ. ಬಿರಾದಾರ. ಡಾ. ರಮೇಶ ಬೀರಗೆ, ಡಾ. ಕುಶಾಲ, ಡಾ. ಸುದೀಪಕುಮಾರ, ಡಾ. ಸಿದ್ರಾಮ ಪಾಟೀಲ, ಸಿದ್ದು ಇಂಗಳೇಶ್ವರ, ಕೃಷಿಕ ಸಮಾಜದ ಶಿವನಗೌಡ ಬಿರಾದಾರ, ಪ್ರಗತಿಪರ ರೈತರಾದ ಎಸ್. ಟಿ. ಪಾಟೀಲ, ಸಿದ್ದಪ್ಪ ಬೂಸಗೊಂಡ, ಸಂಗಮೇಶ ಸಗರ, ಶೆಟ್ಟೆಪ್ಪ ನಾವಿ, ವೀರಣ್ಣ ಸಜ್ಜನ, ಚಾಂದಬೀ ಆಲಮೇಲ, ವಿದ್ಯಾರ್ಥಿ ಮುಖಂಡರಾದ ರಿಯಾನ್‌ಮಲ್ಲಿಕ ಹಳ್ಳೂರ, ಸುಮಿತ ಕೋರೆ, ಅರವಿಂದ ಬೂಸಗೊಂಡ, ಸ್ಪೂರ್ತಿ ಹೆಚ್, ಸೇರಿದಂತೆ ಅನೇಕ ಆಮಂತ್ರಿತರು ಉಪಸ್ಥಿತರಿದ್ದರು. 

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


No comments:

Post a Comment