ವಿಜಯಪುರ : ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನವನ್ನು ಸೋಲಿಸುವುದು ಭಾರತಕ್ಕೆ ದೊಡ್ಡ ಕೆಲಸವೇ ಅಲ್ಲ. ಹಿಂದೆ ಎರಡು ಬಾರಿ ಪಾಕಿಸ್ತಾನ ದೇಶವನ್ನು ಸೋಲಿಸಿರುವ ಭಾರತೀಯ ಸೈನಿಕರಿಗೆ ಮೂರನೇ ಬಾರಿಗೆ ಸೋಲಿಸುವುದು ಕಷ್ಟವೇ ಎಂದಿರುವ ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ, ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ, ಅಮೆರಿಕಾ ಮಧ್ಯಪ್ರವೇಶಿಸಿದ್ದು ಸರಿಯಲ್ಲ ಎಂದಿದ್ದಾರೆ.
ಮAಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಾಕ್ ಕದನ ವಿದಾಮ್ ಉಲ್ಲಂಘನೆ ವಿಚಾರದಲ್ಲಿ ಸರ್ವಪಕ್ಷ ನಿಯೋಗ ಪ್ರಧಾನಿಗಳಿಗೆ ಒತ್ತಾಯ ಮಾಡಿದೆ. ಸೀಸ್ ಫೈರ್ ಮಾಡುವದಾದರೆ ಅಧಿವೇಶ ಕರೆಯಬೇಕು, ಸೀಸ್ ಫೈರ್ ಮಾಡದಿದ್ದರೆ ಅಧಿವೇಶನ ಕರೆಯಬೇಡಿ. ಇಲ್ಲದಿದ್ದರೆ ವಾರ್ ಆದ್ರೂ ಮಾಡಿ ಎಂದರು.
ಯಾವುದೇ ಒಂದು ನಿಷ್ಕರ್ಷಕ್ಕೆ ಬರದೇ, ಬೇರೆ ಯಾರೋ ಹೇಳಿದರೆ ಅದಕ್ಕೊಂದು ಕಂಡಿಷನ್ ಇರಬೇಕು. ಅಮೇರಿಕಾದವರು ಇಂಟರ್ ಫಿಯರ್ ಮಾಡಿದ್ದಾರೆ. ಕಾಶ್ಮೀರ ವಿಷಯ ಇಟ್ಟುಕೊಂಡು ನಿಮ್ಮ ಇಂಟರ್ ಫೈರ್ ಮಾಡುವದಾದರೆ ಸೀಸ್ ಫೈರ್ ಮಾಡಬಾರದಿತ್ತು. ಷರತ್ತು ರಹಿತವಾಗಿದ್ದರೆ ಮಾತ್ರ ಯುದ್ಧ ವಿರಾಮ ಘೋಷಿಸುವ ಮಾತುಕತೆಗೆ ಬರುತ್ತೇವೆ ಎಂದಿದ್ದರೆ ಅದು ಸೂಕ್ತವಾಗಿತ್ತು. ಅದನ್ನೆ ವಿರೋಧ ಪಕ್ಷದವರು, ದೇಶದ ಜನ ಕೇಳುತ್ತಿರುವುದು ಎಂದರು.
ಭಾರತೀಯ ಸೈನಿಕರು ಪಾಕಿಸ್ತಾನವನ್ನು ಎರಡು ಬಾರಿ ಸೋಲಿಸಿದ್ದು, ಮೂರನೇ ಬಾರಿ ಸೋಲಿಸುವದು ಕಷ್ಟದ ಕೆಲಸವಲ್ಲ. ಸರ್ವ ಪಕ್ಷಗಳ ಸಭೆ ಕರೆದಲ್ಲಿ, ಸದರಿ ಸಭೆಯಲ್ಲಿ ಅನೇಕ ವಿಷಯ ಚರ್ಚೆ ಆಗಲಿವೆ. ಆದರೆ ಮೋದಿ ಅವರು ಸಮರ್ಪಕ ಉತ್ತರ ಕೊಟ್ಟರೆ ಎಲ್ಲರೂ ಒಪ್ಪಿಕೊಳ್ಳಬಹುದು, ಇರದಿದ್ದರೆ ವಿಮರ್ಸೆ ಆಗಬಹುದು ಎಂದರು.
ಸೀಸ್ ಫೈರ್ ಮಾಡುವದಾದರೆ ಅಧಿವೇಶನ ಕರೆಯಿರಿ, ಯುದ್ಧ ಮುಂದುವಸಿದರೆ ಸಭೆ ಕರೆಯುವ ಅವಶ್ಯಕತೆ ಇಲ್ಲ ಎಂದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:
Post a Comment