ವಿಜಯಪುರ : ಇತ್ತೀಚ್ಚಗಷ್ಟೆ ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ಎನ್ಸಾಟೋ ರಿ ಕ್ರಿಯೇಷನ್ ಹಬ್ನಲ್ಲಿ ನಡೆದಿರುವ ನವ ಕರ್ನಾಟಕ ಚಲನಚಿತ್ರೋತ್ಸವ ಅಕಾಡೆಮಿ ಹಾಗೂ ಯೂನಿವರ್ಸಲ್ ಫೀಲ್ಮ್ ಕೌನ್ಸಿಲ್ ವತಿಯಿಂದ ಹಮ್ಮಿಕೊಂಡ ಕರ್ನಾಟಕ ಅಂತರಾಷ್ಟಿçÃಯ ಚಲನಚಿತ್ರೋತ್ಸವದಲ್ಲಿ ವಿಜಯಪುರ ಜಿಲ್ಲೆಯ ಯುವ ನಿರ್ದೇಶಕರಾದ ದೇವು.ಕೆ ಅಂಬಿಗ ನಿರ್ದೇಶನದ “ಸೈಕಲ್ ಸವಾರಿ” ಚಲನಚಿತ್ರದ "ಮರೆತು ಹೋಗಲು ಹೇಳು ಕಾರಣ" ಎನ್ನುವ ಗೀತೆಗೆ “ದಿ ಬೆಸ್ಟ್ ಸಾಂಗ್” ಅವಾರ್ಡ ದೊರಕಿದೆ, ರಾಷ್ಟç ಹಾಗೂ ಅಂತರಾಷ್ಟçದಿAದ ಕನ್ನಡ ಭಾಷೆ ಸೇರಿದಂತೆ ಹಲಾವರು ಭಾಷೆಗಳ ಚಲನಚಿತ್ರಗಳು, ಗೀತೆಗಳು, ಕಿರುಚಿತ್ರಗಳು, ಸಾಕ್ಷö್ಯಚಿತ್ರಗಳ ಸ್ಪರ್ದೆಯಲ್ಲಿ, ಸುಮಾರು 150ಕ್ಕೂ ಹೆಚ್ಚು ಚಿತ್ರಗಳು ಕರ್ನಾಟಕ ಅಂತರಾಷ್ಟಿçÃಯ ಚಲನಚಿತ್ರೋತ್ಸವದಲ್ಲಿ ಪೈಪೋಟಿಯಾಗಿದ್ದವು. ನಿದೇಶಕ ಎಂ.ಎ ಮುಮ್ಮಿಗಟ್ಟಿ, ಕನ್ನಡ ಚಲನಚಿತ್ರರಂಗದ ಹಿರಿಯ ಕಲಾವಿದ ಸುಂದರಜ್, ಆಂದ್ರಪ್ರದೇಶ ಫಿಲ್ಮ್ ಚೆಂಬರ್ ಅಧ್ಯಕ್ಷ ಅಂಬಾಟಿ ಮಧು, ಮೋಹನ ಕೃಷ್ಣ, ನಿರ್ಮಾಪಕ ಕಲ್ಮೇಶ ಹಾವೇರಿಪೇಟರವರು "ಸೈಕಲ್ ಸವಾರಿ" ಚಲನಚಿತ್ರದ ನಿರ್ದೇಶಕ ದೇವು.ಕೆ ಅಂಬಿಗ ಹಾಗೂ ತಂಡದಲ್ಲಿದ್ದ ಚಲನಚಿತ್ರ ನಾಯಕಿ ನಟಿ ದೀಕ್ಷಾ ಭೀಸೆ, ವಿನೋದ ರಾಠೋಡ, ಸಚೀನ್ ಹಿಟ್ನಳ್ಳಿ, ರಾಮಚಂದ್ರ ಕಾಂಬಳೆ, ವೆಂಕಟೇಶರವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರರಂಗದ ಹಲವಾರು ಹಿರಿಯ ಹಾಗೂ ಕಿರಿಯ ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ಗೀತ ರಚನೆಕಾರರು, ಉದ್ದಿಮೆದಾರು ಪಾಲ್ಗೂಂಡಿದ್ದರು. ನಿರ್ದೇಶಕ ದೇವು.ಕೆ ಅಂಬಿಗರವರು ಬರುವ 2025 ಮಾರ್ಚ ತಿಂಗಳಲ್ಲಿ "ರಾಜರಾಧೆ" ಹಾಗೂ "ದ ಡೆಡ್ಲಿö ಕ್ಯಾನಿಬಲ್ಸ್ " ಎನ್ನುವ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಲಿದ್ದಾರೆ.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
No comments:
Post a Comment