ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಆವರಣದಲ್ಲಿರುವ ಡಾ.ಫ.ಗು. ಹಳಕಟ್ಟಿ ಇಂಜನೀಯರಿಂಗ್ ಮಹಾವಿದ್ಯಾಲಯದ ಸಭಾಂಗಣದಲ್ಲಿ `ನ್ಯಾವಿಗೇಟಿಂಗ್ ಯೂಥ್ ಟೂವಡ್ರ್ಸ್ ಅಮೃತಕಾಲ : ನಾಲೇಜ್ ಟ್ರಾನ್ಸಫರ್ ಥ್ರೂ ಟೆಕ್ನಾಲಜಿ, ಸ್ಕಿಲ್ ಡೆವಲಪಮೆಂಟ್' ಎಂಬ ವಿಷಯಾಧಾರಿತ ತಾಂತ್ರಿಕ ವಿಚಾರಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಲಿಕೆ ನಿರಂತರವಾದ ಪ್ರಕ್ರಿಯೆ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುವುದು ಸಹ ಅಗತ್ಯವಾಗಿದೆ, ಹೀಗಾಗಿ ಶೈಕ್ಷಣಿಕ ವಲಯದಲ್ಲಿ ನಿತ್ಯ ನೂತನ ಸಂಶೋಧನೆಗಳನ್ನು, ಹೊಸ ಪ್ರಯೋಗಗಳನ್ನು ಪ್ರಾಚಾರ್ಯರು, ಶಿಕ್ಷಕರು ಅಧ್ಯಯಿಸಬೇಕು ಎಂದು ಕರೆ ನೀಡಿದರು.
ವಿಶ್ವವಿದ್ಯಾಲಯದ ಕುಲಸಚಿವೆ ರಾಜಶ್ರೀ ಜೈನಾಪೂರ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಹೆಚ್ಚನ ಅಂಕ ಗಳಿಸುವದಕ್ಕಿಂತಲೂ ತಮ್ಮ ಜೀವನಕ್ಕೆ ಉಪಯುಕ್ತವಾಗುವ ಕೌಶಲಗಳನ್ನು ಕಲಿಯಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಮೊದಲನೇ ಗೋಷ್ಠಿಯನ್ನು ಶ್ರೀನಿವಾಸ ಪಿ, ಅವರು ಜ್ಞಾನ ಪ್ರಸಾರದಲ್ಲಿ ಎ.ಐ. ತಂತ್ರಜ್ಞಾನದ ಪಾತ್ರ ಕುರಿತಾಗಿ, ಎರಡನೇಯ ಗೋಷ್ಠಿಯಲ್ಲಿ ನವದೆಹಲಿಯ ಐಐಟಿಯ ಡಿ.ಎಸ್. ಮಂಜುನಾಥ `ಕೈಗಾರಿಕಾ ವಲಯದ ಆವಿಷ್ಕಾರಗಳ ಕುರಿತಾಗಿ ಹಾಗೂ ಉದ್ಯಮಿ ಸೂರಜ ನಾಡಿಗ ಅವರು ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಬಗೆ ಕುರಿತಾಗಿ ಉಪನ್ಯಾಸ ಮಂಡಿಸಿದರು.
ಉಪ ಕುಲಸಚಿವ ಡಾ.ಡಿ.ಕೆ. ಕಾಂಬಳೆ, ಬಿಎಲ್ಡಿಇ ಸಂಸ್ಥೆಯ ಪ್ರಾಂಶುಪಾಲ ವಿ. ಜಿ ಸಂಗಮ, ಪೆÇ್ರ.ಎಸ್ ಎಂ. ಗಂಗಾಧರಯ್ಯ, ಡಾ.ದಯಾನಂದ ಸಾಹುಕಾರ, ಡಾ.ಪೂರ್ಣಿಮಾ ದ್ಯಾಮಣ್ಣವರ, ಡಾ.ರೂಪಾ ಇಂಗಳೆ, ಕುಮಾರಿ.ವೈಷÀ್ಣವಿ ನಾಗರಾಳ, ಶ್ರೀರಕ್ಷಾ ಕುಲಕರ್ಣಿ ಇದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
No comments:
Post a Comment