ವಿಜಯಪುರ: ಶೈಕ್ಷಣಿಕ, ರಾಜಕೀಯ, ಆರ್ಥಿಕ, ಓದ್ಯೋಗಿಕವಾಗಿ ತೀರಾ ಹಿಂದುಳಿದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ. ದೇವರ ಹಿಪ್ಪರಗಿ ತಾಳಿಕೋಟೆ ಸಿಂದಗಿ ಆಲಮೇಲ ಮುದ್ದೇಬಿಹಾಳ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳು ಅತಿ ಹಿಂದುಳಿದಿದ್ದು ಕೂಡಲೇ ವಿಜಯಪುರ ಜಿಲ್ಲೆಯನ್ನು ಕಲ್ಯಾಣ ಕರ್ನಾಟಕ(371 ಜೆ) ವ್ಯಾಪ್ತಿಗೆ ಸೇರಿಸಿ ಅಭಿವೃದ್ಧಿಪಡಿಸಬೇಕೆಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಬಿರಾದಾರ ಸರ್ಕಾರವನ್ನು ಆಗ್ರಹಿಸಿದ್ದಾರೆ ಈ ಹಿಂದೆ ಕೂಡ ಹೈದರಾಬಾದ್ ಕರ್ನಾಟಕ 371ಜೆ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು ಎಂದು ಸಾಕಷ್ಟು ಹೋರಾಟವನ್ನು ಮಾಡಿದ್ದೆವು ಆದರೆ ಕೆಲವು ಪಟ್ಟಭದ್ರ ರಾಜಕೀಯ ವ್ಯಕ್ತಿಗಳಿಂದ ವಿಜಯಪುರ ಜಿಲ್ಲೆಗೆ ಅನ್ಯಾಯವಾಯಿತು, ಇದೀಗ ಕಾಲ ಮಿಂಚಿಲ್ಲ ಸತತ ಬರಗಾಲ, ಬೆಳೆ ಹಾನಿ ನಿರುದ್ಯೋಗ, ಸರ್ಕಾರದ ಯಾವುದೇ ರೀತಿಯ ಮೀಸಲಾತಿ ಇಲ್ಲದೆ ನಮ್ಮ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ ನಮ್ಮ ಜಿಲ್ಲೆಯ ರೈತರು ಸದಾ ಒಂದಲ್ಲ ಒಂದು ರೀತಿಯಲ್ಲಿ ಬರಗಾಲಕ್ಕೆ ತುತ್ತಾಗಿ ಈ ಭಾಗದ ಬಹುತೇಕ ರೈತರು ಕೃಷಿ ಕಾರ್ಮಿಕರು ಗೋವಾ ಮಹಾರಾಷ್ಟ್ರ ಸೇರಿದಂತೆ ಇತೆರೆ ರಾಜ್ಯಗಳಿಗೆ ದುಡಿಯಲು ಗುಳೇ ಹೋಗಿ ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಅದರಲ್ಲೂ ವಿಶೇಷವಾಗಿ ಅಖಂಡ ಬಸವನಬಾಗೇವಾಡಿ ತಾಲೂಕಿಗೆ ಎಲ್ಲ ಸರ್ಕಾರಗಳು ಬಹಳಷ್ಟು ಮೋಸ ಮಾಡುತ್ತಾ ಬಂದಿವೆ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಆಲಮಟ್ಟಿ ಅಣೆಕಟ್ಟೆ ಕಟ್ಟಲು ಈ ಭಾಗದ ರೈತರು ಬಹಳಷ್ಟು ಭೂಮಿಯನ್ನು ಕಳೆದುಕೊಂಡಿದ್ದಾರೆ ಆದರೆ ಇಲ್ಲಿವರೆಗೂ ಕೂಡ ರೈತರ ಹೊಲಗಳಿಗೆ ಪೂರ್ಣ ಪ್ರಮಾಣದ ನೀರಾವರಿ ಯೋಜನೆಗಳು ತಲುಪದೇ ಇರುವುದು ನಮ್ಮ ಭಾಗದ ಜನರ ದುರಾದೃಷ್ಟಕರ ವಿಶ್ವಗುರು ಬಸವಣ್ಣನವರು ಜನಿಸಿದ ಬಸವನ ಬಾಗೇವಾಡಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬಸವ ಜನ್ಮಸ್ಥಳ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಬೇಕೆಂದು ದಶಕಗಳಿಂದ ಹೋರಾಟ ನಡೆದರೂ ಕೂಡ ಯಾವುದೇ ಸರಕಾರ ಮುತುವರ್ಜಿ ವಹಿಸುತ್ತಿಲ್ಲ ಹೈದರಾಬಾದ್ ನಿಜಾಮನ ಆಳ್ವಿಕೆಯಿಂದ ಮುಕ್ತಿಗೊಂಡು ಮುಂಬೈ ಕರ್ನಾಟಕಕ್ಕೆ ಒಳಗೊಂಡು ವಿಜಯಪುರ ಜಿಲ್ಲೆ ಇಂದಿನವರೆಗೆ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ ಜಿಲ್ಲೆಯ ಗಡಿ ಭಾಗದಲ್ಲಿರುವ ಅನೇಕ ತಾಲೂಕುಗಳು ಕೂಡಾ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿವೆ ಇಂಡಿ ಪಟ್ಟಣಕ್ಕೆ ಹೋಗುವ ಒಂದು ರಸ್ತೆ ಕೂಡ ಗುಣಮಟ್ಟದ ಇಲ್ಲದೆ ಇರುವುದು ಇದಕ್ಕೆ ಸಾಕ್ಷಿ ಆಗಿದೆ ನಮ್ಮ ಜಿಲ್ಲೆಯಲ್ಲಿ ರೈಲ್ವೆ ಯೋಜನೆಗಳಿಂದ ಕೂಡ ನಾವು ಬಹಳಷ್ಟು ಹಿಂದುಳಿದಿದ್ದೇವೆ ನಮ್ಮ ಜಿಲ್ಲೆ ಈಗಾಗಲೇ ತಾಂತ್ರಿಕವಾಗಿ ಹೈದರಾಬಾದ್ ಕರ್ನಾಟಕ ವ್ಯಾಪ್ತಿಯಲ್ಲಿದೆ ಉದಾಹರಣೆಗೆ ನಮ್ಮ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆ ಹಾಗೂ ಉಚ್ಚ ನ್ಯಾಯಾಲಯ ಕಲ್ಬುರ್ಗಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತೇವೆ ಕೂಡಲೇ ನಮ್ಮ ಜಿಲ್ಲೆಯ, ಸಚಿವರು, ಎಲ್ಲ ಶಾಸಕರು ಸಂಸದರು ಸೇರಿ ವಿಜಯಪುರ ಜಿಲ್ಲೆಯನ್ನು ಹೈದರಾಬಾದ್ ಕರ್ನಾಟಕ(371ಜೆ)ವ್ಯಾಪ್ತಿಗೆ ಸೇರ್ಪಡೆ ಮಾಡಿ ಇಲ್ಲವೇ ವಿಜಯಪುರ ಜಿಲ್ಲೆಗೆ ಶೈಕ್ಷಣಿಕ ಔದ್ಯೋಗಿಕ ಸಾಮಾಜಿಕ ರಾಜಕೀಯ ವಿಶೇಷ ಮೀಸಲಾತಿಯನ್ನು ಕಲ್ಪಿಸಲು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ನಮ್ಮ ಜಿಲ್ಲೆಯ ಶಾಸಕರು ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ್ದಾರೆ
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು.
No comments:
Post a Comment