ಈ ದಿವಸ ವಾರ್ತೆ
ವಿಜಯಪುರ: ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ನವ ವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನಲ್ಲಿ ಇತ್ತೀಚೆಗೆ ನಡೆದಿದೆ. ಚಡಚಣ ತಾಲೂಕಿನ ನಾಕಿಮಂದಿ ಓಣಿಯ ಚೈತ್ರಾ ಮಲ್ಲಿಕಾರ್ಜುನ ನಾವಿ (23) ಮೃತ ಮಹಿಳೆ ಎಂದು ಗುರುತಿಸಲಾಗಿದೆ.
6 ತಿಂಗಳ ಹಿಂದೆ ಚಡಚಣ ತಾಲೂಕಿನ ನಿವಾಸಿ ಮಲ್ಲಿಕಾರ್ಜುನ ಜೊತೆ ವಿವಾಹವಾಗಿತ್ತು.
ಮೃತ ಚೈತ್ರಾಳ ಪತಿ ಮಲ್ಲಿಕಾರ್ಜುನ ನಾವಿ, ಮಾವ ಶಿವಪ್ಪ ನಾವಿ ಹಾಗೂ ಅತ್ತೆ ಅಂಬವ್ವ ನಾವಿ ಮೂವರು ಸೇರಿ ವರದಕ್ಷಿಣೆ ತರುವಂತೆ ಮಗಳಿಗೆ ಕಿರುಕುಳ ನೀಡುತ್ತಿದ್ದರು.
ಗಂಡನ ಮನೆಯವರ ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ಬೇಸತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಚೈತ್ರಾಳ ತಂದೆ ಅಶೋಕ ಹಡಪದ ನೀಡಿದ ದೂರಿನ ಮೇರೆಗೆ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment