ವಿಜಯಪುರ : ವಿಜಯಪುರದ ದಿವಟಗೇರಿಗಲ್ಲಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಸನ್ನಿಧಾನದಲ್ಲಿ ಶ್ರೀ ರಾಘವೇಂದ್ರ ಮಹಾಸ್ವಾಮಿಗಳ ಆರಾಧಾನಾ ಮಹೋತ್ಸವ ಪ್ರಯುಕ್ತ ಉತ್ತರಾರಾಧನೆ ಭಕ್ತಿಪರ್ವಕವಾಗಿ ನಡೆಯಿತು.
ಕರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಸುಪ್ರಭಾತ ಆರಂಭವಾಯಿತು, ನಂತರ ರಥಾಂಗಹವನ, ಶ್ರೀ ಹರಿ ವಾಯುಸ್ತುತಿ ಪುನಶ್ಚರಣ, ಸಪ್ತಕಹವನ, ಶ್ರೀ ಗುರು ಸ್ತೊçÃತ್ರ ಅಷ್ಟೋತ್ತರ ಶತ:ಪಠಣ ಪರ್ವಕ ಭಕ್ತಿಭಾವದಿಂದ ನಡೆಯಿತು.
ನಂತರ ಶ್ರೀ ಗುರುಸಾರ್ವಭೌಮರಿಗೆ ಕ್ಷೀರಾಭಿಷೇಕ, ಮಹಾ ಪಂಚಾಮೃತ ಅಭೀಷೇಕ ಸಲ್ಲಿಸಲಾಯಿತು. ಪಲ್ಲಕ್ಕಿ ಸೇವೆ, ರಜತ ರಥೋತ್ಸವ ವೈಭವದಿಂದ ನಡೆಯಿತು. ನಂತರ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ಮಂತ್ರಪುಷ್ಪ, ಸ್ವಸ್ತಿವಾಚನ, ಶ್ರೇಯ: ಪ್ರರ್ಥನೆ ನೆರವೇರಿತು. ನಂತರ ಮಹಾಪೂಜೆ, ನೈವೇದ್ಯ ಸರ್ಪಣೆ ಹಾಗೂ ಮಹಾಮಂಗಳಾರತಿ ನಡೆಯಿತು.
ಪ್ರಕಾಶ್ ಅಕ್ಕಲಕೋಟ, ಅಪ್ಪಣ್ಣಾಚಾರ್ಯ, ಡಿ.ಜಿ. ಹರಿದಾಸ್, ನಾರಾಯಣ ಕುಲಕರ್ಣಿ, ವೆಂಕಟೇಶ್ ಖಾಸನಿಸ್, ಗೋವಿಂದರಾಜ ದೇಶಪಾಂಡೆ ,ವಿಜಯ ಜೋಶಿ ವಿಕಾಸ್ ಪದಕಿ, ರಾಕೇಶ್ ಕುಲಕರ್ಣಿ, ಶ್ರೀಹರಿ ಕುಲಕರ್ಣಿ, ವೆಂಕಟೇಶ್ ಗುಡಿ, ಉಮೇಶ ಕುಲಕರ್ಣಿ ಪಾಲ್ಗೊಂಡಿದ್ದರು.
No comments:
Post a Comment