Saturday, August 26, 2023

ರಾಷ್ಟ್ರದ ಒಗ್ಗಟ್ಟಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶಿಸ್ತಿನ ಸೇನಾಪತಿ ಡಾ.ನಾ.ಸು.ಹಡೀ೯ಕರ್

 ಈ‌‌ ದಿವಸ ವಾರ್ತೆ

ವಿಜಯಪುರ - ಭಾರತದ ಇತಿಹಾಸ ಪುಟಗಳಲ್ಲಿ  ಸ್ವಾತಂತ್ರ್ಯದ ಕ್ರಾಂತಿ ಕಹಳೆ ಊದಿದ  ಭಾರತ ಸೇವಾದಳ ಸಂಸ್ಥಾಪಕರಾದ ಡಾ|| ನಾರಾಯಣ ಸುಬ್ಬರಾವ್ ಹಡಿ೯ಕರ್ ಅವರು  ಮೇ 7, 1889 ರಂದು ಆಗಿನ ಧಾರವಾಡ ಜಿಲ್ಲೆ (ಈಗಿನ ಹಾವೇರಿ ಜಿಲ್ಲೆ) ಹಾನಗಲ್ ತಾಲೂಕಿನ ತಿಳುವಳ್ಳಿ ಗ್ರಾಮದಲ್ಲಿ ಜನಿಸಿದರು. ಶಿಸ್ತು,ಸಂಯಮ,ಸಂಘಟನೆ ಹಾಗೂ ಸಂಸ್ಕೃತಿಗಳ ವಿಚಾರಶೀಲರಾಗಿದ್ದ ಡಾ|| ಹಡಿ೯ಕರ್ ಅವರು ರಾಷ್ಟ್ರದ ಒಗ್ಗಟ್ಟಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ಧರು.ಅವರ ಆದಶ೯ ಜೀವನವು ನಮ್ಮ ನಾಡಿಗೆ ಅದರಲ್ಲೂ ಇಂದಿನ ಯುವಜನಾಂಗಕ್ಕೆ ದಾರಿ ದೀಪವಾಗಿದೆ ಎಂದು ಭಾರತ ಸೇವಾದಳದ ಜಿಲ್ಲಾ ಅಧ್ಯಕ್ಷ ಎಸ್ ಪಿ ಬಿರಾದಾರ (ಕಡ್ಲೇವಾಡ) ಹೇಳಿದರು.              ಭಾರತ ಸೇವಾದಳ ಜಿಲ್ಲಾ ಸಮಿತಿ ವಿಜಯಪುರ ಹಾಗೂ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ನಂ - ೨೪ ಇವರುಗಳ ಸಹಯೋಗದಲ್ಲಿ ಆಯೋಜಿಸಲಾದ ಭಾರತ ಸೇವಾದಳ ಸಂಸ್ಥಾಪಕ ಪದ್ಮಭೂಷಣ ಡಾ|| ನಾ,ಸು, ಹಡೀ೯ಕರ ಅವರ ೪೮ ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ನಾ,ಸು, ಹಡೀ೯ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.                     ನಾ,ಸು, ಹಡೀ೯ಕರ ಅವರು ವೃತ್ತಿಯಲ್ಲಿ ವೈದ್ಯರಾಗಿರುವ ಕಾರಣ ತಮ್ಮ ಕೊನೆಯ ದಿನಗಳನ್ನು ಬೆಳಗಾವಿ ಜಿಲ್ಲೆಯ ಘಟಪ್ರಭಾದ ಆರೋಗ್ಯ ಧಾಮದಲ್ಲಿ ಬಡ ರೋಗಿಗಳ ಸೇವೆ ಮಾಡುತ್ತಾ 1975 ಅಗಸ್ಟ್ 26 ರಂದು ಕೊನೆಯುಸಿರೆಳೆದರು. ಅವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯೋಣ ಎಂದರು.         

                                 

 ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ ಪ್ರಾಸ್ತಾವಿಕವಾಗಿ ಮಾತನಾಡಿ ನಾ,ಸು ಹಡೀ೯ಕರ ಅವರ ಸಂಘಟನಾ ಚಾತುರ್ಯ ಮತ್ತು ಅವರ ತತ್ವ ಸಿದ್ಧಾಂತಗಳನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ ಸೇವಾದಳದ ಜಿಲ್ಲಾ ಕಾಯ೯ದಶಿ೯ ಎಸ್ ಜಿ ಕೋರಿ, ಜಿಲ್ಲಾ ಕೋಶಾಧ್ಯಕ್ಷ ಡಿ ಬಿ ಹಿರೇಕುರುಬರ, ತಾಲೂಕು ಉಪಾಧ್ಯಕ್ಷ ರಾಜು ಹಿಪ್ಪರಗಿ, ಕೋಶಾಧ್ಯಕ್ಷ ಬಸವರಾಜ ಜೋರಾಪೂರ, ಸದಸ್ಯರಾದ ಡಾ, ಹೆಚ್ ಎಮ್ ಮುಜಾವರ, ತಾಲೂಕು ಕಾರ್ಯದರ್ಶಿ ಎಸ್ ಎಸ್ ಬ್ಯಾಕೋಡ, ಸಂಪನ್ಮೂಲ ಶಿಕ್ಷಕ ಸೋಮಶೇಖರ್ ರಾಠೋಡ ಶಾಲಾ ಮುಖ್ಯ ಗುರುಗಳಾದ ವಿ ಎಸ್ ಹಾಲವರ ಹಾಗೂ ಸೇವಾದಳ ಮಕ್ಕಳು ಉಪಸ್ಥಿತರಿದ್ದರು.

No comments:

Post a Comment