Tuesday, August 15, 2023

ಪತ್ರಕರ್ತರ ಸಂಘದಲ್ಲಿ ಧ್ವಜಾರೋಹಣ


 ಈ ದಿವಸ ವಾರ್ತೆ

ವಿಜಯಪುರ : ನಗರದ ಜಿಪಂ ರಸ್ತೆಯಲ್ಲಿರುವ ಹೊಸ ಪತ್ರಿಕಾ ಭವನ ಹಾಗೂ ಹಳೆ ತಹಸೀಲ್ದಾರ್ ಕಚೇರಿ ಬಳಿಯಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯ ಆವರಣದಲ್ಲಿ ಸ್ವಾತಂತ್ರ್ಯೋತ್ಸವ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಹಾಗೂ ನಿವೃತ್ತ ವಾರ್ತಾಧಿಕಾರಿ ಪಿ.ಎಸ್. ಹಿರೇಮಠ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಬಳಿಕ ಸಾಮೂಹಿಕ ರಾಷ್ಟ್ರಗೀತೆಯೊಂದಿಗೆ ರಾಷ್ಟ್ರಧ್ವಜಕ್ಕೆ ಗೌರವ ಸಲಿಸಲಾಯಿತು.  

ಉಪಾಧ್ಯಕ್ಷ ಫಿರೋಜ್ ರೋಜಿನದಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಕಾರ್ಯದರ್ಶಿ ಅವಿನಾಶ ಬಿದರಿ, ಖಜಾಂಚಿ ರಾಹುಲ್ ಆಪ್ಟೆ, ಕಾರ್ಯಕಾರಿಣಿ ಸದಸ್ಯ ಸಮೀರ ಇನಾಂದಾರ, ನಾಮನಿರ್ದೇಶನ ಸದಸ್ಯೆ ಕೌಶಲ್ಯ ಪನಾಳಕರ, ಪತ್ರಕರ್ತರಾದ ಸೀತಾರಾಮ ಕುಲಕರ್ಣಿ, ಶಶಿಕಾಂತ ಮೆಂಡೇಗಾರ, ಬಸವರಾಜ ಕುಂಬಾರ, ದೇವೇಂದ್ರ ಹೆಳವರ, ಸುಮೀತರಾಜಕುಮಾರ ಶಿವಶರಣ,ಕಲ್ಲಪ್ಪ ಶಿವಶರಣ, ಲಾಯಪ್ಪ ಇಂಗಳೆ, ಎಸ್.ಬಿ. ಪಾಟೀಲ್, ಬಾಲು ಸಾರವಾಡ, ನಾಗರಾಜ ಚೋಳಕೆ, ಕೆ.ಕೆ. ಬನ್ನಟ್ಟಿ, ಜಿ.ಬಿ. ಲೋಕುರಿ, ಮಲಕಪ್ಪ ಹೂಗಾರ, ಶಿವಕುಮಾರ ಉಪ್ಪಿನ, ವಿಠ್ಠಲ ಲಂಗೋಟಿ, ಇಸ್ಮಾಯಿಲ್ ಮುಲ್ಲಾ, ಅಲ್ತಾಫ ಯಂಬತ್ನಾಳ,  ಮತ್ತಿತರರಿದ್ದರು.

No comments:

Post a Comment