ಲೇಖಕಿ ಹೇಮಾ ವಸ್ತ್ರದ
ಈ ದಿವಸ ವಾರ್ತೆ
ವಿಜಯಪುರ: ಕರ್ನಾಟಕ ಲೇಖಕಿಯರ ಸಂಘದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಲೇಖಕಿ ಹೇಮಾ ವಸ್ತ್ರದ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ರಚನೆ ಮಾಡಲಾಯಿತು. ಅಧ್ಯಕ್ಷರನ್ನಾಗಿ ಹೇಮಾ ವಸ್ತ್ರದ, ಉಪಾಧ್ಯಕ್ಷರಾಗಿ ವನಮಾಲಾ ರಾಠೋಡ, ಪ್ರಧಾನ ಕಾರ್ಯದರ್ಶಿ ಡಾ.ಸುಜಾತಾ ಚಲವಾದಿ, ಖಜಾಂಚಿಯಾಗಿ ದಾಕ್ಷಾಯಣಿ ಬಿರಾದಾರ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಲೇಖಕಿ ಡಾ. ಎಚ್ ಎಲ್ ಪುಷ್ಪಾ ಅವರು ಇದಕ್ಕೆ ಅನುಮೋದಿಸಿ ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರಭಾವತಿ ದೇಸಾಯಿ, ಭಾರತಿ ಪಾಟೀಲ, ಇಂದುಮತಿ ಲಮಾಣಿ, ಕೆ ಸುನಂದಾ, ಶೋಭಾ ಗುನ್ನಾಪುರ ಇತ್ಯಾದಿ ಹಿರಿಯ ಲೇಖಕಿಯರಾದಿಯಾಗಿ ಕಲೇಸಂ ನ ಸರ್ವ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.
No comments:
Post a Comment